“ಸೂರ್ಯ ಉದಯಿಸುವುದು ತನ್ನದೇ ಸಮಯದಲ್ಲಿ...”- ಸರ್ಫರಾಜ್ ಖಾನ್ ತಂದೆಯ ಭಾವನಾತ್ಮಕ ಹೇಳಿಕೆ

Sarfaraz Khan Father Statement: ಶ್ರೇಷ್ಠ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರಿಂದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಸರ್ಫರಾಜ್ 'ಕ್ಯಾಪ್' ಸ್ವೀಕರಿಸಿದಾಗ ಸರ್ಫರಾಜ್ ಅವರ ತಂದೆ ನೌಶಾದ್ ಖಾನ್ ಕಣ್ತುಂಬಿ ಬಂದಿದ್ದು ಸುಳ್ಳಲ್ಲ.

Written by - Bhavishya Shetty | Last Updated : Feb 16, 2024, 02:42 PM IST
    • ಮೂರನೇ ಟೆಸ್ಟ್ ಪಂದ್ಯದಲ್ಲಿ ಸರ್ಫರಾಜ್ ಖಾನ್ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ
    • ಫೆಬ್ರವರಿ 15ರಂದು ರಾಜ್ ಕೋಟ್’ನಲ್ಲಿ ಪ್ರಾರಂಭವಾದ ಮೂರನೇ ಟೆಸ್ಟ್ ಪಂದ್ಯ
    • ಅನಿಲ್ ಕುಂಬ್ಳೆ ಅವರಿಂದ 'ಕ್ಯಾಪ್' ಸ್ವೀಕರಿಸಿದ ಸರ್ಫರಾಜ್
“ಸೂರ್ಯ ಉದಯಿಸುವುದು ತನ್ನದೇ ಸಮಯದಲ್ಲಿ...”- ಸರ್ಫರಾಜ್ ಖಾನ್ ತಂದೆಯ ಭಾವನಾತ್ಮಕ ಹೇಳಿಕೆ  title=
sarfaraz khan

Sarfaraz Khan Father Statement: ದೇಶೀಯ ಕ್ರಿಕೆಟ್‌’ನಲ್ಲಿ ಸಾಕಷ್ಟು ರನ್ ಗಳಿಸಿದ್ದರೂ ಟೀಂ ಇಂಡಿಯಾದಲ್ಲಿ ಭದ್ರ ಸ್ಥಾನ ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದರು. ಆದರೂ ಛಲ ಬಿಡದೆ ಹೋರಾಟ ನಡೆಸಿ ಕಡೆಗೂ ಭಾರತ ಟೆಸ್ಟ್ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದುಕೊಂಡರು ಸರ್ಫರಾಜ್. ಈ ಎಲ್ಲಾ ಸಂದರ್ಭಗಳಲ್ಲೂ ಅವರಿಗೆ ಬೆನ್ನೆಲುಬಾಗಿ ನಿಂತವರು ಅವರ ತಂದೆ.

ಇದನ್ನೂ ಓದಿ: Karnataka Budget 2024: ಜಲಸಂಪನ್ಮೂಲ ಇಲಾಖೆಗೆ ವಿಶೇಷ ಆದ್ಯತೆ-ಮೇಕೆದಾಟು ಯೋಜನೆಯ ಅನುಷ್ಠಾನಕ್ಕೆ ಪ್ರತ್ಯೇಕ ಯೋಜನಾ ವಿಭಾಗ

ಕಳೆದ ದಿನ ಅಂದರೆ ಫೆಬ್ರವರಿ 15ರಂದು ರಾಜ್ ಕೋಟ್’ನಲ್ಲಿ ಪ್ರಾರಂಭವಾದ ಮೂರನೇ ಟೆಸ್ಟ್ ಪಂದ್ಯದಲ್ಲಿ ಸರ್ಫರಾಜ್ ಖಾನ್ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಸ್ಟೇಡಿಯಂಗೆ ಆಗಮಿಸಿದ್ದ ಅವರ ತಂದೆ ಕಣ್ಣಲ್ಲಿ ಆನಂದಭಾಷ್ಪ ಹರಿದಿತ್ತು.

ಶ್ರೇಷ್ಠ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರಿಂದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಸರ್ಫರಾಜ್ 'ಕ್ಯಾಪ್' ಸ್ವೀಕರಿಸಿದಾಗ ಸರ್ಫರಾಜ್ ಅವರ ತಂದೆ ನೌಶಾದ್ ಖಾನ್ ಕಣ್ತುಂಬಿ ಬಂದಿದ್ದು ಸುಳ್ಳಲ್ಲ.

ಸರ್ಫರಾಜ್ ಖಾನ್ ಅವರ ತಂದೆ ನೌಶಾದ್ ಖಾನ್ ಮಾತನಾಡಿ, “ಸರ್ಫರಾಜ್ ಯಾವಾಗಲೂ ಭರವಸೆಯ ಕಿರಣವನ್ನು ಹೊಂದಿರುತ್ತಿದ್ದ. ಮೊದಲು ನಾನು ಸರ್ಫರಾಜ್‌ ಇಷ್ಟೊಂದು ಕಷ್ಟಪಟ್ಟು ಕೆಲಸ ಮಾಡಿದರೂ ಸಹ, ಕನಸು ಏಕೆ ನನಸಾಗುವುದಿಲ್ಲ ಎಂದು ಯೋಚಿಸುತ್ತಿದ್ದೆ. ಆದರೆ ಟೆಸ್ಟ್ ಕ್ಯಾಪ್ ಪಡೆದ ನಂತರ, ಕಷ್ಟಪಟ್ಟು ದುಡಿಯುವ ಎಲ್ಲಾ ಮಕ್ಕಳ ವಿಚಾರದಲ್ಲಿ ನನ್ನ ಆಲೋಚನೆಗಳು ಬದಲಾಗಿವೆ. ಸೂರ್ಯ ತನ್ನದೇ ಆದ ಸಮಯಕ್ಕೆ ಉದಯಿಸುತ್ತಾನೆ' ಎಂದು ಹೇಳಿದ್ದಾರೆ.

ಇದನ್ನೂ ಓದಿ: Karnataka Budget 2024: ರಾಜ್ಯ ಬಜೆಟ್ ಲೆಕ್ಕಾಚಾರದಲ್ಲಿ ಬಂದರು ಮತ್ತು ಒಳನಾಡು ಜಲಸಾರಿಗೆ ಸಿಕ್ಕ ಪಾಲು ಎಷ್ಟು?

ಸರ್ಫರಾಜ್ ಖಾನ್ ಕೂಡ ಪದಾರ್ಪಣೆ ಮಾಡಿದ ಪಂದ್ಯದಲ್ಲೇ 66 ಎಸೆತಗಳಲ್ಲಿ 62 ರನ್ ಗಳಿಸಿದರು. ಆದರೆ ತಪ್ಪಿನಿಂದಾಗಿ ರನೌಟ್ ಆದರು. ಸರ್ಫರಾಜ್ ಖಾನ್ ವರ್ಷದಿಂದ ವರ್ಷಕ್ಕೆ ದೇಶೀಯ ಕ್ರಿಕೆಟ್‌’ನಲ್ಲಿ ಸಾಕಷ್ಟು ರನ್ ಗಳಿಸುತ್ತಾ, ತನ್ನ ಇರುವಿಕೆಯನ್ನು ತೋರಿಸುತ್ತಲೇ ಬಂದಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News