IPL 2024: ಅರ್ಧಶತಕ ಸಿಡಿಸಿದ್ರೂ RCB ಗೆಲುವಿನ ರುವಾರಿ ಕೊಹ್ಲಿಯಲ್ಲ.. ಈತನಿಗೆ ಸಲ್ಲಬೇಕು ವಿಜಯದ ಸಂಪೂರ್ಣ ಕ್ರೆಡಿಟ್!

Dinesh Karthik Match Finish: ತವರಿನಲ್ಲಿ ಅದ್ಭುತ ಪ್ರದರ್ಶನ ನೀಡಿದ ಆರ್ ಸಿ ಬಿ ಗೆಲುವಿನ ಖಾತೆ ತೆರೆದಿದೆ. ಆದರೆ ಇಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್ ಮತ್ತು ಎಂ ಲೊಮ್ರೋರ್ ಹೊರತುಪಡಿಸಿ ಉಳಿದ ಆಟಗಾರರ ಪ್ರದರ್ಶನ ಕಳಪೆಯಾಗಿತ್ತು.

Written by - Bhavishya Shetty | Last Updated : Mar 25, 2024, 11:37 PM IST
    • ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವೆ ಪಂದ್ಯ
    • ತವರಿನಲ್ಲಿ ಅದ್ಭುತ ಪ್ರದರ್ಶನ ನೀಡಿದ ಆರ್ ಸಿ ಬಿ ಗೆಲುವಿನ ಖಾತೆ ತೆರೆದಿದೆ
    • ಅಂತಿಮವಾಗಿ ಕಣಕ್ಕಿಳಿದ ದಿನೇಶ್ ಕಾರ್ತಿಕ್ ಮತ್ತೆ ಗೆಲುವಿನ ರುವಾರಿ ಎನಿಸಿಕೊಂಡರು
IPL 2024: ಅರ್ಧಶತಕ ಸಿಡಿಸಿದ್ರೂ RCB ಗೆಲುವಿನ ರುವಾರಿ ಕೊಹ್ಲಿಯಲ್ಲ.. ಈತನಿಗೆ ಸಲ್ಲಬೇಕು ವಿಜಯದ ಸಂಪೂರ್ಣ ಕ್ರೆಡಿಟ್! title=
Royal Challengers Bengaluru

Dinesh Karthik Match Finish: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವೆ ಪಂದ್ಯ ನಡೆದಿದೆ. ಈ ಪಂದ್ಯದಲ್ಲಿ ಆರ್ ಸಿಬಿ ಗೆಲುವಿನ ನಗೆ ಬೀರಿದೆ. ಒಂದು ಹಂತದಲ್ಲಿ ಆಟ ಮುಗಿದೇ ಹೋಯಿತು, ಆರ್ ಸಿ ಬಿಗೆ ಮತ್ತೆ ಸೋಲು ಖಚಿತ ಅಂದುಕೊಂಡಾಗ, ವಿರಾಟ್ ಕೊಹ್ಲಿ ಆಟ ಭರವಸೆ ನೀಡಿತ್ತು. ಆದರೆ ಇವರ ನಿರ್ಗಮನ ಬಳಿಕ ಬ್ಯಾಕ್ ಟು ಬ್ಯಾಕ್ ಉರುಳಿತ್ತು.

ಇದನ್ನೂ ಓದಿ: ಪ್ರೇಯಸಿಯ ಮರಣ… ಬಳಿಕ ನಟಿಯ ಜೊತೆ ಡೇಟ್! ಕೊನೆಗೆ ಕಾಲೇಜ್ ವಿದ್ಯಾರ್ಥಿನಿ ಜೊತೆ ರಹಸ್ಯ ಮದುವೆಯಾದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗನೀತ!

ತವರಿನಲ್ಲಿ ಅದ್ಭುತ ಪ್ರದರ್ಶನ ನೀಡಿದ ಆರ್ ಸಿ ಬಿ ಗೆಲುವಿನ ಖಾತೆ ತೆರೆದಿದೆ. ಆದರೆ ಇಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್ ಮತ್ತು ಎಂ ಲೊಮ್ರೋರ್ ಹೊರತುಪಡಿಸಿ ಉಳಿದ ಆಟಗಾರರ ಪ್ರದರ್ಶನ ಕಳಪೆಯಾಗಿತ್ತು. ಅಷ್ಟದೆ ಒಂದಂಕಿ ದಾಟಲು ಕೂಡ ಸಾಧ್ಯವಾಗಲಿಲ್ಲ.

ಪಂದ್ಯ ಅರ್ಧಕ್ಕೆ ಬಂದು ತಲುಪಿದಂತೆ ವಿರಾಟ್ ನಿರ್ಗಮಿಸಿದರು. ಆದರೆ ತಂಡಕ್ಕೆ ಬಲಿಷ್ಟ ಸ್ಕೋರ್ ಕಲೆಹಾಕಲು ಅದರಲ್ಲೂ ಗುರಿ ತಲುಪಲು ಸಹಾಯ ಮಾಡಿದ್ದು ಕೊಹ್ಲಿ ಭರ್ಜರಿ 77 ರನ್’ಗಳ ಆಟ. ಆದರೆ ಇವರ ವಿಕೆಟ್ ಪತನದ ಬಳಿಕ ಬೆಂಗಳೂರು ತಂಡದಲ್ಲಿ ಮೌನ ಆವರಿಸಿತ್ತು.

ಅಂತಿಮವಾಗಿ ಕಣಕ್ಕಿಳಿದ ದಿನೇಶ್ ಕಾರ್ತಿಕ್ ಮತ್ತೆ ಗೆಲುವಿನ ರುವಾರಿ ಎನಿಸಿಕೊಂಡರು. ಆರ್ ಸಿ ಬಿ ತಂಡದ ಬೆಸ್ಟ್ ಮ್ಯಾಚ್ ಫಿನಿಶರ್ ಎಂದರೆ ಅದು ದಿನೇಶ್ ಕಾರ್ತಿಕ್. ಇಂದಿನ ಆಟದ ವೈಖರಿ ನೋಡಿದರೆ ಮತ್ತೆ ಆ ಮಾತು ನಿಜವೆಂದು ಸಾಬೀತಾಗಿದೆ.

ಇದನ್ನೂ ಓದಿ: Guru Budh Yuti: 15 ದಿನಗಳವರೆಗೆ ಈ ಜನರ ಮೇಲೆ ಅಪಾರ ಧನ-ಸಂಪತ್ತು ಕರುಣಿಸಲಿದ್ದಾರೆ ದೇವಗುರು ಬೃಹಸ್ಪತಿ ಮತ್ತು ಬುಧ!

ಅಂತಿಮ ಓವರ್’ನಲ್ಲಿ ಬೌಂಡರಿ ಬಾರಿಸಿದ ದಿನೇಶ್ ಕಾರ್ತಿಕ್, ಗೆಲುವಿನ ಕಾರಣಕರ್ತ ಎನಿಸಿಕೊಂಡಿದ್ದ ಸುಳ್ಳಲ್ಲ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News