ಭಾರತದ ಟಿ20 ಕ್ರಿಕೆಟ್’ಗೆ ಸಿಕ್ಕಾಯ್ತು ಪರ್ಫೆಕ್ಟ್ ಮ್ಯಾಚ್ ವಿನ್ನರ್! ಈತ ಎಂಟ್ರಿಯಾಗ್ತಿದ್ದಂತೆ ಸಿಕ್ಸರ್ ಸುರಿಮಳೆ ಗ್ಯಾರಂಟಿ

IND vs AUS T20 Series: ಭಾರತದ ಬೌಲಿಂಗ್ ಕಳಪೆಯಾಗಿದ್ದರೂ ಬ್ಯಾಟಿಂಗ್’ನಲ್ಲಿ ಪ್ರಾಬಲ್ಯ ಸಾಧಿಸಿತ್ತು. ಮುಖ್ಯವಾಗಿ ತಂಡದ ನಾಯಕತ್ವ ವಹಿಸಿದ್ದ ಸೂರ್ಯಕುಮಾರ್ ಯಾದವ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದು ತಂಡದ ಗೆಲುವಿನ ಪ್ರಮುಖ ರುವಾರಿ ಎನಿಸಿಕೊಂಡರು.

Written by - Bhavishya Shetty | Last Updated : Nov 23, 2023, 10:58 PM IST
    • ಭಾರತದ ಬೌಲಿಂಗ್ ಕಳಪೆಯಾಗಿದ್ದರೂ ಬ್ಯಾಟಿಂಗ್’ನಲ್ಲಿ ಪ್ರಾಬಲ್ಯ ಸಾಧಿಸಿತ್ತು
    • ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಭಾರತ ಯುವ ಬ್ರಿಗೇಡ್
    • ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್’ಗೆ ಆಗಮಿಸಿದ ಸೂರ್ಯಕುಮಾರ್
ಭಾರತದ ಟಿ20 ಕ್ರಿಕೆಟ್’ಗೆ ಸಿಕ್ಕಾಯ್ತು ಪರ್ಫೆಕ್ಟ್ ಮ್ಯಾಚ್ ವಿನ್ನರ್! ಈತ ಎಂಟ್ರಿಯಾಗ್ತಿದ್ದಂತೆ ಸಿಕ್ಸರ್ ಸುರಿಮಳೆ ಗ್ಯಾರಂಟಿ  title=
Suryakumar Yadav

IND vs AUS T20 Series: ವಿಶ್ವಕಪ್ ಸೋಲಿನ ಬಳಿಕ ನೋವಿನಲ್ಲಿದ್ದ ಭಾರತಕ್ಕೆ ಸೂರ್ಯಕುಮಾರ್ ಯಾದವ್ ನೇತೃತ್ವದ ಯುವ ಭಾರತ ಪಡೆ ಸಂತಸವನ್ನು ನೀಡಿದೆ. ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಭಾರತ ಯುವ ಬ್ರಿಗೇಡ್, ವಿಶಾಖಪಟ್ಟಣ ಮೈದಾನದಲ್ಲಿ ಆಸ್ಟ್ರೇಲಿಯಾವನ್ನು ಸದೆಬಡಿದಿದ್ದಾರೆ.

ಈ ಪಂದ್ಯದಲ್ಲಿ ಭಾರತದ ಬೌಲಿಂಗ್ ಕಳಪೆಯಾಗಿದ್ದರೂ ಬ್ಯಾಟಿಂಗ್’ನಲ್ಲಿ ಪ್ರಾಬಲ್ಯ ಸಾಧಿಸಿತ್ತು. ಮುಖ್ಯವಾಗಿ ತಂಡದ ನಾಯಕತ್ವ ವಹಿಸಿದ್ದ ಸೂರ್ಯಕುಮಾರ್ ಯಾದವ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದು ತಂಡದ ಗೆಲುವಿನ ಪ್ರಮುಖ ರುವಾರಿ ಎನಿಸಿಕೊಂಡರು.

ಇದನ್ನೂ ಓದಿ: T20 ವಿಶ್ವಕಪ್’ನಲ್ಲಿ ಟೀಂ ಇಂಡಿಯಾವನ್ನು ಈ ಮ್ಯಾಚ್ ವಿನ್ನರ್ ಮುನ್ನಡೆಸಲಿ- ಗೌತಮ್ ಗಂಭೀರ್

ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ದುಕೊಂಡಿತ್ತು. ಆದರೆ ಟೀಂ ಇಂಡಿಯಾದ ಕಳಪೆ ಬೌಲಿಂಗ್’ನಿಂದಾಗಿ 3 ವಿಕೆಟ್ ನಷ್ಟ ಕಳೆದುಕೊಂಡ ಆಸೀಸ್ ತಂಡಕ್ಕೆ 208 ರನ್ ಹಾಕಲು ಸಾಧ್ಯವಾಯಿತು. ನಂತರ ನೀಡಿದ ಗುರಿ ತಲುಪಲು ಆಗಮಿಸಿದ ಟೀಂ ಇಂಡಿಯಾ ಆರಂಭದಲ್ಲಿ ಆಘಾತ ಅನುಭವಿಸಿತು. ಇದಾದ ನಂತರ ಆಗಮಿಸಿದ ನಾಯಕ ಸೂರ್ಯಕುಮಾರ್ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸುರಿಮಳೆ ಹರಿಸಿದರು.

ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್’ಗೆ ಆಗಮಿಸಿದ ಸೂರ್ಯಕುಮಾರ್ 42 ಎಸೆತದಲ್ಲಿ 80 ರನ್ ಬಾರಿಸಿ ಕಾಂಗಾರೂ ಪಡೆಗಳಿಗೆ ಸಿಂಹಸ್ವಪ್ನವಾಗಿ ಕಾಡಿದ್ದು ಸುಳ್ಳಲ್ಲ. ಅವರ ಈ ಇನ್ನಿಂಗ್ಸ್’ನಲ್ಲಿ 9 ಬೌಂಡರಿ ಮತ್ತು 4 ಸಿಕ್ಸರ್ ಸೇರಿದ್ದವು. ಈ ಎಲ್ಲಾ ವಿಚಾರಗಳನ್ನು ಗಮನಿಸಿದರೆ ಟೀಂ ಇಂಡಿಯಾ ಟಿ20 ತಂಡಕ್ಕೆ ಇವರಿಗಿಂತ ಬೆಸ್ಟ್ ಮಧ್ಯಮ ಕ್ರಮಾಂಕದ ಬ್ಯಾಟ್ಸ್’ಮನ್ ಮತ್ತೊಬ್ಬರು ಇರಲು ಸಾಧ್ಯವಿಲ್ಲ ಎಂದೆನಿಸುತ್ತಿದೆ.

ಇನ್ನೊಂದೆಡೆ ಬೆಸ್ಟ್ ಫಿನಿಶರ್ ಎಂಬುದನ್ನು ಮತ್ತೊಮ್ಮೆ ರಿಂಕು ಸಿಂಗ್ ನಿರೂಪಿಸಿದ್ದಾರೆ. 15 ಎಸೆತದಲ್ಲಿ 34 ರನ್ ಕಲೆ ಹಾಕಿದ ರಿಂಕು ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿದ್ದರು. ಈ ಸಿಕ್ಸ್ ಮೂಲಕ ಟೀಂ ಇಂಡಿಯಾಗೆ ಮೊದಲ ಗೆಲುವು ಸಿಕ್ಕಿತು.

ಇದನ್ನೂ ಓದಿ: 2024ರಿಂದ ವರ್ಷಪೂರ್ತಿ ಈ ರಾಶಿಗೆ ಕೋಟ್ಯಾಧಿಪತಿ ಯೋಗ: ಕೈಹಿಡಿಯುವಳು ಧನಲಕ್ಷ್ಮೀ… ಚಿನ್ನದ ಮಳೆ-ಸರ್ಕಾರಿ ನೌಕರಿ ಭಾಗ್ಯ

ಇನ್ನು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

Trending News