“ನನ್ನ ಮನೆಗೆ ಕಲ್ಲು ಎಸೆಯಲು ಸಾಧ್ಯವಿಲ್ಲ- ನಿವೃತ್ತಿ ಚರ್ಚೆ ಮಧ್ಯೆಯೇ ಹೀಗಂದಿದ್ದೇಕೆ ಕ್ಯಾಪ್ಟನ್ ರೋಹಿತ್ ಶರ್ಮಾ!

Rohit Sharma: T20 ವಿಶ್ವಕಪ್‌’ಗೆ ಮುನ್ನ ರೋಹಿತ್ ದುಬೈ ಐ 103.8 ಹೆಸರಿನ ಯೂಟ್ಯೂಬ್ ಚಾನೆಲ್‌’ಗೆ ಸಂದರ್ಶನ ನೀಡಿದ್ದಾರೆ. 21 ನಿಮಿಷ 34 ಸೆಕೆಂಡುಗಳ ಈ ವಿಡಿಯೋದಲ್ಲಿ ಹಿಟ್‌ಮ್ಯಾನ್ ವಿವರವಾಗಿ ಮಾತನಾಡಿದ್ದಾರೆ.

Written by - Bhavishya Shetty | Last Updated : May 15, 2024, 05:09 PM IST
    • ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ
    • ರೋಹಿತ್ ಶರ್ಮಾ ವಿದೇಶಿ ಯೂಟ್ಯೂಬ್ ಚಾನೆಲ್‌’ಗೆ ಸಂದರ್ಶನ ನೀಡಿದ್ದಾರೆ
    • ದುಬೈ ಐ 103.8 ಹೆಸರಿನ ಯೂಟ್ಯೂಬ್ ಚಾನೆಲ್‌’ಗೆ ಸಂದರ್ಶನ ನೀಡಿದ ರೋಹಿತ್
“ನನ್ನ ಮನೆಗೆ ಕಲ್ಲು ಎಸೆಯಲು ಸಾಧ್ಯವಿಲ್ಲ- ನಿವೃತ್ತಿ ಚರ್ಚೆ ಮಧ್ಯೆಯೇ ಹೀಗಂದಿದ್ದೇಕೆ ಕ್ಯಾಪ್ಟನ್ ರೋಹಿತ್ ಶರ್ಮಾ!  title=
Rohit Sharma

Rohit Sharma: ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ವಿದೇಶಿ ಯೂಟ್ಯೂಬ್ ಚಾನೆಲ್‌’ಗೆ ಸಂದರ್ಶನ ನೀಡಿದ್ದಾರೆ. ಈ ಸಮಯದಲ್ಲಿ, ಹಿಟ್‌ಮ್ಯಾನ್ ಅನೇಕ ವಿಷಯಗಳನ್ನು ಬಹಿರಂಗಪಡಿಸಿದ್ದು, ಇನ್ನು ಕೆಲವು ವರ್ಷಗಳ ಕಾಲ ಕ್ರಿಕೆಟ್ ಆಡಲು ಬಯಸುತ್ತಿದ್ದೇನೆ, ಸದ್ಯಕ್ಕೆ ನಿವೃತ್ತಿಯಾಗುವ ಇರಾದೆ ಇಲ್ಲ ಎಂದು ಹೇಳಿದ್ದಾರೆ.

T20 ವಿಶ್ವಕಪ್‌’ಗೆ ಮುನ್ನ ರೋಹಿತ್ ದುಬೈ ಐ 103.8 ಹೆಸರಿನ ಯೂಟ್ಯೂಬ್ ಚಾನೆಲ್‌’ಗೆ ಸಂದರ್ಶನ ನೀಡಿದ್ದಾರೆ. 21 ನಿಮಿಷ 34 ಸೆಕೆಂಡುಗಳ ಈ ವಿಡಿಯೋದಲ್ಲಿ ಹಿಟ್‌ಮ್ಯಾನ್ ವಿವರವಾಗಿ ಮಾತನಾಡಿದ್ದಾರೆ.

ಇದನ್ನೂ ಓದಿ: ಸಲ್ಮಾನ್ ಖಾನ್ ಸಿನಿಮಾದಲ್ಲಿ ನಟಿಸಲು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ?

ಹಿಟ್‌ಮ್ಯಾನ್ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದ ಬಗ್ಗೆ ಮಾತನಾಡಿ, "ಭಾರತಕ್ಕಾಗಿ ನನ್ನ 17 ವರ್ಷಗಳ ಪ್ರಯಾಣ ಅದ್ಭುತವಾಗಿದೆ. ಇನ್ನು ಕೆಲವು ವರ್ಷಗಳ ಕಾಲ ಆಡುವ ಭರವಸೆ ನನಗಿದೆ. ನನ್ನ ಆಟದಿಂದ ವಿಶ್ವ ಕ್ರಿಕೆಟ್ ಮೇಲೆ ಪ್ರಭಾವ ಬೀರುತ್ತೇನೆ. ನನ್ನ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದೇನೆ. ನಾನು ಈ ಸ್ಥಾಯಿ ತಲುಪುವ ಮುನ್ನ ಜೀವನದಲ್ಲಿ ಏರಿಳಿತಗಳನ್ನು ಎದುರಿಸಿದ್ದೇನೆ” ಎಂದು ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಾಗಲಿ, ಸಂದರ್ಶನವಾಗಲಿ ರೋಹಿತ್ ಶರ್ಮಾ ತಮಾಷೆ ಮಾಡುವ ಅವಕಾಶ ಸಿಕ್ಕರೆ ಬಿಡುವುದಿಲ್ಲ. ಭಾರತದಲ್ಲಿ ಕ್ರಿಕೆಟ್ ಒಂದು ಧರ್ಮವಿದ್ದಂತೆ. ಇಲ್ಲಿ ಕಳಪೆ ಪ್ರದರ್ಶನ ನೀಡುವ ಆಟಗಾರರನ್ನು ತೀವ್ರವಾಗಿ ಟೀಕಿಸಲಾಗುತ್ತದೆ. ಅವರ ಮನೆಯ ಮೇಲೂ ಕಲ್ಲು ತೂರಾಟ ನಡೆದಿದೆ. ಈ ಕುರಿತು ರೋಹಿತ್ ಬಳಿ ಕೇಳಿದಾಗ, “ಉತ್ತಮ ಪ್ರದರ್ಶನ ನೀಡಿದಾಗ ಜನರು ನಿಮ್ಮನ್ನು ದೇವರಂತೆ ನೋಡುತ್ತಾರೆ. ಆದರೆ ಎಲ್ಲವೂ ಅನುಕೂಲಕರವಾಗಿಲ್ಲದಿದ್ದರೆ ನಿಮ್ಮನ್ನು ಟೀಕಿಸುತ್ತಾರೆ. ಮಾಜಿ ಕ್ರಿಕೆಟಿಗರ ಮನೆ ಮೇಲೂ ಕಲ್ಲು ತೂರಾಟ ನಡೆದಿದೆ, ಆದರೆ ನನ್ನಿಂದ ಹಾಗಾಗುವುದಿಲ್ಲ. ನಾನು ಬಹುಮಹಡಿ ಕಟ್ಟಡದಲ್ಲಿ ವಾಸಿಸುವ ಕಾರಣ ನೀವು ನನ್ನ ಮನೆಗೆ ಕಲ್ಲು ಎಸೆಯಲು ಸಾಧ್ಯವಿಲ್ಲ” ಎಂದಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಮತ್ತೊಬ್ಬ ಯುವತಿ ಹತ್ಯೆ, ಸರ್ಕಾರದ ಸಡಿಲ ನೀತಿಯೇ ಕಾರಣ: ಪ್ರಲ್ಹಾದ್ ಜೋಶಿ ಆಕ್ರೋಶ

ನಾಯಕತ್ವದ ಬಗ್ಗೆ ಹಿಟ್‌’ಮ್ಯಾನ್ ಹೇಳಿದ್ದೇನು?

“ಭಾರತದ ನಾಯಕನಾಗಿರುವುದು ಯಾವಾಗಲೂ ಹೆಮ್ಮೆ ಮತ್ತು ಗೌರವದ ವಿಷಯ. ನಾನು ಈ ಬಗ್ಗೆ ಯೋಚಿಸಿರಲಿಲ್ಲ. ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತದೆ. ನಾನು ತಂಡದ ಜವಾಬ್ದಾರಿಯನ್ನು ವಹಿಸಿಕೊಂಡಾಗ, ನಾನು ಒಂದು ದಿಕ್ಕಿನಲ್ಲಿ ಮುಂದುವರಿಯಲು ಬಯಸಿದ್ದೆ. ವೈಯಕ್ತಿಕ ದಾಖಲೆಗಳು ಮತ್ತು ಮೈಲಿಗಲ್ಲುಗಳಿಗೆ ಇದರೊಂದಿಗೆ ಯಾವುದೇ ಸಂಬಂಧವಿರಲ್ಲ. 11 ಆಟಗಾರರು ಒಟ್ಟಿಗೆ ಆಡುತ್ತಾರೆ ಮತ್ತು ಟ್ರೋಫಿ ಗೆಲ್ಲುವುದು ಅವರ ಗುರಿಯಾಗಬೇಕು” ಎಂದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News