Weekly Horoscope: ಮಾರ್ಚ್ ತಿಂಗಳ ಕೊನೆಯ ವಾರ ದ್ವಾದಶ ರಾಶಿಗಳಲ್ಲಿ ಯಾರಿಗೆ ಶುಭ?

Weekly Horoscope From March 25th to March 31st: ಮಾರ್ಚ್ 25ರಿಂದ ಮಾರ್ಚ್ 31ರವರೆಗೆ ಈ ವಾರದ ಭವಿಷ್ಯ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.   

Written by - Yashaswini V | Last Updated : Mar 25, 2024, 10:26 AM IST
  • ವೃಷಭ ರಾಶಿಯ ಜನರಿಗೂ ಸಹ ಮಾರ್ಚ್ ತಿಂಗಳ ಈ ಕೊನೆಯ ವಾರ ಅದ್ಭುತವಾದ ವಾರ ಎಂದು ಸಾಬೀತುಪಡಿಸಲಿದೆ.
  • ಕನ್ಯಾ ರಾಶಿಯವರಿಗೆ ಈ ವಾರ ಮಿಶ್ರ ಫಲಗಳಿಂದ ಕೂಡಿದ ವಾರವಾಗಿರಲಿದೆ.
  • ಮಕರ ರಾಶಿಯ ಉದ್ಯಮಿಗಳಿಗೆ ಈ ಸಮಯವು ಉತ್ತಮವಾಗಿದೆ ಮತ್ತು ಅವರು ಅಪೇಕ್ಷಿತ ಲಾಭವನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ.
Weekly Horoscope: ಮಾರ್ಚ್ ತಿಂಗಳ ಕೊನೆಯ ವಾರ ದ್ವಾದಶ ರಾಶಿಗಳಲ್ಲಿ ಯಾರಿಗೆ ಶುಭ?  title=

Varabhavishya in Kannada From March 25th to March 31st: ಮಾರ್ಚ್ ತಿಂಗಳ ಕೊನೆಯ ವಾರ ಬಣ್ಣಗಳ ಹಬ್ಬ ಹೋಳಿ ಆಚರಣೆ ಇರಲಿದೆ. ಇದಲ್ಲದೆ, ವರ್ಷದ ಮೊದಲ ಚಂದ್ರಗ್ರಹಣವೂ ಸಂಭವಿಸಲಿದೆ. ಅಷ್ಟೇ ಅಲ್ಲದೆ, ಈ ವಾರ ಕೆಲವು ಪ್ರಮುಖ ಗ್ರಹಗಳ ಸಂಚಾರದಲ್ಲಿಯೂ ಬದಲಾವಣೆ ಆಗಲಿದ್ದು  ಇವುಗಳ ಪ್ರಭಾವ ದ್ವಾದಶ ರಾಶಿಗಳ ಮೇಲೆ ಹೇಗಿರಲಿದೆ ತಿಳಿಯಿರಿ. 

ಮೇಷ ರಾಶಿಯವರ ವಾರ ಭವಿಷ್ಯ:  
ಮಾರ್ಚ್ ಕೊನೆಯ ವಾರ ಮೇಷ ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿದೆ. ವಾರದ ಮೊದಲಾರ್ಧ ತಪ್ಪು ಗ್ರಹಿಕೆಯಿಂದಾಗಿ ಸಂಬಂಧಗಳಲ್ಲಿ ಬಿರುಕು ಮೂಡುವ ಸಾಧ್ಯತೆ ಇದೆ ಆದರೂ, ಬಳಿಕ ಗೊಂದಲಗಳು ಬಗೆಹರಿದು ಸಂತೋಷದ ಕ್ಷಣಗಳನ್ನು ಆನಂದಿಸುವಿರಿ. ವಾರದ ದ್ವಿತೀಯಾರ್ಧವು ವ್ಯಾಪಾರ, ವ್ಯವಹಾರಕ್ಕೆ ಸಂಬಂಧಿಸಿದಂತೆ ಅತ್ಯುತ್ತಮ ವಾರ. ವ್ಯಾಪಾರಕ್ಕೆ ಸಂಬಂಧಿಸಿದಂತೆ ಕೈಗೊಂಡ ಯಾವುದೇ ಪ್ರಯಾಣವು ತುಂಬಾ ಲಾಭದಾಯಕವಾಗಿರಲಿದೆ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕೆಲಸಕ್ಕೆ ಮನ್ನಣೆಗೆ ಪಾತ್ರರಾಗುವಿರಿ. 

ವೃಷಭ ರಾಶಿಯವರ ವಾರ ಭವಿಷ್ಯ:  
ವೃಷಭ ರಾಶಿಯ ಜನರಿಗೂ ಸಹ ಮಾರ್ಚ್ ತಿಂಗಳ ಈ ಕೊನೆಯ ವಾರ ಅದ್ಭುತವಾದ ವಾರ ಎಂದು ಸಾಬೀತುಪಡಿಸಲಿದೆ. ಈ ವಾರ ನಿಮ್ಮ ಯೋಜಿತ ಕಾರ್ಯಗಳು ಬೇಗ ಪೂರ್ಣಗೊಳ್ಳಲಿವೆ. ಕೆಲಸದಲ್ಲಿ ನಿರೀಕ್ಷಿತ ಪ್ರಗತಿಯಿಂದ ಲಾಭವನ್ನು ಕಾಣಬಹುದು. ಹಣಕಾಸಿನ ಹೊಸ ಮೂಲಗಳು ಸೃಷ್ಟಿಯಾಗಲಿದ್ದು ಒಟ್ಟಾರೆಯಾಗಿ ಅದೃಷ್ಟದ ವಾರ ಎಂದು ಸಾಬೀತುಪಡಿಸಲಿದೆ. ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮ ವಿಶ್ವಾಸಾರ್ಹತೆ ಹೆಚ್ಚಾಗುತ್ತದೆ. ವಿಶೇಷವೆಂದರೆ ನಿಮ್ಮ ಸಹೋದ್ಯೋಗಿಗಳು ಯಾವುದೇ ಗುರಿಯನ್ನು ಪೂರ್ಣಗೊಳಿಸುವಾಗ ವಾರದ ಉತ್ತರಾರ್ಧದಲ್ಲಿ, ಕುಟುಂಬ ಸದಸ್ಯರೊಂದಿಗೆ ದೂರದ ಪ್ರಯಾಣ ಸಾಧ್ಯ. ಪ್ರಯಾಣವು ಆಹ್ಲಾದಕರ ಮತ್ತು ಆನಂದದಾಯಕವಾಗಿರಲಿದೆ. 

ಮಿಥುನ ರಾಶಿಯವರ ವಾರ ಭವಿಷ್ಯ:   
ಮಿಥುನ ರಾಶಿಯವರಿಗೆ ಈ ವಾರ ಮಿಶ್ರ ಫಲಗಳಿಂದ ಕೂಡಿದ ವಾರವಾಗಿರಲಿದೆ. ವಾರದ ಮೊದಲಾರ್ಧ ಅತಿಯಾದ ಕೆಲಸದ ಒತ್ತಡದಿಂದ ಮನಸ್ಸಿನ ಶಾಂತಿ ಹದಗೆಡಬಹುದು. ಇದಲ್ಲದೆ, ಹಣಕಾಸಿನ ನಿರ್ವಹಣೆಯಲ್ಲಿ ನಿರ್ಲಕ್ಷ್ಯವು ನಿಮ್ಮ ಆರ್ಥಿಕ ಸಮಸ್ಯೆಗಳನ್ನು ಹೆಚ್ಚಿಸಬಹುದು. ವ್ಯರ್ಥ ಖರ್ಚುಗಳನ್ನು ತಪ್ಪಿಸಿ, ಇಲ್ಲದಿದ್ದರೆ  ನೀವು ಸಾಲಗಾರರಾಗಬಹುದು. ವ್ಯಾಪಾರ-ವ್ಯವಹಾರ ಸಂಬಂಧಿತ ಒಪ್ಪಂದವನ್ನು ಮಾಡುವಾಗ ನೀವು ಜಾಗರೂಕರಾಗಿರಬೇಕು.  ವಾರದ ದ್ವಿತೀಯಾರ್ಧದಲ್ಲಿ, ಚರ ಮತ್ತು ಸ್ಥಿರ ಆಸ್ತಿಗೆ ಸಂಬಂಧಿಸಿದ ವಿವಾದಗಳು ನಿಮ್ಮ ಸಮಸ್ಯೆಗಳಿಗೆ ಪ್ರಮುಖ ಕಾರಣವಾಗಬಹುದು. 

ಕರ್ಕಾಟಕ ರಾಶಿಯವರ ವಾರ ಭವಿಷ್ಯ: 
ಕರ್ಕಾಟಕ ರಾಶಿಯವರಿಗೂ ಸಹ ಈ ವಾರ ಮಿಶ್ರ ಫಲಿತಾಂಶಗಳನ್ನು ನೀಡಲಿದೆ. ವಾರದ ಪೂರ್ವಾರ್ಧದಲ್ಲಿ ದೋರ್ಯದ ಪ್ರಯಾಣ ಸಾಧ್ಯತೆ ಇದೆ. ಈ ವೇಳೆ ನಿಮ್ಮ ಆರೋಗ್ಯ, ಹಣಕಾಸಿನ ಬಗ್ಗೆ ವಿಶೇಷ ಕಾಳಜಿ ಅಗತ್ಯವಿದೆ. ಅವಸರದಲ್ಲಿ ಯಾವುದೇ ಕೆಲಸ ಮಾಡುವುದನ್ನು ತಪ್ಪಿಸಿ. ಜೊತೆಗೆ ವಾಹನ ಚಾಲನೆ ಮಾಡುವಾಗ ಎಚ್ಚರಿಕೆಯಿಂದ ಇರಿ. ಆದಾಗ್ಯೂ, ವಾರದ ಕೊನೆಯ ಭಾಗದಲ್ಲಿ ನೀವು ಭೂಮಿ, ಕಟ್ಟಡಕ್ಕೆ ಸಂಬಂಧಿಸ್ದ ವಿವಾದಗಳಲ್ಲಿ ಜಯ ಸಾಧಿಸುವಿರಿ. ಉದ್ಯೋಗಸ್ಥರು ಈ ವಾರ ನೀವು ಅನೇಕ ಅವಕಾಶಗಳನ್ನು ಪಡೆಯುತ್ತೀರಿ. 

ಇದನ್ನೂ ಓದಿ- Chandra Grahan On Holi: 100 ವರ್ಷಗಳ ನಂತರ ಹೋಳಿ ದಿನವೇ ಚಂದ್ರಗ್ರಹಣ, ಈ ರಾಶಿಯವರಿಗೆ ಕೋಟ್ಯಾಧಿಪತಿ ಯೋಗ

ಸಿಂಹ ರಾಶಿಯವರ ವಾರ ಭವಿಷ್ಯ:  
ಸಿಂಹ ರಾಶಿಯವರಿಗೆ ಮಾರ್ಚ್ ತಿಂಗಳ ಕೊನೆಯ ವಾರ ಕೆಲವೊಮ್ಮೆ ಅನುಕೂಲವಾಗಿದ್ದರೆ, ಇನ್ನೂ ಕೆಲವೊಮ್ಮೆ ಪ್ರತಿಕೂಲವಾಗಿರುತ್ತದೆ. ವಾರದ ಪೂರ್ವಾರ್ಧದಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ನಿಮ್ಮೊಂದಿಗಿದ್ದು, ಕೆಲಸ ಕಾರ್ಯಗಳಲ್ಲಿ ಭಾರೀ ಯಶಸ್ಸನ್ನು ಗಳಿಸುವಿರಿ. ವಾರದ ದ್ವಿತೀಯ ಭಾಗದಲ್ಲಿ ಕೆಲಸ ಕಾರ್ಯಗಳು ಕುಂಠಿತಗೊಳ್ಳಬಹುದು. ವೃತ್ತಿ ಅಥವಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಆರ್ಥಿಕ ದೃಷ್ಟಿಯಿಂದ ಈ ವಾರ ಮಿಶ್ರ ಫಲಗಳನ್ನು ಅನುಭವಿಸುವಿರಿ. 

ಕನ್ಯಾ ರಾಶಿಯವರ ವಾರ ಭವಿಷ್ಯ: 
ಕನ್ಯಾ ರಾಶಿಯವರಿಗೆ ಈ ವಾರ ಮಿಶ್ರ ಫಲಗಳಿಂದ ಕೂಡಿದ ವಾರವಾಗಿರಲಿದೆ. ವಾಹನ ಚಾಲನೆಯಲ್ಲಿ ಎಚ್ಚರಿಕೆ ಅಗತ್ಯವಾಗಿರುತ್ತದೆ. ಈ ಅವಧಿಯಲ್ಲಿ, ನೀವು ಇದ್ದಕ್ಕಿದ್ದಂತೆ ದೂರದ ಪ್ರಯಾಣಕ್ಕೆ ಹೋಗಬೇಕಾಗಬಹುದು. ವಾರದ ಮಧ್ಯದಲ್ಲಿ ಕೆಲವು ಶುಭ ಅಥವಾ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆಗಳಿವೆ. ಇದ್ದಕ್ಕಿದ್ದಂತೆ ಏನಾದರೂ ದೊಡ್ಡ ಪ್ರಮಾಣದ ಹಣವನ್ನು ಖರ್ಚು ಮಾಡಬೇಕಾಗಬಹುದು. ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಹದಗೆಡಿಸಬಹುದು. ವಾರದ ದ್ವಿತೀಯಾರ್ಧವು ಕೆಲಸ ಮಾಡುವ ವರ್ಗಕ್ಕೆ ಮಂಗಳಕರ ಮತ್ತು ಅದೃಷ್ಟದಾಯಕವಾಗಿರುತ್ತದೆ. 

ತುಲಾ ರಾಶಿಯವರ ವಾರ ಭವಿಷ್ಯ: 
ತುಲಾ ರಾಶಿಯ ಜನರು ತಮ್ಮ ಶಕ್ತಿ, ಬುದ್ಧಿವಂತಿಕೆ ಮತ್ತು ಧೈರ್ಯದ ಬಲದ ಮೇಲೆ ಈ ವಾರ ತಮ್ಮ ಕನಸುಗಳನ್ನು ನನಸಾಗಿಸುವಲ್ಲಿ ಯಶಸ್ವಿಯಾಗುತ್ತಾರೆ.  ಈ ವಾರ ಅದೃಷ್ಟದ ಬೆಂಬಲದಿಂದ ನೀವ್ ದೀರ್ಘ ಸಮಯದಿಒಂದ ಕಾಡುತ್ತಿದ್ದ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯುವಿರಿ. ಈ ವಾರ ನಿಮ್ಮ ಹಿಂದಿನ ಉಳಿತಾಯ ಮತ್ತು ಹೂಡಿಕೆಯ ಲಾಭವನ್ನು ನೀವು ಪಡೆಯಲು ಪ್ರಾರಂಭಿಸುತ್ತೀರಿ. ಉದ್ಯೋಗಿಗಳಿಗೆ ಹೆಚ್ಚುವರಿ ಆದಾಯದ ಮೂಲಗಳು ಸೃಷ್ಟಿಯಾಗಲಿದ್ದು ಬಂಪರ್ ಪ್ರಯೋಜನವನ್ನು ಪಡೆಯುವಿರಿ. 

ವೃಶ್ಚಿಕ ರಾಶಿಯವರ ವಾರ ಭವಿಷ್ಯ:  
ಈ ವಾರ ವೃಶ್ಚಿಕ ರಾಶಿಯ ಜನರು ಕ್ಷಣಿಕ ಲಾಭಕ್ಕೆ ಬದಲಾಗಿ ದೂರದ ನಷ್ಟವನ್ನು ತಪ್ಪಿಸುವತ್ತ ಗಮನ ಹರಿಸಿ. ಯಾವುದೇ ರೀತಿಯ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ವಾರದ ಮೊದಲಾರ್ಧದಲ್ಲಿ, ಉದ್ಯೋಗಸ್ಥರಿಗೆ ಪರಿಹಾರವನ್ನು ನೀಡಬಹುದು. ಎಂತಹುದೇ ಸಂದರ್ಭದಲ್ಲಿ ಹಿಡಿದ ಕೆಲಸವನ್ನು ಕೈಬಿಡಬೇಡಿ. ವೃಶ್ಚಿಕ ರಾಶಿಯ ಜನರು ಈ ವಾರ ಹಣದ ವ್ಯವಹಾರದಲ್ಲಿ ಜಾಗರೂಕರಾಗಿರಬೇಕು, ಇಲ್ಲದಿದ್ದರೆ ನಷ್ಟ ಸಾಧ್ಯತೆ ಇದೆ. ವಿವಾದದ ಬದಲು ಸಂಭಾಷಣೆಯ ಮೂಲಕ ಪ್ರೀತಿಯ ಸಂಬಂಧದಲ್ಲಿನ ಯಾವುದೇ ತಪ್ಪು ತಿಳುವಳಿಕೆಯನ್ನು ನಿವಾರಿಸಿ. 

ಇದನ್ನೂ ಓದಿ- ಮಂಗಳ ಶನಿ ಯುತಿ: 150 ವರ್ಷ ನಂತರ ಈ 3 ರಾಶಿಗಳಿಗೆ ರಾಜಯೋಗ, ಲಕ್ಷ್ಮೀದೇವಿ ಅನುಗ್ರಹದಿಂದ ಧನ ಸಂಪತ್ತಿನ ಹೊಳೆ.. ಬದುಕಿನ್ನು ಬಂಗಾರ!!

ಧನು ರಾಶಿಯವರ ವಾರ ಭವಿಷ್ಯ:  
ಧನು ರಾಶಿಯವರೇ ಈ ವಾರ ಯಾವುದೇ ವಿಶೇಷ ಕೆಲಸ ಮಾಡುವಾಗ ಇಲ್ಲವೇ, ಪ್ರಮುಖ ನಿರ್ಧಾರ ಕೈಗೊಳ್ಳುವಾಗ ತುಂಬಾ ಜಾಗರೂಕರಾಗಿರಬೇಕು. ಇಲ್ಲವಿದ್ದರೆ, ಭವಿಷ್ಯದಲ್ಲಿ ನೀವೇ ಪಶ್ಚಾತಾಪ ಪಡುತ್ತೀರಿ. ಈ ವಾರ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೂ ಕೂಡ ಅಷ್ಟು ಫಲಪ್ರದವಾಗಿಲ್ಲ. ಹಾಗಂತ, ಹಣ ಅಥವಾ ಲಾಭ ಗಳಿಸಲು ಶಾರ್ಟ್‌ಕಟ್‌ಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ವಾರದ ಮೊದಲಾರ್ಧದಲ್ಲಿ ಎಚ್ಚರಿಕೆಯಿಂದ ಹಣದ ವ್ಯವಹಾರಗಳನ್ನು ಮಾಡಿ, ಇಲ್ಲದಿದ್ದರೆ ನೀವು ಆರ್ಥಿಕ ನಷ್ಟ ಅನುಭವಿಸಬೇಕಾಗಬಹುದು. 

ಮಕರ ರಾಶಿಯವರ ವಾರ ಭವಿಷ್ಯ:  
ಮಕರ ರಾಶಿಯ ಜನರಿಗೆ ಈ ವಾರ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ. ವಾರದ ಮೊದಲ ಭಾಗದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಪೇಕ್ಷಿತ ಯಶಸ್ಸನ್ನು ಕಾಣುವಿರಿ. ಇದರಿಂದ ದೀರ್ಘಕಾಲದ ಸಮಸ್ಯೆಯು ಬಗೆಹರಿಯುವುದರಿಂದ ನೀವು ನೆಮ್ಮದಿಯ ನಿಟ್ಟುಸಿರು ಬಿಡುತ್ತೀರಿ. ನೀವು ಸ್ನೇಹಿತರು ಮತ್ತು ಕುಟುಂಬದಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಭೂಮಿ, ಕಟ್ಟಡ ಇತ್ಯಾದಿ ವಿಚಾರಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಾಗುವುದು. ಈ ಸಮಯವು ಉದ್ಯಮಿಗಳಿಗೆ ಉತ್ತಮವಾಗಿದೆ ಮತ್ತು ಅವರು ಅಪೇಕ್ಷಿತ ಲಾಭವನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. 

ಕುಂಭ ರಾಶಿಯವರ ವಾರ ಭವಿಷ್ಯ:  
ಕುಂಭ ರಾಶಿಯವರಿಗೆ ಈ ವಾರ ಶುಭ ಮತ್ತು ಅದೃಷ್ಟದ ವಾರ ಎಂದು ಸಾಬೀತುಪಡಿಸಲಿದೆ. ಈ ವಾರ, ನಿಮ್ಮ ಜೀವನದಲ್ಲಿ ಬರುವ ಸಣ್ಣ ಅಡೆತಡೆಗಳ ಹೊರತಾಗಿಯೂ, ನೀವು ಬಯಸಿದ ಯಶಸ್ಸು ಮತ್ತು ಲಾಭವನ್ನು ಪಡೆಯುತ್ತೀರಿ. ಉದ್ಯೋಗಸ್ಥರಿಗೆ ಮೇಲಾಧಿಕಾರಿಗಳಿಂದ ಮನ್ನಣೆ ದೊರೆಯಲಿದೆ. ನಿಮ್ಮ ಕಠಿಣ ಪರಿಶ್ರಮ ಮತ್ತು ಉತ್ತಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ವ್ಯಾಪಾರದ ದೃಷ್ಟಿಕೋನದಿಂದ, ವಾರದ ದ್ವಿತೀಯಾರ್ಧವು ನಿಮಗೆ ಹೆಚ್ಚು ಮಂಗಳಕರವಾಗಿರುತ್ತದೆ. ಈ ಅವಧಿಯಲ್ಲಿ ನೀವು ವ್ಯಾಪಾರ ಪ್ರವಾಸಕ್ಕೆ ಹೋಗಬಹುದು.

ಮೀನ ರಾಶಿಯವರ ವಾರ ಭವಿಷ್ಯ: 
ಮೀನ ರಾಶಿಯ ಜನರಿಗೆ ಈ ವಾರ ಮಿಶ್ರ ಫಲಗಳನ್ನು ನೀಡಲಿದೆ. ಕಾರ್ಮಿಕರಿಗೆ ಈ ವಾರ ಮಧ್ಯಮ ಫಲಗಳನ್ನು ನೀಡಲಿದೆ. ಇಂತಹ ಪರಿಸ್ಥಿತಿಯಲ್ಲಿ ಕೆಲಸದ ಸ್ಥಳದಲ್ಲಿ ಜನರ ಸಣ್ಣಪುಟ್ಟ ವಿಷಯಗಳಿಗೆ ಪ್ರಾಮುಖ್ಯತೆ ನೀಡುವ ಬದಲು ಜಾಗೃತರಾಗಿ ಕೆಲಸ ಮಾಡಬೇಕು. ಯಾವುದೇ ಸಹೋದ್ಯೋಗಿಯನ್ನು ಕುರುಡಾಗಿ ನಂಬಬೇಡಿ. ವ್ಯಾಪಾರಸ್ಥರಿಗೆ, ವಾರದ ಉತ್ತರಾರ್ಧವು ಮೊದಲಾರ್ಧಕ್ಕಿಂತ ಹೆಚ್ಚು ಫಲಪ್ರದವಾಗಿರಲಿದೆ. ನೀವು ಈ ಹಿಂದೆ ಯಾವುದೇ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಿದ್ದರೆ, ಈ ವಾರ ನೀವು ಅದರಿಂದ ದೊಡ್ಡ ಲಾಭವನ್ನು ಪಡೆಯುವ ನಿರೀಕ್ಷೆಯಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News