Vishnu puran: ವಿಷ್ಣು ಪುರಾಣದಲ್ಲಿ ಹೇಳಲಾದ ಈ 3 ಸಲಹೆ ಪಾಲಿಸಿದ್ರೆ ಯಶಸ್ಸು ಸಿಗುತ್ತದೆ..!

ಯಾವುದೇ ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ವಿಷ್ಣು ಪುರಾಣದಲ್ಲಿ ಉಲ್ಲೇಖಿಸಲಾದ ಸಲಹೆಗಳನ್ನು ಅಳವಡಿಸಿಕೊಂಡರೆ, ಆತ ಜೀವನದಲ್ಲಿ ಯಶಸ್ವಿಯಾಗುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಜೀವನವನ್ನು ಸಂತೋಷ ಮತ್ತು ಸಮೃದ್ಧವಾಗಿಸ ಬಯಸಿದರೆ, ನೀವು ಈ ಉಪಯುಕ್ತ ಸಲಹೆಗಳನ್ನು ಅಳವಡಿಸಿಕೊಳ್ಳಬೇಕು.  

Written by - Puttaraj K Alur | Last Updated : Dec 9, 2023, 04:07 PM IST
  • ವಿಷ್ಣು ಪುರಾಣದ ಪ್ರಕಾರ ಯಾವಾಗಲೂ ಬ್ರಾಹ್ಮಿ ಮುಹೂರ್ತದಲ್ಲಿ ಎಚ್ಚರಗೊಳ್ಳಬೇಕು & ರಾತ್ರಿ ಬೇಗನೆ ಮಲಗಬೇಕು
  • ವಿಷ್ಣು ಪುರಾಣದ ಪ್ರಕಾರ ಚಾರಿತ್ರ್ಯಹೀನ ವ್ಯಕ್ತಿಯಿಂದ ಯಾವಾಗಲೂ ಅಂತರ ಕಾಯ್ದುಕೊಳ್ಳಬೇಕು
  • ವಿಷ್ಣು ಪುರಾಣದ ಪ್ರಕಾರ ಬಡವರಿಗೆ ಮತ್ತು ಅಸಹಾಯಕರಿಗೆ ಕಿರುಕುಳ ಅಥವಾ ಹಾನಿ ಮಾಡುವವನು ಪಾಪಿ
Vishnu puran: ವಿಷ್ಣು ಪುರಾಣದಲ್ಲಿ ಹೇಳಲಾದ ಈ 3 ಸಲಹೆ ಪಾಲಿಸಿದ್ರೆ ಯಶಸ್ಸು ಸಿಗುತ್ತದೆ..! title=
ವಿಷ್ಣು ಪುರಾಣದ ಮಹತ್ವ

ವಿಷ್ಣು ಪುರಾಣದ ಮಹತ್ವ: ವಿಷ್ಣು ಪುರಾಣವು ಅತ್ಯಂತ ಪವಿತ್ರವಾದ ಹಿಂದೂ ಗ್ರಂಥವಾಗಿದ್ದು, ಇದು ಭಗವಾನ್ ವಿಷ್ಣು ಮತ್ತು ಆತನ ಭಕ್ತರಿಗೆ ಸಂಬಂಧಿಸಿದ ಕಥೆಗಳನ್ನು ಆಧರಿಸಿದೆ. ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಯಾವುದೇ ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಈ ಗ್ರಂಥದಲ್ಲಿ ನೀಡಿರುವ ಸಲಹೆಗಳನ್ನು ಪಾಲಿಸಿದರೆ, ಆತನು ಜೀವನದಲ್ಲಿ ಯಶಸ್ವಿಯಾಗುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನೀವು ಸಹ ನಿಮ್ಮ ಜೀವನವನ್ನು ಸಂತೋಷ ಮತ್ತು ಸಮೃದ್ಧವಾಗಿಸಲು ಬಯಸಿದರೆ, ವಿಷ್ಣು ಪುರಾಣದಲ್ಲಿ ಉಲ್ಲೇಖಿಸಿರುವ ಈ ಉಪಯುಕ್ತ ಸಲಹೆಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ. ಯಶಸ್ವಿ ಜೀವನಕ್ಕಾಗಿ ವಿಷ್ಣು ಪುರಾಣದ ಮಹತ್ವವನ್ನು ತಿಳಿಯಿರಿ.

ಬೆಳಗ್ಗೆ ಏಳುವ ಸಮಯ ಮತ್ತು ರಾತ್ರಿ ಮಲಗುವ ಸಮಯ 

ವಿಷ್ಣು ಪುರಾಣದ ಪ್ರಕಾರ, ಯಾವುದೇ ಒಬ್ಬ ವ್ಯಕ್ತಿಯು ಯಾವಾಗಲೂ ಬ್ರಾಹ್ಮಿ ಮುಹೂರ್ತದಲ್ಲಿ ಎಚ್ಚರಗೊಳ್ಳಬೇಕು ಮತ್ತು ರಾತ್ರಿ ಬೇಗನೆ ಮಲಗಬೇಕು. ಬೆಳಗ್ಗೆ ತಡವಾಗಿ ಎಚ್ಚರಗೊಂಡು ರಾತ್ರಿ ತಡವಾಗಿ ಮಲಗುವುದರಿಂದ ಸಮಯ ವ್ಯರ್ಥವಾಗುವುದಲ್ಲದೆ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಹೀಗಾಗಿ ಪ್ರತಿಯೊಬ್ಬ ವ್ಯಕ್ತಿಯು ಪ್ರತಿದಿನ ಸರಿಯಾದ ಸಮಯಕ್ಕೆ ಮಲಗಬೇಕು ಮತ್ತು ಎಚ್ಚರಗೊಳ್ಳಬೇಕು.

ಇದನ್ನೂ ಓದಿ: ಚಳಿಗಾಲದಲ್ಲಿ ತೂಕ ಇಳಿಕೆಗೆ ಈ ಕರಿಕಾಳಿನ ಸೊಪ್ಪಿನ ಸಾಗು ಒಂದು ರಾಮಬಾಣ ಉಪಾಯ!

ಇಂತಹವರಿಂದ ಅಂತರ ಕಾಯ್ದುಕೊಳ್ಳಿ

ವಿಷ್ಣು  ಪುರಾಣದ ಪ್ರಕಾರ, ಚಾರಿತ್ರ್ಯಹೀನ ವ್ಯಕ್ತಿಯಿಂದ ಯಾವಾಗಲೂ ಅಂತರ ಕಾಯ್ದುಕೊಳ್ಳಬೇಕು. ಇಂತಹ ವ್ಯಕ್ತಿಯ ಸಹವಾಸದಿಂದ ನಿಮ್ಮ ಸ್ವಭಾವದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಯಾವುದೇ ಒಬ್ಬ ವ್ಯಕ್ತಿಯು ವಾಸಿಸುವ ಪರಿಸರವು ಆತನ ಜೀವನದ ಮೇಲೆ ಆಳವಾದ ಪ್ರಭಾವ ಬೀರುತ್ತದೆ ಎಂದು ವಿಷ್ಣು ಪುರಾಣದಲ್ಲಿ ಹೇಳಲಾಗಿದೆ. ಅಷ್ಟೇ ಅಲ್ಲ ರಾತ್ರಿ ವೇಳೆ ಅಪ್ಪಿತಪ್ಪಿಯೂ ಸ್ಮಶಾನಕ್ಕೆ ಹೋಗಬಾರದು, ಇದು ಜೀವನದಲ್ಲಿ ನಕಾರಾತ್ಮಕತೆಯನ್ನು ಉಂಟುಮಾಡುತ್ತದೆ ಎಂದು ಹೇಳಲಾಗಿದೆ. 

ಯಾರನ್ನೂ ಅವಮಾನಿಸಬೇಡಿ ಅಥವಾ ಹಿಂಸಿಸಬೇಡಿ 

ವಿಷ್ಣು ಪುರಾಣದ ಪ್ರಕಾರ ಬಡವರಿಗೆ ಮತ್ತು ಅಸಹಾಯಕರಿಗೆ ಕಿರುಕುಳ ಅಥವಾ ಹಾನಿ ಮಾಡುವವನು ಪಾಪಿ. ಇದರೊಂದಿಗೆ ಕಿರಿಯ-ಹಿರಿಯ ಅಥವಾ ತನಗೆ ಸಮಾನವಾದ ಜನರನ್ನು ಅವಮಾನಿಸುವ ವ್ಯಕ್ತಿಯು ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನೀವು ಯಾರಿಗೂ ಹಾನಿ ಮಾಡದಿರುವುದು ಅಥವಾ ಯಾರಿಗೂ ಅಗೌರವ ತೋರದಿರುವುದು ಉತ್ತಮ. 

ಇದನ್ನೂ ಓದಿ: ನಿರಂತರವಾಗಿ ತಾಯಿ ಲಕ್ಷ್ಮಿ ಕೃಪೆ ನಿಮ್ಮ ಮೇಲೆ ಇರಬೇಕು ಎಂದ್ರೆ, ನಿತ್ಯ ಬೆಳಗ್ಗೆ ಈ ಕೆಲಸ ಮಾಡಿ!

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News