Pitru Paksha 2023: ಪಿತೃ ಪಕ್ಷದ ವೇಳೆ ಕಾಗೆಗಳಿಗೆ ಆಹಾರ ನೀಡುವುದು ಏಕೆ..?

ಪಿತೃ ಪಕ್ಷ 2023: ಪಿತೃ ಪಕ್ಷವು ಹಿಂದೂ ಧರ್ಮದಲ್ಲಿ ಪೂರ್ವಜರನ್ನು ನೆನಪಿಸಿಕೊಳ್ಳುವ ಸಮಯವಾಗಿದೆ. ಈ ಅವಧಿಯಲ್ಲಿ ಕಾಗೆಗಳಿಗೆ ಆಹಾರವನ್ನು ನೀಡುವುದು ವಿಶೇಷ ಮಹತ್ವವನ್ನು ಹೊಂದಿದೆ. ಏಕೆಂದರೆ ಇದು ಪೂರ್ವಜರ ಜಗತ್ತಿನಲ್ಲಿ ನೆಲೆಸಿರುವ ಪೂರ್ವಜರ ಆತ್ಮಕ್ಕೆ ಶಾಂತಿಯನ್ನು ತರುತ್ತದೆ ಮತ್ತು ಅವರು ಕುಟುಂಬವನ್ನು ಆಶೀರ್ವದಿಸುತ್ತಾರೆಂಬ ನಂಬಿಕೆಯಿದೆ.

Written by - Puttaraj K Alur | Last Updated : Oct 1, 2023, 05:13 PM IST
  • ಪಿತೃ ಪಕ್ಷವು ಹಿಂದೂ ಧರ್ಮದಲ್ಲಿ ಪೂರ್ವಜರನ್ನು ನೆನಪಿಸಿಕೊಳ್ಳುವ ಸಮಯವಾಗಿದೆ
  • ಪಿತೃಪಕ್ಷದ ಅವಧಿಯಲ್ಲಿ ಕಾಗೆಗಳಿಗೆ ಆಹಾರ ನೀಡುವುದು ವಿಶೇಷ ಮಹತ್ವ ಹೊಂದಿದೆ
  • ಪ್ರತಿವರ್ಷ ಭಾದ್ರಪದ ಮಾಸದ ಹುಣ್ಣಿಮೆಯಿಂದ 15 ದಿನ ಪಿತೃಪಕ್ಷವನ್ನು ಆಯೋಜಿಸಲಾಗುತ್ತದೆ
Pitru Paksha 2023: ಪಿತೃ ಪಕ್ಷದ ವೇಳೆ ಕಾಗೆಗಳಿಗೆ ಆಹಾರ ನೀಡುವುದು ಏಕೆ..?   title=
ಪಿತೃ ಪಕ್ಷ 2023

ಪಿತೃ ಪಕ್ಷ 2023: ಪಿತೃ ಪಕ್ಷದಲ್ಲಿ ಪೂರ್ವಜರಿಗೆ ತರ್ಪಣ, ಶ್ರಾದ್ಧ ಮತ್ತು ಪಿಂಡದಾನವನ್ನು ನೀಡುವ ಮೂಲಕ ಕೃತಜ್ಞತೆಯನ್ನು ವ್ಯಕ್ತಪಡಿಸಲಾಗುತ್ತದೆ. ಈ ಅವಧಿಯಲ್ಲಿ ಪೂರ್ವಜರಿಗೆ ಭಕ್ತಿಯನ್ನು ತೋರಿಸಲು ಮತ್ತು ಅವರನ್ನು ತೃಪ್ತಿಪಡಿಸಲು ಅನೇಕ ಆಚರಣೆಗಳನ್ನು ಮಾಡಲಾಗುತ್ತದೆ. ಪ್ರತಿವರ್ಷ ಭಾದ್ರಪದ ಮಾಸದ ಹುಣ್ಣಿಮೆಯಿಂದ 15 ದಿನಗಳ ಕಾಲ ಪಿತೃ ಪಕ್ಷವನ್ನು ಆಯೋಜಿಸಲಾಗುತ್ತದೆ. ಸೆ.29ರಿಂದ ಆರಂಭವಾದ ಪಿತೃಪಕ್ಷ ಅಕ್ಟೋಬರ್ 14ಕ್ಕೆ ಮುಕ್ತಾಯವಾಗಲಿದೆ. ಈ ಸಮಯದಲ್ಲಿ ಜನರು ತಮ್ಮ ಪೂರ್ವಜರ ಶಾಂತಿಗಾಗಿ ಪ್ರಾರ್ಥಿಸುತ್ತಾರೆ. ಪೂರ್ವಜರ ನೆಚ್ಚಿನ ವಸ್ತುಗಳು ಮತ್ತು ಆಹಾರದೊಂದಿಗೆ ಶ್ರಾದ್ಧ ಮತ್ತು ತರ್ಪಣ ಮಾಡಲಾಗುತ್ತದೆ. ಪಿತೃಪಕ್ಷದ ಸಮಯದಲ್ಲಿ ಪಿತೃದೇವತೆಗಳು ಕಾಗೆಗಳ ರೂಪದಲ್ಲಿ ಭೂಮಿಗೆ ಬರುತ್ತಾರೆ ಎಂದು ನಂಬಲಾಗಿದೆ.

ಕಾಗೆಗಳ ಪ್ರಾಮುಖ್ಯತೆ: ಪಿತೃಪಕ್ಷದಲ್ಲಿ ಕಾಗೆಗಳಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗುತ್ತದೆ. ಏಕೆಂದರೆ ಧಾರ್ಮಿಕ ನಂಬಿಕೆಗಳ ಪ್ರಕಾರ, ಪಿತೃಪಕ್ಷದ ಸಮಯದಲ್ಲಿ ಪೂರ್ವಜರು ಕಾಗೆಗಳ ರೂಪದಲ್ಲಿ ಭೂಮಿಗೆ ಬರುತ್ತಾರೆ ಎಂದು ಹೇಳಲಾಗುತ್ತದೆ. ಒಬ್ಬ ವ್ಯಕ್ತಿಯು ಸತ್ತಾಗ ಆತನು ಕಾಗೆಯಾಗಿ ಮರುಜನ್ಮ ಪಡೆಯುತ್ತಾನೆ ಎಂಬ ನಂಬಿಕೆಯೂ ಇದೆ.

ಇದನ್ನೂ ಓದಿ: ಕೂದಲಿಗೆ ಹೆನ್ನಾ ಹಚ್ಚುವಾಗ ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ!!

ಪೌರಾಣಿಕ ಹಿನ್ನೆಲೆ: ಪೌರಾಣಿಕ ಕಥೆಯ ಪ್ರಕಾರ ಇಂದ್ರನ ಮಗ ಜಯಂತ್ ಭಗವಾನ್ ಶ್ರೀರಾಮನ ಮುಂದೆ ಕಾಗೆಯ ರೂಪವನ್ನು ಪಡೆದಿದ್ದನು. ಅವನು ಸೀತೆಯ ಪಾದಗಳನ್ನು ಕಚ್ಚಿದನು. ಶ್ರೀರಾಮನು ಅವನನ್ನು ಶಿಕ್ಷಿಸಿದಾಗ, ಕಾಗೆ ಕ್ಷಮೆ ಕೇಳಲು ಪ್ರಾರಂಭಿಸಿತು. ಹೀಗಾಗಿ ಶ್ರೀರಾಮನು ಆತನನ್ನು ಕ್ಷಮಿಸಿದನು ಮತ್ತು ಪಿತೃ ಪಕ್ಷದಲ್ಲಿ ಕಾಗೆಗಳಿಗೆ ಕೊಡುವ ಆಹಾರವನ್ನು ಪಿತೃಲೋಕದಲ್ಲಿ ನೆಲೆಸಿರುವ ಪಿತೃದೇವತೆಗಳಿಗೆ ಸಿಗುತ್ತದೆ ಎಂದು ಆಶೀರ್ವದಿಸಿದನು.

ಇತರೆ ಜೀವಿಗಳಿಗೂ ಆಹಾರ: ಇದಲ್ಲದೆ ಪಿತೃ ಪಕ್ಷದಲ್ಲಿ ಕಾಗೆಗಳಿಗೆ ಮಾತ್ರವಲ್ಲದೆ ಹಸುಗಳು, ನಾಯಿಗಳು ಮತ್ತು ಇತರ ಪಕ್ಷಿಗಳಿಗೆ ಆಹಾರವನ್ನು ನೀಡಲಾಗುತ್ತದೆ. ಈ ಜೀವಿಗಳು ಆಹಾರವನ್ನು ಸ್ವೀಕರಿಸದಿದ್ದರೆ, ಅದು ಪಿತೃದೇವತೆಗಳ ಅತೃಪ್ತಿ ಅಥವಾ ಅಸಮಾಧಾನದ ಸಂಕೇತವಾಗಿರಬಹುದು ಎಂದು ನಂಬಲಾಗಿದೆ.

ಇದನ್ನೂ ಓದಿ: ಮನೆಯ ಮುಂದೆ ಈ ಗಿಡಗಳನ್ನು ನೆಟ್ಟರೆ ಸೊಳ್ಳೆಗಳು ಹತ್ತಿರವೂ ಸುಳಿಯದು !

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News