ಇಂತಹ ವಸ್ತುಗಳು ಕೇಸರಲ್ಲಿದ್ದರೂ ಅವುಗಳನ್ನು ಕೈಗೆತ್ತಿಕೊಳ್ಳಲು ಮರೆಯಬೇಡಿ!

ಅರ್ಥಶಾಸ್ತ್ರಜ್ಞ, ರಾಜತಾಂತ್ರಿಕ, ಮಾರ್ಗದರ್ಶಕ ಹಾಗೂ ಮಹಾನ್ ವಿದ್ವಾಂಸರಲ್ಲಿ ಒಬ್ಬರಾದ ಆಚಾರ್ಯ ಚಾಣಕ್ಯರು ಸುಗಮ ಮತ್ತು ಯಶಸ್ವಿ ಜೀವನಕ್ಕೆ ಕೆಲವು ಪ್ರಮುಖ ನೀತಿಗಳನ್ನು ತಮ್ಮ ನೀತಿ ಶಾಸ್ತ್ರದಲ್ಲಿ ಉಲ್ಲೇಖಿಸಿದ್ದಾರೆ. ಆಚಾರ್ಯ ಚಾಣಕ್ಯರು ಹೇಳಿರುವ ಈ ನೀತಿಗಳನ್ನು ಅನುಸರಿಸಿದರೆ, ಓರ್ವ ವ್ಯಕ್ತಿಯ ಜೀವನವು ಯಶಸ್ವಿಯಾಗುತ್ತದೆ ಮತ್ತು ಸಂತೋಷದಿಂದ ಕೂಡಿರುತ್ತದೆ. ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಲಾದ ವಿಷಯಗಳು ವ್ಯಕ್ತಿಯನ್ನು ತೊಂದರೆಗಳು ಮತ್ತು ವೈಫಲ್ಯಗಳಿಂದ ರಕ್ಷಿಸುತ್ತವೆ. ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಿರುವ ಪ್ರಕಾರ ಕೆಲ  ವಸ್ತುಗಳು ಕೆಸರಿನಲ್ಲಿ ಬಿದ್ದಿದ್ದರೂ ಕೂಡ ಅವುಗಳನ್ನು ಕೈಗೆತ್ತಿಕೊಳ್ಳಲು ಎಂದಿಗೂ ಹಿಂಜರಿಯಬಾರದು ಎನ್ನಲಾಗಿದೆ. ಈ ವಸ್ತುಗಳನ್ನು ಕೆಸರಿನಿಂದ ಮೇಲಕ್ಕೆತ್ತುವುದು ಸಹ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ ಎನ್ನಲಾಗಿದೆ. (Spiritual News In Kannada)

Written by - Nitin Tabib | Last Updated : Oct 31, 2023, 10:42 PM IST
  • ಕೆಟ್ಟದ್ದರಲ್ಲಿಯೂ ಕೂಡ ಒಳ್ಳೆಯದನ್ನು ಕಂಡುಕೊಳ್ಳುವ ಕಲೆಯನ್ನು ಹೊಂದಿರುವ ವ್ಯಕ್ತಿ ಮಾತ್ರ ಜೀವನದಲ್ಲಿ ಯಶಸ್ವಿಯಾಗುತ್ತಾನೆ
  • ಎಂದು ಆಚಾರ್ಯ ಚಾಣಕ್ಯರು ತನ್ನ ನೀತಿ ಶಾಸ್ತ್ರದಲ್ಲಿ ಹೇಳಿದ್ದಾರೆ. ಇದೇ ವೇಳೆ ಆ ಒಳ್ಳೆಯ ವಿಷಯಗಳನ್ನು ನಿಮ್ಮ ಜೀವನದಲ್ಲಿ ತರಲು
  • ನೀವು ನಿಮ್ಮ ಅತ್ಯುತ್ತಮ ಪ್ರಯತ್ನ ಮಾಡಬೇಕು. ಈ ಚಿಂತನೆಯು ವ್ಯಕ್ತಿಯನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ.
ಇಂತಹ ವಸ್ತುಗಳು ಕೇಸರಲ್ಲಿದ್ದರೂ ಅವುಗಳನ್ನು ಕೈಗೆತ್ತಿಕೊಳ್ಳಲು ಮರೆಯಬೇಡಿ! title=

ಬೆಂಗಳೂರು: ಅರ್ಥಶಾಸ್ತ್ರಜ್ಞ, ರಾಜತಾಂತ್ರಿಕ, ಮಾರ್ಗದರ್ಶಕ ಹಾಗೂ ಮಹಾನ್ ವಿದ್ವಾಂಸರಲ್ಲಿ ಒಬ್ಬರಾದ ಆಚಾರ್ಯ ಚಾಣಕ್ಯರು ಸುಗಮ ಮತ್ತು ಯಶಸ್ವಿ ಜೀವನಕ್ಕೆ ಕೆಲವು ಪ್ರಮುಖ ನೀತಿಗಳನ್ನು ತಮ್ಮ ನೀತಿ ಶಾಸ್ತ್ರದಲ್ಲಿ ಉಲ್ಲೇಖಿಸಿದ್ದಾರೆ. ಆಚಾರ್ಯ ಚಾಣಕ್ಯರು ಹೇಳಿರುವ ಈ ನೀತಿಗಳನ್ನು ಅನುಸರಿಸಿದರೆ, ಓರ್ವ ವ್ಯಕ್ತಿಯ ಜೀವನವು ಯಶಸ್ವಿಯಾಗುತ್ತದೆ ಮತ್ತು ಸಂತೋಷದಿಂದ ಕೂಡಿರುತ್ತದೆ. ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಲಾದ ವಿಷಯಗಳು ವ್ಯಕ್ತಿಯನ್ನು ತೊಂದರೆಗಳು ಮತ್ತು ವೈಫಲ್ಯಗಳಿಂದ ರಕ್ಷಿಸುತ್ತವೆ. ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಿರುವ ಪ್ರಕಾರ ಕೆಲ  ವಸ್ತುಗಳು ಕೆಸರಿನಲ್ಲಿ ಬಿದ್ದಿದ್ದರೂ ಕೂಡ ಅವುಗಳನ್ನು ಕೈಗೆತ್ತಿಕೊಳ್ಳಲು ಎಂದಿಗೂ ಹಿಂಜರಿಯಬಾರದು ಎನ್ನಲಾಗಿದೆ. ಈ ವಸ್ತುಗಳನ್ನು ಕೆಸರಿನಿಂದ ಮೇಲಕ್ಕೆತ್ತುವುದು ಸಹ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ ಎನ್ನಲಾಗಿದೆ. (Spiritual News In Kannada)

ಕೆಟ್ಟ ಸಂಗತಿಯಲ್ಲಿಯೂ ಕೂಡ ಒಳ್ಳೆಯದನ್ನು ಕಂಡುಕೊಳ್ಳಲು ಪ್ರಯತ್ನಿಸಿ
ಕೆಟ್ಟದ್ದರಲ್ಲಿಯೂ ಕೂಡ  ಒಳ್ಳೆಯದನ್ನು ಕಂಡುಕೊಳ್ಳುವ ಕಲೆಯನ್ನು ಹೊಂದಿರುವ ವ್ಯಕ್ತಿ ಮಾತ್ರ ಜೀವನದಲ್ಲಿ ಯಶಸ್ವಿಯಾಗುತ್ತಾನೆ ಎಂದು ಆಚಾರ್ಯ ಚಾಣಕ್ಯರು ತನ್ನ ನೀತಿ ಶಾಸ್ತ್ರದಲ್ಲಿ ಹೇಳಿದ್ದಾರೆ. ಇದೇ ವೇಳೆ ಆ ಒಳ್ಳೆಯ ವಿಷಯಗಳನ್ನು ನಿಮ್ಮ ಜೀವನದಲ್ಲಿ ತರಲು ನೀವು ನಿಮ್ಮ ಅತ್ಯುತ್ತಮ ಪ್ರಯತ್ನ ಮಾಡಬೇಕು. ಈ ಚಿಂತನೆಯು ವ್ಯಕ್ತಿಯನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ.

>> ಆಚಾರ್ಯ ಚಾಣಕ್ಯರು ಹೇಳುವ ಪ್ರಕಾರ, ಯಾವುದೇ ಬೆಲೆಬಾಳುವ ವಸ್ತುವು ಕೆಸರಿನಲ್ಲಿ ಅಥವಾ ಕೊಳೆಯಲ್ಲಿ ಬಿದ್ದಿದ್ದರೂ ಕೂಡ ಅದನ್ನು ಕೈಗೆತ್ತಿಕೊಳ್ಳಬೇಕು ಎನ್ನಲಾಗಿದೆ.  ಉದಾಹರಣೆಗೆ, ಚಿನ್ನ ಅಥವಾ ವಜ್ರವು ಮಣ್ಣಿನಲ್ಲಿ ಬಿದ್ದಿದ್ದರೆ, ಅದನ್ನು ಎತ್ತಿಕೊಳ್ಳಿ ಏಕೆಂದರೆ ಮಣ್ಣಿನಲ್ಲಿ ಬಿದ್ದ ನಂತರವೂ ಅದರ ಮೌಲ್ಯವು ಕಡಿಮೆಯಾಗುವುದಿಲ್ಲ.

>> ಒಂದು ವೇಳೆ ಜೀವನದಲ್ಲಿ ದುಷ್ಟರು ಮತ್ತು ಹಾವಿನ ನಡುವೆ ಆಯ್ಕೆ ಮಾಡುವ ಪರಿಸ್ಥಿತಿ ಎದುರಾದರೆ, ಹಾವನ್ನು ಆಯ್ಕೆ ಮಾಡಿಕೊಳ್ಳಿ ಎಂದು ಚಾಣಕ್ಯರು ಹೇಳುತ್ತಾರೆ. ಏಕೆಂದರೆ ಹಾವು ಅದಕ್ಕೆ ಕಿರುಕುಳ ನೀಡಿದಾಗ ಅಥವಾ ಅದರ ಜೀವಕ್ಕೆ ಯಾವುದೇ ಅಪಾಯ ಉಂಟಾದಾಗ ಮಾತ್ರ ನಿಮಗೆ ಹಾನಿ ಮಾಡುತ್ತದೆ. ಮತ್ತೊಂದೆಡೆ, ದುಷ್ಟ ವ್ಯಕ್ತಿಯು ತನ್ನ ದುಷ್ಟ ಸ್ವಭಾವದಿಂದ ಕಾರಣವಿಲ್ಲದಿದ್ದರೂ ಕೂಡ ನಿಮಗೆ ಹಾನಿ ಮಾಡಬಹುದು.

ಇದನ್ನೂ ಓದಿ-Diwali 2023 ಬಳಿಕ ಬುದ್ಧಿದಾತ ಬುಧನ ಉದಯ, ಈ ರಾಶಿಗಳ ಜನರ ಜೀವನದಲ್ಲಿ ಗೋಲ್ಡನ್ ಟೈಮ್ ಆರಂಭ!

>> ಕೆಟ್ಟ ಸಂಸಾರದಲ್ಲಿ ಸದ್ಗುಣಿಯಾದ ಹುಡುಗಿಯಿದ್ದರೂ ಅವಳನ್ನು ನಿಮ್ಮ ಮನೆಯ ಸೊಸೆಯನ್ನಾಗಿ ಮಾಡಿಕೊಳ್ಳಲು ಹಿಂಜರಿಯಬೇಡಿ ಎನ್ನುತ್ತದೆ ಚಾಣಕ್ಯ ನೀತಿ. ಹುಡುಗಿಯ ಕುಟುಂಬದ ಬದಲು, ಅವಳ ಗುಣಗಳನ್ನು ನೋಡಿ ಏಕೆಂದರೆ ಸದ್ಗುಣಶೀಲ ಹುಡುಗಿ ತನ್ನ ಉತ್ತಮ ನಡವಳಿಕೆಯಿಂದ ಮನೆಯನ್ನು ಸ್ವರ್ಗವನ್ನಾಗಿ ಮಾಡುತ್ತಾಳೆ.

ಇದನ್ನೂ ಓದಿ-Diwali 2023 ರಂದು 'ರುಚಕ ಮಹಾಪುರುಷ ರಾಜಯೋಗ' ನಿರ್ಮಾಣ, ಲಕ್ಷ್ಮಿ ಕೃಪೆಯಿಂದ ಈ ಜನರಿಗೆ ಆಕಸ್ಮಿಕ ಧನಲಾಭ-ಭಾಗ್ಯೋದಯ ಯೋಗ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News