ಶೀಘ್ರದಲ್ಲಿಯೇ ಅಮಲಾ ರಾಜಯೋಗ ನಿರ್ಮಾಣ, ಧನಲಕ್ಷ್ಮಿ ಕೃಪೆಯಿಂದ 3 ರಾಶಿಗಳ ಜನರಿಗೆ ಬಂಪರ್ ಧನಲಾಭ!

Auspicious Amala Yog In Aries: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಗ್ರದಲ್ಲಿಯೇ ದೇವಗುರು ಬೃಹಸ್ಪತಿ ಮಂಗಳನ ಅಂಗಳ ಅಂದರೆ ಮೇಷ ರಾಶಿಯಲ್ಲಿ ತನ್ನ ವಕ್ರ ನಡೆಯನ್ನು ಆರಂಭಿಸಲಿದ್ದಾನೆ. ಗುರುವಿನ ಈ ವಕ್ರನಡೆಯಿಂದ ಅಮಲಾ ರಾಜಯೋಗ ನಿರ್ಮಾಣಗೊಳ್ಳುತ್ತಿದ್ದು, ಇದು ಒಟ್ಟು ಮೂರು ರಾಶಿಗಳ ಜಾತಕದವರಿಗೆ ಅತ್ಯಂತ ಲಾಭವನ್ನು ತಂದು ಕೊಡಲಿದೆ. ಆ ಅವಧಿಯಲ್ಲಿ ಈ ಜನರಿಗೆ ಜೀವನದಲ್ಲಿ ಬಂಪರ್ ಲಾಭ ಉಂಟಾಗಲಿದ್ದು, ಪದೋನ್ನತಿಯ ಭಾಗ್ಯ ಕೂಡ ಪ್ರಾಪ್ತಿಯಾಗಲಿದೆ.
 

ಬೆಂಗಳೂರು: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ಹಾಗೂ ನಕ್ಷತ್ರಗಳ ಸ್ಥಿತಿ ಪರಿವರ್ತನೆಯ ಕಾರಣ, ಯಾವುದಾದರೊಂದು ಶುಭ-ಅಶುಭ ಯೋಗಗಳು ನಿರ್ಮಾಣಗೊಳ್ಳುತ್ತಲೇ ಇರುತ್ತವೆ. ಹೀಗಿರುವಾಗ ದೇವತೆಗಳ ಗುರು ಎಂದೇ ಕರೆಯಲಾಗುವ ದೇವಗುರು ಬೃಹಸ್ಪತಿ ಸೆಪ್ಟೆಂಬರ್ 4 ರಂದು ಸಂಜೆ 4ಗಂಟೆ 58 ನಿಮಿಷಕ್ಕೆ ಮೇಷ ರಾಶಿಯಲ್ಲಿ ತನ್ನ ವಕ್ರ ನಡೆಯನ್ನು ಅನುಸರಿಸಲಿದ್ದಾನೆ. ಗುರುವಿನ ಈ ವಕ್ರ ನಡೆ ಹಲವು ರಾಶಿಗಳ ಜಾತಕದವರಿಗೆ ಭಾರಿ ಲಾಭವನ್ನು ತಂದುಕೊಡಲಿದೆ. ಇದಲ್ಲದೆ ಅಮಲಾ ಹೆಸರಿನ ರಾಜಯೋಗ ಕೂಡ ನಿರ್ಮಾಣಗೊಳ್ಳುತ್ತಿದೆ.   ಈ ರಾಜ್ಯಯೋಗವನ್ನು ಅತ್ಯಂತ ಶುಭ ರಾಜಯೋಗ ಎಂದು ಭಾವಿಸಲಾಗುತ್ತದೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಯಾವುದೇ ಓರ್ವ ವ್ಯಕ್ತಿಯ ಜಾತಕದ ಚಂದ್ರ ಲಗ್ನ ಅಥವಾ ದಶಮ ಭಾವದಲ್ಲಿ ಬೃಹಸ್ಪತಿ ಬಂದು ಕುಳಿತರೆ ಅಮಲಾ ರಾಜಯೋಗ ನಿರ್ಮಾಣಗೊಳ್ಳುತ್ತದೆ. ಈ ರಾಜಯೋಗ ಮೂರು ರಾಶಿಗಳ ಪಾಲಿಗೆ ಅತ್ಯಂತ ಶುಭ ಫಲಪ್ರದ ಎಂದು ಭಾವಿಸಲಾಗಿದ್ದು, ಅವರಿಗೆ ಸಾಕಷ್ಟು ಲಾಭಗಳನ್ನು ತಂದುಕೊಡಲಿದೆ. ಬನ್ನಿ ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ,

 

ಇದನ್ನೂ ಓದಿ-ಕನ್ಯಾ ರಾಶಿಯಲ್ಲಿ ಪವರ್ಫುಲ್ ಶತ್ರುಹಂತಾ ಯೋಗ ನಿರ್ಮಾಣ , ಧನಕುಬೇರನ ಕೃಪೆಯಿಂದ ಈ ಜನರಿಗೆ ಅಪಾರ ಧನ-ಸಂಪತ್ತು ಪ್ರಾಪ್ತಿಯ ಯೋಗ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

Auspicious Amala Yog In Aries: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಗ್ರದಲ್ಲಿಯೇ ದೇವಗುರು ಬೃಹಸ್ಪತಿ ಮಂಗಳನ ಅಂಗಳ ಅಂದರೆ ಮೇಷ ರಾಶಿಯಲ್ಲಿ ತನ್ನ ವಕ್ರ ನಡೆಯನ್ನು ಆರಂಭಿಸಲಿದ್ದಾನೆ. ಗುರುವಿನ ಈ ವಕ್ರನಡೆಯಿಂದ ಅಮಲಾ ರಾಜಯೋಗ ನಿರ್ಮಾಣಗೊಳ್ಳುತ್ತಿದ್ದು, ಇದು ಒಟ್ಟು ಮೂರು ರಾಶಿಗಳ ಜಾತಕದವರಿಗೆ ಅತ್ಯಂತ ಲಾಭವನ್ನು ತಂದು ಕೊಡಲಿದೆ. ಆ ಅವಧಿಯಲ್ಲಿ ಈ ಜನರಿಗೆ ಜೀವನದಲ್ಲಿ ಬಂಪರ್ ಲಾಭ ಉಂಟಾಗಲಿದ್ದು, ಪದೋನ್ನತಿಯ ಭಾಗ್ಯ ಕೂಡ ಪ್ರಾಪ್ತಿಯಾಗಲಿದೆ.  

2 /5

ಮಿಥುನ ರಾಶಿ: ಮೇಷ ರಾಶಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ರಾಜಯೋಗ ಮಿಥುನ ಜಾತಕದವರಿಗೆ ಲಾಭವೋ ಲಾಭ ತಂದು ಕೊಡಲಿದೆ. ವೃತ್ತಿಜೀವನದಲ್ಲಿ ಉನ್ನತಿಯಾಗಲಿದ್ದು, ಪರೀಕ್ಷೆಯ ಸಿದ್ಧತೆಯಲ್ಲಿ ತೊಡಗಿರುವ ಜನರಿಗೆ ಯಶಸ್ಸು ಪ್ರಾಪ್ತಿಯಾಗಲಿದೆ. ಇದಲ್ಲದೆ ನಿಮ್ಮ ಆರ್ಥಿಕ ಸ್ಥಿತಿ ಸಾಕಷ್ಟು ಬಲಗೊಳ್ಳಲಿದೆ. ಧನ-ಧಾನ್ಯದ ವೃದ್ಧಿಯ ಜೊತೆಗೆ ಖುಷಿಗಳೇ ಖುಷಿಗಳ ಆಗಮನವಾಗಲಿದೆ. ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದ ಕೆಲಸ ಕಾರ್ಯಗಳು ಪುನಾರಂಭಗೊಳ್ಳಲಿವೆ. ಬಿಸ್ನೆಸ್ ನಲ್ಲಿ ಬರುವ ಅಡೆತಡೆಗಳು ದೂರಾಗಲಿವೆ.   

3 /5

ಸಿಂಹ ರಾಶಿ: ಸಿಂಹ ರಾಶಿಯಲ್ಲಿ ಈಗಾಗಲೇ ಸೂರ್ಯ ವಿರಾಜಮಾನನಾಗಿದ್ದಾನೆ. ಹೀಗಿರುವಾಗ ಅಮಲಾ ರಾಜಯೋಗ ರೂಪುಗೊಳ್ಳುವುದು ಈ ರಾಶಿಗಳ ಜಾತಕದವರಿಗೆ ವಿಶೇಷ ಲಾಭಗಳನ್ನು ತಂದು ಕೊಡಲಿದೆ. ಸರ್ಕಾರಿ  ನೌಕರಿಯ ಸಿದ್ಧತೆಯಲ್ಲಿ ತೊಡಗಿರುವವರಿಗೆ ಯಶಸ್ಸು ಪ್ರಾಪ್ತಿಯಾಗಲಿದೆ. ದೀರ್ಘಾವಧಿಯಿಂದ ನಿಂತುಹೋದ ಕೆಲಸಗಳು ಪುನಾರಂಭಗೊಳ್ಳಲಿವೆ. ಸಮಾಜದಲ್ಲಿ ಘನತೆ-ಗೌರವ ಹೆಚ್ಚಾಗಲಿದೆ. ಈ ಅವಧಿಯಲ್ಲಿ ಹಲವು ಸಾಧನೆಗಳನ್ನು ನೀವು ಮಾಡುವಿರಿ. ಕುಟುಂಬ ಸದಸ್ಯರ ಜೊತೆಗೆ ಒಳ್ಳೆಯ ಕಾಲ ಕಳೆಯುವಲ್ಲಿ ಯಶಸ್ವಿಯಾಗುವಿರಿ.   

4 /5

ಮೀನ ರಾಶಿ: ಅಮಲಾ ರಾಜಯೋಗ ರೂಪುಗೊಳ್ಳುವಿಕೆ ಮೀನ ರಾಶಿಯ ಜಾತಕದವರಿಗೆ ವಿಶೇಷ ಲಾಭಗಳನ್ನು ತಂದು ಕೊಡಲಿದೆ. ಈ ಅವಧಿಯಲ್ಲಿ ಹೂಡಿಕೆ ಮಾಡುವುದು ಸಾಕಷ್ಟು ಲಾಭವನ್ನು ತಂದುಕೊಡಲಿದೆ. ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ವ್ಯಾಪಾರದಲ್ಲಿ ಸವಾಲುಗಳು ಬರಬಹುದು. ಆದರೆ, ನೀವು ಅವುಗಳನ್ನು ಸುಲಭವಾಗಿ ದಾಟಿಕೊಂಡು ಮುಂದಕ್ಕೆ ಸಾಗುವಿರಿ. ನಿಮಗೆ ಭಾಗ್ಯದ ಸಂಪೂರ್ಣ ಸಾಥ್ ಸಿಗಲಿದೆ. ಮಕ್ಕಳ ಕಡೆಯಿಂದ ನಿಮಗೆ ಒಳ್ಳೆಯ ಸಮಾಚಾರ ಪ್ರಾಪ್ತಿಯಾಗಲಿದೆ.   

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)