ಸೆಪ್ಟೆಂಬರ್ 10ರಿಂದ ಪಿತೃ ಪಕ್ಷ ಪ್ರಾರಂಭ: ಪಿತೃ ದೋಷ ನಿವಾರಣೆಗೆ ಇಲ್ಲಿದೆ ಸುಲಭ ಪರಿಹಾರ

ಪೂರ್ವಜರ ಮರಣದ ಬಗ್ಗೆ ಯಾವುದೇ ಮಾಹಿತಿ ಇಲ್ಲದಿದ್ದರೆ ಅಮವಾಸ್ಯೆಯ ದಿನದಂದು ಶ್ರಾದ್ಧ ಮಾಡಬಹುದು.

ನವದೆಹಲಿ: ಈ ವರ್ಷ ಪಿತೃಪಕ್ಷ ಸೆಪ್ಟೆಂಬರ್ 10ರಿಂದ ಪ್ರಾರಂಭವಾಗುತ್ತಿದೆ. ಪಿತೃ ಪಕ್ಷದಲ್ಲಿ ಜನರು ತಮ್ಮ ಪೂರ್ವಜರನ್ನು ನೆನಸಿಕೊಳ್ಳುತ್ತಾರೆ. ಪೂರ್ವಜರ ಮರಣದ ದಿನಾಂಕದಂದು ಅವರ ಹೆಸರಿನಲ್ಲಿ ಶ್ರಾದ್ಧವನ್ನು ಮಾಡಲಾಗುತ್ತದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ ಪಿತೃ ಪಕ್ಷವು ಪೂರ್ವಜರಿಗೆ ಪಿಂಡವನ್ನು ದಾನ ಮಾಡಲು ಸಮರ್ಪಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಪಿತೃಪಕ್ಷದ ಸಮಯದಲ್ಲಿ ಮದುವೆ, ಕ್ಷೌರ, ಗೃಹಪ್ರವೇಶದಂತಹ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ ಮತ್ತು ಮನೆಗೆ ಹೊಸ ವಸ್ತುಗಳನ್ನು ಖರೀದಿಸುವುದಿಲ್ಲ. ಪಿತೃ ಪಕ್ಷದಲ್ಲಿ ಇಂತಹ ಕೆಲವು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ, ಇದು ಪಿತೃ ದೋಷವನ್ನು ನಿವಾರಿಸಲು ಸಹಕಾರಿಯಾಗುತ್ತದೆ ಎಂಬ ನಂಬಿಕೆ ಇದೆ.

2 /5

ಈ ವರ್ಷ ಪಿತೃಪಕ್ಷವು 10ನೇ ಸೆಪ್ಟೆಂಬರ್ 2022ರಿಂದ ಪ್ರಾರಂಭವಾಗುತ್ತದೆ. ಸೆಪ್ಟೆಂಬರ್ 25ರಂದು ಪಿತೃ ವಿಸರ್ಜನೆ ನಡೆಯಲಿದೆ. ಪಿತೃ ಪಕ್ಷದ ಈ 15 ದಿನಗಳಲ್ಲಿ ಪೂರ್ವಜರನ್ನು ಪೂಜಿಸಲಾಗುತ್ತದೆ, ತರ್ಪಣ ಮತ್ತು ಪಿಂಡದಾನ ಮಾಡಲಾಗುತ್ತದೆ. ಇದರಿಂದ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗುತ್ತದೆ ಮತ್ತು ಪೂರ್ವಜರು ಸಂತುಷ್ಟರಾಗುತ್ತಾರೆ ಎಂಬ ನಂಬಿಕೆ ಇದೆ.

3 /5

ಸರ್ವ ಪಿತೃ ಅಮಾವಾಸ್ಯೆಯ ದಿನದಂದು ಕಪ್ಪು ಎಳ್ಳು, ಬಿಳಿ ಚಂದನ, ಬಿಳಿ ಹೂವುಗಳನ್ನು ನೀರಿನಲ್ಲಿ ಅರಳಿ ಬೇರಿಗೆ ಅರ್ಪಿಸಬೇಕು. ಮರದ ಬಳಿ ಶುದ್ಧ ದೇಸಿ ತುಪ್ಪದ ದೀಪವನ್ನು ಬೆಳಗಿಸುವಾಗ ‘ಓಂ ಸರ್ವ ಪಿತೃ ದೇವಾಯ ನಮಃ’ ಎಂಬ ಮಂತ್ರವನ್ನು ಪಠಿಸಬೇಕು.  

4 /5

ಮನೆಯ ದಕ್ಷಿಣ ಗೋಡೆಯಲ್ಲಿ ಪೂರ್ವಜರ ಫೋಟೋವನ್ನು ಇರಿಸಿ ಮತ್ತು ಹೂವಿನ ಮಾಲೆ ಹಾಕಿ. ಹೀಗೆ ಮಾಡುವುದರಿಂದ ಪೂರ್ವಜರ ಆಶೀರ್ವಾದ  ಸಿಗಲಿದ್ದು, ಪಿತೃ ದೋಷದಿಂದ ಮುಕ್ತಿ ಸಿಗುತ್ತದೆ. ಪೂರ್ವಜರ ಮರಣದ ದಿನಾಂಕದಂದು ನಿರ್ಗತಿಕ ಮತ್ತು ಸದ್ಗುಣಶೀಲ ಬ್ರಾಹ್ಮಣರಿಗೆ ಅನ್ನದಾನ ಮಾಡಿ ದಕ್ಷಿಣೆ ನೀಡಬೇಕು.

5 /5

ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಬೇಕೆಂದು ಪಿಂಡ ದಾನದ ವಿಶೇಷ ಮಹತ್ವವನ್ನು ಹೇಳಲಾಗಿದೆ. ಪ್ರತಿಯೊಬ್ಬ ಮನುಷ್ಯನು ಪಿಂಡದ ಯೋನಿಯಡಿ ಹುಟ್ಟುತ್ತಾನೆ ಎಂಬುದು ಧಾರ್ಮಿಕ ನಂಬಿಕೆ. ಇದನ್ನು ಪಿಂಡ ರೂಪದಲ್ಲಿಯೂ ನೀಡಲಾಗುತ್ತದೆ. ಪೂರ್ವಜರ ಮರಣದ ಬಗ್ಗೆ ಯಾವುದೇ ಮಾಹಿತಿ ಇಲ್ಲದಿದ್ದರೆ ಅಮವಾಸ್ಯೆಯ ದಿನದಂದು ಶ್ರಾದ್ಧ ಮಾಡಬಹುದು.