Plant For Navagraha: ಜಾತಕದಲ್ಲಿನ ಗ್ರಹಗಳನ್ನು ಶಾಂತಗೊಳಿಸುತ್ತವೆ ಈ ಗಿಡ-ಮರಗಳು, ಕ್ಷನಾರ್ಧದಲ್ಲಿ ಭಾಗ್ಯ ಬದಲಾಯಿಸುತ್ತವೆ

Astro Remedies For Navagraha: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಜಾತಕದಲ್ಲಿ 9 ಗ್ರಹಗಳು ಮತ್ತು 27 ನಕ್ಷತ್ರಗಳಿವೆ. ಈ ಗ್ರಹಗಳಲ್ಲಿ ಯಾವುದಾದರೂ ಒಂದು ಗ್ರಹವು ಮುನಿಸಿಕೊಂಡರೆ ಅಥವಾ ಅಶುಭ ಸ್ಥಿತಿಯಲ್ಲಿದ್ದರೆ, ವ್ಯಕ್ತಿಯ ಜೀವನದಲ್ಲಿ ಹಲವು ತೊಂದರೆಗಳು ಎದುರಾಗುತ್ತವೆ. 

Astro Remedies For Navagraha: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಜಾತಕದಲ್ಲಿ 9 ಗ್ರಹಗಳು ಮತ್ತು 27 ನಕ್ಷತ್ರಗಳಿವೆ. ಈ ಗ್ರಹಗಳಲ್ಲಿ ಯಾವುದಾದರೂ ಒಂದು ಗ್ರಹವು ಮುನಿಸಿಕೊಂಡರೆ ಅಥವಾ ಅಶುಭ ಸ್ಥಿತಿಯಲ್ಲಿದ್ದರೆ, ವ್ಯಕ್ತಿಯ ಜೀವನದಲ್ಲಿ ಹಲವು ತೊಂದರೆಗಳು ಎದುರಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಜಾತಕದಲ್ಲಿ ಎಲ್ಲಾ ಒಂಬತ್ತು ಗ್ರಹಗಳ ಸ್ಥಿತಿಯನ್ನು ಸುಧಾರಿಸಲು ಕೆಲವು ಮರಗಳು ಮತ್ತು ಸಸ್ಯಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ, ಈ ಗಿಡಮರಗಳು  ಗ್ರಹ ದೋಷಗಳನ್ನು ತೊದೆದುಹಾಕುತ್ತವೆ ಮತ್ತು ಇದರಿಂದ ವ್ಯಕ್ತಿಯ ಭಾಗ್ಯವೂ ಕೂಡ ಬೆಳಗುತ್ತದೆ.

 

ಇದನ್ನೂ ಓದಿ-Weight Loss: ಸುಷ್ಮಿತಾ ಸೆನ್ ರಂತೆ ಫಿಗರ್ ಬೇಕಿದ್ರೆ ಈ ರೀತಿ ಕಾಫಿ ಸೇವಿಸಿ

 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

1. ಜ್ಯೋತಿಷ್ಯ ಶಾಸ್ತ್ರದಲ್ಲಿ ಕೇತು ಗ್ರಹವನ್ನು ಛಾಯಾ ಗ್ರಹ ಎಂದು ಪರಿಗಣಿಸಲಾಗಿದೆ. ಹೀಗಿರುವಾಗ ಜಾತಕದಲ್ಲಿ ಕೇತುವಿನ ಕೆಟ್ಟ ಸ್ಥಾನವು ವ್ಯಕ್ತಿಯ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಉಂಟುಮಾಡುತ್ತದೆ. ಕೇತುವಿನ ಸ್ಥಿತಿಯನ್ನು ಸರಿಪಡಿಸಲು ಅಶ್ವಗಂಧ ಸಸ್ಯವನ್ನು ಪೂಜಿಸಬೇಕು. ಈ ಗಿಡವನ್ನು ಪೂಜಿಸುವುದರಿಂದ ವ್ಯಕ್ತಿಯ ಮಾನಸಿಕ ಸಮಸ್ಯೆಗಳು ದೂರಾಗುತ್ತವೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ಈ ಗಿಡವನ್ನು ಪೂಜಿಸುವುದರಿಂದ ಮನುಷ್ಯನ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.  

2 /8

2. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶಮಿ ಸಸ್ಯವು ಶನಿ ಗ್ರಹಕ್ಕೆ ಸಂಬಂಧಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಶನಿವಾರದಂದು ಶಮಿಯ ಗಿಡಕ್ಕೆ ನೀರು ಹಾಕಿ ಪೂಜಿಸುವುದರಿಂದ ಶನಿಯ ಅನುಗ್ರಹ ದೊರೆಯುತ್ತದೆ. ಹಾಗೆಯೇ ಜೀವನದಲ್ಲಿ ಬರುವ ಅಡೆತಡೆಗಳು ದೂರವಾಗುತ್ತವೆ.  

3 /8

3. ಯಾವುದೇ ವ್ಯಕ್ತಿಯ ಜಾತಕದಲ್ಲಿ ರಾಹು ಅಶುಭ ಫಲಿತಾಂಶಗಳನ್ನು ನೀಡುತ್ತಿದ್ದರೆ ಅಥವಾ ರಾಹು ಮುನಿಸಿಕೊಂಡಿದ್ದರೆ, ವ್ಯಕ್ತಿಯು ಜೀವನದಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಈ ತೊಂದರೆಗಳನ್ನು ಹೋಗಲಾಡಿಸಲು ಶ್ರೀಗಂಧದ ಮರವನ್ನು ಪೂಜಿಸುವುದು ಶ್ರೇಯಸ್ಕರ.  

4 /8

4. ವಿಷ್ಣುವು ಅಶ್ವತ್ಥ  ಮರದಲ್ಲಿ ನೆಲೆಸಿದ್ದಾನೆ ಎಂದು ಹೇಳಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಗುರು ಗ್ರಹದ ಶುಭ ಫಲಿತಾಂಶಗಳಿಗಾಗಿ ಅಶ್ವತ್ಥ ಮರಕ್ಕೆ ನಿಯಮಿತವಾಗಿ ನೀರನ್ನು ಅರ್ಪಿಸಬೇಕು. ಮತ್ತೊಂದೆಡೆ, ಗುರುವಾರದಂದು ಅಶ್ವತ್ಥ ಮರವನ್ನು ಪೂಜಿಸುವುದರಿಂದ, ಒಬ್ಬ ವ್ಯಕ್ತಿಯು ವಿಷ್ಣುವಿನ ಆಶೀರ್ವಾದವನ್ನು ಪಡೆಯುತ್ತಾನೆ.  

5 /8

5. ಜಾತಕದಲ್ಲಿ ಬುಧನ ಕೆಟ್ಟ ಸ್ಥಾನವನ್ನು ನಿವಾರಿಸಲು ಉತ್ತರಾಣಿ ಸಸ್ಯವನ್ನು ಪೂಜಿಸಬೇಕು. ಜಾತಕದಲ್ಲಿ ಬುಧನ ಕೆಟ್ಟ ಸ್ಥಾನವು ವ್ಯಕ್ತಿಯ ದೈಹಿಕ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.ಉತ್ತರಾಣಿ ಸಸ್ಯವನ್ನು ಈ ರೀತಿ ಪೂಜಿಸುವುದರಿಂದ ಜಾತಕದಲ್ಲಿ ಬುಧ ಗ್ರಹವು ಶಾಂತವಾಗುತ್ತದೆ.  

6 /8

6. ಖದಿರ ಕಗ್ಗಲಿ ಗಿಡ ಮಂಗಳ ಗ್ರಹಕ್ಕೆ ಸಂಬಂಧಿಸಿದೆ. ಇದನ್ನು ಕಥಾ ಎಂದೂ ಕೂಡ ಕರೆಯುತ್ತಾರೆ. ನಿತ್ಯವೂ ಈ ಗಿಡವನ್ನು ಪೂಜಿಸುವುದರಿಂದ ರಕ್ತ ಸಂಬಂಧಿ ಕಾಯಿಲೆಗಳು, ಚರ್ಮ ಸಂಬಂಧಿ ಕಾಯಿಲೆಗಳು ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ. ವ್ಯಕ್ತಿಯ ಪ್ರತಿಷ್ಠೆ ಹೆಚ್ಚಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮಂಗಳವನ್ನು ಶಾಂತಗೊಳಿಸಲು, ಈ ಸಸ್ಯದ ಪೂಜೆಯು ಮಂಗಳಕರ ಮತ್ತು ಫಲಪ್ರದವೆಂದು ಸಾಬೀತಾಗುತ್ತದೆ.  

7 /8

7. ಪಲಾಶ್ ಅಥವಾ ಮುತ್ತುಗದ ಗಿಡವನ್ನು ಸಸ್ಯವು ಚಂದ್ರ ಗ್ರಹಕ್ಕೆ ಸಂಬಂಧಿಸಿದೆ. ಚಂದ್ರನನ್ನು ಮನಸ್ಸಿನ ಮುಖ್ಯ ಕಾರಕ ಗ್ರಹ ಏನು ಪರಿಗಣಿಸಲಾಗಿದೆ. ಈ ಗಿಡವನ್ನು ಪೂಜಿಸುವುದರಿಂದ ಮನಸ್ಸು ಪ್ರಶಾಂತವಾಗುತ್ತದೆ ಎಂದು ಹೇಳಲಾಗುತ್ತದೆ. ಇದರೊಂದಿಗೆ, ವ್ಯಕ್ತಿಯು ಮಾನಸಿಕ ಅಸ್ವಸ್ಥತೆಯನ್ನು ಸಹ ತೊಡೆದುಹಾಕುತ್ತಾನೆ. ಈ ಸಸ್ಯದ ಎಲೆಗಳನ್ನು ಪೂಜಿಸುವುದರಿಂದ ವ್ಯಕ್ತಿಗೆ ಶುಭ ಫಲಿತಾಂಶಗಳು ಪ್ರಾಪ್ತಿಯಾಗುತ್ತವೆ.  

8 /8

8. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಎಕ್ಕದ ಗಿಡ ಅಥವಾ ಎಕ್ಕಿಗಿಡ ಸೂರ್ಯನಿಗೆ ಸಂಬಂಧಿಸಿದೆ. ಇದನ್ನು ಆಕ್ ಅಥವಾ ಆಕಂಡ್ ಸಸ್ಯ ಎಂದೂ ಕರೆಯುತ್ತಾರೆ. ಶಾಸ್ತ್ರಗಳ ಪ್ರಕಾರ, ಈ ಸಸ್ಯವನ್ನು ಪೂಜಿಸುವುದರಿಂದ ಇದು ವ್ಯಕ್ತಿಯ ಬೌದ್ಧಿಕ ಬೆಳವಣಿಗೆಗೆ ಕಾರಣವಾಗುತ್ತದೆ. ಜಾತಕದಲ್ಲಿ ಸೂರ್ಯನ ಸ್ಥಾನವು ಅನುಕೂಲಕರವಾಗಿರಲು, ಭಾನುವಾರದಂದು ಪೂಜೆ ಮಾಡಿ ಸೂರ್ಯನ ಕೃಪಾಕಟಾಕ್ಷಕ್ಕೆ ಪಾತ್ರರಾಗುವುದು ಉತ್ತಮ.