Naga Chaturthi 2024: ನಾಗ ಚತುರ್ಥಿಯ ಪೂಜಾ ವಿಧಾನ, ಮಂಗಳಕರ ಸಮಯ ಮತ್ತು ಮಹತ್ವವನ್ನು ತಿಳಿಯಿರಿ

Naga Chaturthi Pooja Vidhi: ಶ್ರಾವಣ ಮಾಸದ ಶುಕ್ಲ ಪಕ್ಷದ ನಾಲ್ಕನೇ ದಿನವನ್ನು ನಾಗ ಚತುರ್ಥಿ ಎಂದು ಆಚರಿಸಲಾಗುತ್ತದೆ. ಇದನ್ನು ನಾಗರ ಚೌತಿ ಎಂದು ಕರೆಯಲಾಗುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

ಶ್ರಾವಣ ಶುಕ್ಲ ಪಕ್ಷದ ಚತುರ್ಥಿಯನ್ನು ನಾಗ ಚತುರ್ಥಿ ಅಥವಾ ನಾಗರ ಚೌತಿ ಎಂದು ಕರೆಯಲಾಗುತ್ತದೆ. ಈ ದಿನ ಮಹಿಳೆಯರು ತಮ್ಮ ಗಂಡ ಮತ್ತು ಮಕ್ಕಳ ದೀರ್ಘಾಯುಷ್ಯ ಮತ್ತು ಸಂತೋಷದ ಜೀವನಕ್ಕಾಗಿ ಉಪವಾಸವನ್ನು ಆಚರಿಸುತ್ತಾರೆ. 

2 /8

ನಂಬಿಕೆಗಳ ಪ್ರಕಾರ, ಈ ದಿನದಂದು ಸರ್ಪ ದೇವರನ್ನು ಪೂಜಿಸುವುದರಿಂದ ಕಾಲಸರ್ಪ ಮತ್ತು ರಾಹು-ಕೇತುಗಳ ದುಷ್ಪರಿಣಾಮಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ. ಈ ಹಬ್ಬವನ್ನು ನಾಗ ಪಂಚಮಿಯ ಒಂದು ದಿನ ಮೊದಲು ಆಚರಿಸಲಾಗುತ್ತದೆ.

3 /8

ಈ ವರ್ಷ ಆಗಸ್ಟ್ 8 ರಂದು ನಾಗ ಚತುರ್ಥಿಯನ್ನು ಆಚರಿಸಲಾಗುತ್ತಿದೆ. ಹಾಗಾಗಿ ನಾಗ ಪಂಚಮಿಯನ್ನು ಆಗಸ್ಟ್ 9 ರಂದು ಆಚರಿಸಲಾಗುತ್ತದೆ. ನಾಗ ಚತುರ್ಥಿಯ ದಿನದಂದು ಭಕ್ತರು ನಾಗದೇವತೆಗಳನ್ನು ಪೂಜಿಸುತ್ತಾರೆ.

4 /8

ಈ ದಿನ ಹಾವಿನ ಹುತ್ತಕ್ಕೆ ಹಾಲನ್ನು ನೈವೇದ್ಯ ಮಾಡಿ ಪೂಜಿಸುತ್ತಾರೆ. ಮಹಿಳೆಯರು ಇಡೀ ದಿನ ಉಪವಾಸವನ್ನು ಆಚರಿಸುತ್ತಾರೆ. ದೇವಾಲಯಗಳಿಗೆ ಹೋಗುತ್ತಾರೆ ಮತ್ತು ನಾಗ ದೇವರ ವಿಗ್ರಹಗಳಿಗೆ ನೀರು ಮತ್ತು ಹಾಳು ಎರೆಯುತ್ತಾರೆ.

5 /8

ಇದರ ನಂತರ, ವಿಗ್ರಹಗಳ ಮೇಲೆ ಅರಿಶಿನವನ್ನು ಲೇಪಿಸಲಾಗುತ್ತದೆ ಮತ್ತು ಅವುಗಳ ಮೇಲೆ ಕುಂಕುಮ ಚುಕ್ಕೆಗಳನ್ನು ಹಾಕಲಾಗುತ್ತದೆ. ನಂತರ, ಧೂಪದ್ರವ್ಯ ಮತ್ತು ಪ್ರಸಾದವನ್ನು ಅರ್ಪಿಸಲಾಗುತ್ತದೆ. ಅಂತಿಮವಾಗಿ ಆರತಿ ಮಾಡಲಾಗುತ್ತದೆ.

6 /8

ಒಂಬತ್ತು ಸರ್ಪ ದೇವತೆಗಳಾದ ಶೇಷ, ಪದ್ಮನಾಭ, ಕಂಬಳ, ಅನಂತ, ವಾಸುಕಿ, ಧೃತರಾಷ್ಟ್ರ, ಶಂಖಪಾಲ, ತಕ್ಷಕ ಮತ್ತು ಕಾಳಿಯರ ಆಶೀರ್ವಾದವನ್ನು ಪಡೆಯಲು ಸರ್ಪ ಸೂಕ್ತಂ ಸ್ತೋತ್ರವನ್ನು ಈ ದಿನ ಹೇಳಬಹುದು.

7 /8

ನಾಗ ಚತುರ್ಥಿಯಂದು ರಾಹು-ಕೇತುಗಳನ್ನು ಪೂಜಿಸುವುದರಿಂದ ಜಾತಕದ ಮೇಲೆ ಅವರ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ. ನಾಗದೇವತೆಗಳನ್ನು ಪೂಜಿಸುವುದರಿಂದ ನಮ್ಮ ಪೂರ್ವಜರಿಂದ ಬಂದಿರುವ ನಾಗಶಾಪದಿಂದ ಮುಕ್ತಿಯೂ ಸಿಗುತ್ತದೆ. 

8 /8

ಸೂಚನೆ: ಪ್ರಿಯ ಓದುಗರೇ ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ತಜ್ಞರ ಸಲಹೆಯನ್ನು ಪಡೆಯಿರಿ. Zee Kannada News ಇದನ್ನು ಖಚಿತಪಡಿಸುವುದಿಲ್ಲ.