Mahashivratri 2024 Horoscope: ಮೂರು ಶತಮಾನಗಳ ಬಳಿಕ ಮಹಾಶಿವರಾತ್ರಿ ದಿನ ಅಪರೂಪದ ಯೋಗ, ಶಿವ-ಪಾರ್ವತಿ ಕೃಪೆಯಿಂದ ಈ ಜನರಿಗೆ ಅಪಾರ ಸಿರಿ-ಸಂಪತ್ತು ಪ್ರಾಪ್ತಿಯ ಯೋಗ!

Mahashivratri 2024 Horoscope: ಈ ಬಾರಿ ಮಾರ್ಚ್ 8, 2024 ರಂದು ಮಹಾಶಿವರಾತ್ರಿಯ ಮಹಾಪರ್ವ ಬೀಳುತ್ತಿದೆ. ಈ ದಿನ ಹಲವು ಅಪರೂಪದ ಯೋಗಗಳು ರಚನೆಯಾಗುತ್ತಿವೆಲ. ಇದರಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಶಿವ-ಪಾರ್ವತಿಯ ಕೃಪೆಯಿಂದ ಅಪಾರ ಧನ ಸಂಪತ್ತು ಹರಿದುಬಂದು ಅವರಿಗೆ ವಿಶೇಷ ಲಾಭಗಗಳಾಗಲಿವೆ. (Spiritual News In Kannada)
 

Mahashivratri 2024 Horoscope: ಹಿಂದೂ ಧರ್ಮ ಶಾಸ್ತ್ರದಲ್ಲಿ ಮಹಾಶಿವರಾತ್ರಿಗೆ ವಿಶೇಷ ಮಹತ್ವ ಕಲ್ಪಿಸಲಾಗಿದೆ. ಈ ದಿನವನ್ನು ದೇವಾಧಿದೇವ ಮಹಾದೇವನಿಗೆ ಸಮರ್ಪಿಸಲಾಗಿದೆ. ಈ ದಿನ ಉಪವಾಸ ಕೈಗೊಂಡು, ಶಿವಶಂಕರನಿಗೆ ವಿಧಿವಿಧಾನಗಳ ಮೂಲಕ ಪೂಜೆ ಸಲ್ಲಿಸುವುದರಿಂದ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ಲಭಿಸುತ್ತದೆ ಮತ್ತು ಜೀವನದಲ್ಲಿ ಸುಖ-ಸಮೃದ್ಧಿ ಹೆಚ್ಚಾಗುತ್ತದೆ. ಫಾಲ್ಗುಣ ಮಾಸದ ಕೃಷ್ಣಪಕ್ಷದ ಚತುರ್ಥಿಯ  ತಿಥಿಯಂದು ಮಹಾಶಿವರಾತ್ರಿಯ ವೃತವನ್ನು ಕೈಗೊಳ್ಳಲಾಗುತ್ತದೆ. ಈ ಬಾರಿ ಫೆಬ್ರುವರಿ 8, 2024 ರಂದು ಶುಕ್ರವಾರದ ದಿನ ಮಹಾ ಶಿವರಾತ್ರಿ ಆಚರಿಸಲಾಗುತ್ತಿದೆ. ಇನ್ನೊಂದೆಡೆ ಜೋತಿಷ್ಯ ಶಾಸ್ತ್ರದ ಪ್ರಕಾರ ಈ ದಿನ ಹಲವು ಅಪರೂಪದ ಯೋಗಗಳು ರಚನೆಯಾಗುತ್ತಿವೆ. ಇಂತಹ ಅಪರೂಪದ ಯೋಗ ಮೂರುನೂರು ವರ್ಷಗಳಲ್ಲಿ ಒಮ್ಮೆ ನಿರ್ಮಾಣಗೊಳ್ಳುತ್ತದೆ ಎನ್ನಲಾಗುತ್ತದೆ. ಇದರಿಂದ ಕೆಲ ರಾಶಿಗಳ ಜಾತಕದ್ವಾರ ಮೇಲೆ ಶಿವ ಪಾರ್ವತಿಯ ವಿಶೇಷ ಕೃಪೆ ಇರಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ, (Spiritual News In Kannada)

 

ಇದನ್ನೂ ಓದಿ-Double Rajyog: ಬುದ್ಧಿದಾತ ಬುಧನಿಂದ 'ಡಬಲ್ ರಾಜಯೋಗ' ರಚನೆ, ಈ ಜನರಿಗೆ ಕುಬೇರ ನಿಧಿ ಪ್ರಾಪ್ತಿ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ವೈದಿಕ ಪಂಚಾಂಗದ ಪ್ರಕಾರ ಮಹಾಶಿವರಾತ್ರಿಯ ದಿನ ಬೆಳಗ್ಗೆ 4 ಗಂಟೆ 45 ನಿಮಿಷದಿಂದ ಶಿವಯೋಗ ಇರಲಿದೆ. ಇದರ ಜೊತೆಗೆ ಬೆಳಗ್ಗೆ 6 ಗಂಟೆ 45 ನಿಮಿಷದಿಂದ ಸರ್ವಾರ್ಥಸಿದ್ಧಿ ಯೋಗ ಆರಂಭಗೊಳ್ಳಲಿದ್ದು, ಇದು 10 ಗಂಟೆ 41 ನಿಮಿಷದವರೆಗೆ ಇರಲಿದೆ. ಮಹಾಶಿವರಾತ್ರಿಯ ದಿನ ಇಂತಹ ಶುಭ ಕಾಕತಾಳೀಯ 300 ವರ್ಷಗಳ ಬಳಿಕ ರಚನೆಯಾಗುತ್ತಿದೆ. ಗ್ರಹಗಳ ಸ್ಥಿತಿಗತಿ ಕುರಿತು ಹೇಳುವುದಾದರೆ, ಮಕರ ರಾಶಿಯಲ್ಲಿ ಮಂಗಳ ಹಾಗೂ ಚಂದ್ರನ ಮೈತ್ರಿ ಇರಲಿದೆ. ಇದರಿಂದ ಶಶಿ ಮಂಗಳ ಯೋಗ ರಚನೆಯಾಗುತ್ತಿದೆ. ಇದರ ಜೊತೆಗೆ ಕುಂಭ ರಾಶಿಯಲ್ಲಿ ಶುಕ್ರ, ಶನಿ ಹಾಗೂ ಸೂರ್ಯರ ತ್ರಿಗ್ರಹಿ ಯೋಗ ಕೂಡ ನಿರ್ಮಾಣಗೊಳ್ಳಲಿದೆ. ಮೀನ ರಾಶಿಯಲ್ಲಿ ರಾಹು ಮತ್ತು ಬುಧನ ಮೈತ್ರಿಯೂ ನೆರವೇರಲಿದೆ. ಇಂತಹ ಸಂಯೋಜನೆ ಹಲವು ರಾಶಿಗಳ ಜನರ ಜೀವನದಲ್ಲಿ ಭಾರಿ ಖುಷಿಗಳನ್ನೇ ತರಲಿವೆ.   

2 /5

ಮೇಷ ರಾಶಿ: ಮೇಷ ರಾಶಿಯ ಜಾತಕದವರ ಮೇಲೆ ದೇವಾಧಿದೇವ ಮಹಾದೇವನ ವಿಶೇಷ ಕೃಪೆ ಇರಲಿದೆ. ಈ ರಾಶಿಯ ಜನರಿಗೆ ವಿತ್ತೀಯ ಲಾಭದ ಜೊತೆಗೆ ಇಷ್ಟಾರ್ಥಗಳು ನೆರವೇರಲಿವೆ. ಕರಿಯರ್ ನಲ್ಲಿ ಉನ್ನತಿ, ಪದೋನ್ನತಿ ಸಿಗುವ ಪ್ರಬಲ ಯೋಗ ರಚನೆಯಾಗುತ್ತಿದೆ. ಆದಾಯ ಹೆಚ್ಚಾಗಲಿದೆ. ಕಠಿಣ ಪರಿಶ್ರಮದ ಫಲ ಇದೀಗ ನಿಮಗೆ ಸಿಗಲಿದೆ. ನಿಮ್ಮೊಳಗೆ ನೇತೃತ್ವದ ಕ್ಷಮತೆ ಹೆಚ್ಚಾಗಲಿದೆ. ವೃತ್ತಿ ಜೀವನ ಕ್ಷೇತ್ರದಲ್ಲಿ ನಡೆದುಕೊಂಡು ಬಂದ ಎಲ್ಲಾ ಸಮಸ್ಯೆಗಳು ಅಂತ್ಯವಾಗಲಿವೆ ಹಾಗೂ ಉನ್ನತಿಯ ಮಾರ್ಗ ಅಡೆತಡೆಗಳಿನ ಮುಕ್ತವಾಗಲಿದೆ. ಬಿಸ್ನೆಸ್ ಕುರಿತು ಹೇಳುವುದಾದರೆ. ನಿಮಗೆ ಹಲವು ಸುವರ್ಣಾವಕಾಶಗಳು ಸಿಗಳಿವೆ. ಇದರಿಂದ ನಿಮಗೆ ಅಪಾರ ಲಾಭ ಉಂಟಾಗಲಿದೆ. ಆರ್ಥಿಕ ಸ್ಥಿತಿಯ ಕುರಿತು ಹೇಳುವುದಾದರೆ, ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ. ಈ ಹಿಂದೆ ನೀವು ಮಾಡಿದ ಹೂಡಿಕೆಯ ಲಾಭ ನಿಮಗೆ ಸಿಗಲಿದೆ. ಆರೋಗ್ಯದ ಮೇಲೂ ಕೂಡ ಅನುಕೂಲಕರ ಪ್ರಭಾವ ಉಂಟಾಗಲಿದೆ.   

3 /5

ಮಿಥುನ ರಾಶಿ: ಈ ಜಾತಕದ ಜನರ ಮೇಲೂ ಕೂಡ ಶಿವನ ಅಪಾರ ಕೃಪೆ ಇರಲಿದೆ. ವೃತ್ತಿಪರ ಜೀವನದ ಕುರಿತು ಹೇಳುವುದಾದರೆ, ನಿಮಗೆ ಬಡ್ತಿ ಸಿಗುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿವೆ. ನಿಮ್ಮದೇ ಆದ ಛಾಪು ಮೂಡಿಸುವಲ್ಲಿ ನೀವು ಯಶಸ್ವಿಯಾಗುವಿರಿ. ಬಿಸ್ನೆಸ್ ಕುರಿತು ಹೇಳುವುದಾದರೆ, ಹಲವು ಹೊಸ ಡೀಲ್ ಗಳಿಗೆ ನೀವು ಸೈನ್ ಮಾಡಬಹುದು. ಭವಿಷ್ಯದಲ್ಲಿ ಅವುಗಳಿಂದ ನಿಮಗೆ ಲಾಭ ಸಿಗಲಿದೆ. ಸಂಬಂಧಗಳಲ್ಲಿಯೂ ಕೂಡ ಲಾಭ ನಿಮ್ಮದಾಗಲಿದೆ. ಶಿವನ ಕೃಪೆಯಿಂದ ದೀರ್ಘಾವಧಿಯಿಂದ ನಿಂತುಹೋದ ಕೆಲಸಗಳು ಮತ್ತೆ ಆರಂಭಗೊಳ್ಳಲಿವೆ ಮತ್ತು ಅವುಗಳಲ್ಲಿ ಯಶಸ್ಸು ನಿಮ್ಮದಾಗಲಿದೆ.   

4 /5

ಸಿಂಹ ರಾಶಿ: ಸಿಂಹ ರಾಶಿಯ ಜಾತಕದವರಿಗೂ ಕೂಡ ಶಿವರಾತ್ರಿ ವಿಶೇಷ ಫಲಗಳನ್ನು ನೀಡಲಿದೆ. ಹಣ ಗಳಿಕೆಯ ಹಲವು ಅವಕಾಶಗಳು ನಿಮಗೆ ಒದಗಿಬರಲಿವೆ. ಪಾಟ್ನರ್ಶಿಪ್ ನಲ್ಲಿ ಮಾಡಲಾದ ಬಿಸ್ನೆಸ್ ನಿಂದ ನಿಮಗೆ ಅಪಾರ ಲಾಭ ಸಿಗಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಇದರ ಜೊತೆಗೆ ಸಾಲಬಾಧೆಯಿಂದ ಮುಕ್ತಿ ಸಿಗಲಿದೆ ಹಾಗೂ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. ಹೊಸ ವಾಹನ, ಮನೆ ಅಥವಾ ಸಂಪತ್ತನ್ನು ಖರೀದಿಸುವ ನಿಮ್ಮ ಕನಸು ನನಸಾಗಲಿದೆ. ಶಿವ ಪಾರ್ವತಿಯ ಕೃಪೆಯಿಂದ ಅವಿವಾಹಿತರಿಗೆ ಯೋಗ್ಯ ಸ್ಥಳ ಅರಿಸಿಕೊಂಡು ಬರಲಿದೆ. ಲವ್ ಲೈಫ್ ಕೂಡ ಉತ್ತಮವಾಗಿರಲಿದೆ.   

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)