Lucky Zodiac Signs:ಈ ಐದು ರಾಶಿಗಳ ಜನರ ಮೇಲೆ ತಾಯಿ ಲಕ್ಷ್ಮಿಯ ವಿಶೇಷ ಅನುಗ್ರಹ ಇರುತ್ತದೆ, ಜೀವನದಲ್ಲಿ ಖಂಡಿತ ಶ್ರೀಮಂತರಾಗುತ್ತಾರೆ

Astrology: ಕೆಲವರು ಜೀವನದಲ್ಲಿ ಎಷ್ಟೇ ಕಷ್ಟದ ಪರಿಸ್ಥಿತಿ ಎದುರಿಸಲಿ ಅಥವಾ ಬಡಕುಟುಂಬದಲ್ಲಿಯೇ ಜನಿಸಲಿ, ಒಂದಿಲ್ಲ ಒಂದು ದಿನ ಅವರು ಶ್ರೀಮಂತರಾಗಿಯೇ ತೀರುತ್ತಾರೆ. 

Astrology: ಕೆಲವರು ಜೀವನದಲ್ಲಿ ಎಷ್ಟೇ ಕಷ್ಟದ ಪರಿಸ್ಥಿತಿ ಎದುರಿಸಲಿ ಅಥವಾ ಬಡಕುಟುಂಬದಲ್ಲಿಯೇ ಜನಿಸಲಿ, ಒಂದಿಲ್ಲ ಒಂದು ದಿನ ಅವರು ಶ್ರೀಮಂತರಾಗಿಯೇ ತೀರುತ್ತಾರೆ. ಅವರ ಬಳಿ ಅಪಾರ ಹಣ ಬರುತ್ತದೆ. ಈ ಹಣವನ್ನು ಅವರು ತಮ್ಮ ಯೋಗ್ಯತೆ ಮತ್ತು ಪರಿಶ್ರಮದಿಂದ ಗಳಿಸುತ್ತಾರೆ. ಈ ಜನರಿಗೆ ಅದೃಷ್ಟದ ವಿಶೇಷ ಬೆಂಬಲ ಇರುತ್ತದೆ. ಈ ರಾಶಿಗಳ ಜನರ ಮೇಲೆ ತಾಯಿ ಲಕ್ಷ್ಮಿಯ ವಿಶೇಷ ಅನುಗ್ರಹ ಇರುತ್ತದೆ.

 

ಇದನ್ನೂ ಓದಿ-Cholesterol Lowering Drinks: ಹೈ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಇಲ್ಲಿವೆ 4 ಸೂಪರ್ ಡ್ರಿಂಕ್ಸ್, ಇಂದೇ ಟ್ರೈ ಮಾಡಿ ನೋಡಿ

 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

1. ವೃಷಭ ರಾಶಿ- ಶುಕ್ರ ವೃಷಭ ರಾಶಿಗೆ ಅಧಿಪತಿ. ಇದೆ ಕಾರಣ ವೃಷಭ ರಾಶಿಯ ಜನರು ಸಾಕಷ್ಟು ಐಶಾರಾಮಿ ಜೀವನ ಸಾಗಿಸುತ್ತಾರೆ. ಇವರ ಪ್ರಣಯ ಜೀವನವೂ ಕೂಡ ಸಾಕಷ್ಟು ಮಧುರತೆಯಿಂದ ಕೂಡಿರುತ್ತದೆ. ಈ ಜನರಿಗೆ ಅಪಾರ ಹಣ ಸಂಪಾದಿಸುವ ಬಯಕೆ ಹಾಗೂ ಸಾಮರ್ಥ್ಯ ಇರುತ್ತದೆ. ಇದಲ್ಲದೆ ಇವರು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾರೆ.  

2 /5

2. ಕರ್ಕ ರಾಶಿ- ಚಂದ್ರ ಕರ್ಕ ರಾಶಿಗೆ ಅಧಿಪತಿ. ತಮ್ಮ ಅದೃಷ್ಟ ಹಾಗೂ ಶ್ರಮದಿಂದ ಕರ್ಕ ರಾಶಿಯ ಜನರು ಅಪಾರ ಹಣ ಸಂಪಾದಿಸುತ್ತಾರೆ. ತಮ್ಮ ಗುರಿಯನ್ನು ಬೆನ್ನಟ್ಟುವ ಇವರ ಅಭ್ಯಾಸ ಇವರನ್ನು ಅತ್ಯಂತ ಶ್ರೀಮಂತ ಹಾಗೂ ಯಶಸ್ವಿಯನ್ನಾಗಿ ಮಾಡುತ್ತದೆ. ತಾಯಿ ಲಕ್ಷ್ಮಿಯ ಕೃಪೆಯಿಂದ ಇವರ ಜೀವನದಲ್ಲಿ ಯಾವುದೇ ಸಂಗತಿಯ ಕೊರತೆ ಇರುವುದಿಲ್ಲ. 

3 /5

3. ಸಿಂಹ ರಾಶಿ- ಸಿಂಹ ರಾಶಿಗೆ ಸೂರ್ಯ ಅಧಿಪತಿ. ಸೂರ್ಯನ ಪ್ರಭಾವದ ಕಾರಣ ಇವರ ವ್ಯಕ್ತಿತ್ವ ಕೂಡ ಸೂರ್ಯನಂತೆಯೇ ಇರುತ್ತದೆ ಹಾಗೂ ಇವರು ಆತ್ಮವಿಶ್ವಾಸದಿಂದ ತುಂಬಿರುತ್ತಾರೆ. ಇವರು ಉತ್ತಮ ನಾಯಕ ಸಾಬೀತಾಗುತ್ತಾರೆ ಮತ್ತು ಸಾಕಷ್ಟು ಹಣ, ಹೆಸರು ಸಂಪಾದಿಸುತ್ತಾರೆ ಮತ್ತು ಉನ್ನತ ಹುದ್ದೆಯನ್ನು ಅಲಂಕರಿಸುತ್ತಾರೆ.

4 /5

4. ವೃಶ್ಚಿಕ ರಾಶಿಗೆ ಮಂಗಳ ಅಧಿಪತಿ. ಈ ಕಾರಣದಿಂದ ಈ ರಾಶಿಯ ಜನರು ತುಂಬಾ ಶೂರರು ಹಾಗೂ ನಿರ್ಭಯರಾಗಿರುತ್ತಾರೆ. ಯಾವುದೇ ರೀತಿಯ ಅಪಾಯ ಎದುರಿಸಲು ಇವರು ಎಂದಿಗೂ ಕೂಡ ಹಿಂಜರಿಯುವುದಿಲ್ಲ. ಇವರು ತಮ್ಮ ಕಠಿಣ ಪರಿಶ್ರಮ ಹಾಗೂ ಬುದ್ಧಿಯ ಕಾರಣ ಧನವಂತರಾಗುತ್ತಾರೆ ಹಾಗೂ ಸುಖ ಸೌಕರ್ಯಗಳನ್ನು ಸಂಪಾದಿಸುತ್ತಾರೆ.

5 /5

5. ಧನು ರಾಶಿ- ದೇವ ಗುರು ಬೃಹಸ್ಪತಿ ಧನು ರಾಶಿಗೆ ಅಧಿಪತಿ. ಈ ಜಾತಕದವರು ಇತರರಿಗಿಂತ ಭಿನ್ನವಾಗಿ ಕೆಲಸ ಕಾರ್ಯಗಳನ್ನು ಮಾಡುತ್ತಾರೆ ಹಾಗೂ ಅಪಾರ ಯಶಸ್ಸನ್ನು ಸಂಪಾದಿಸುತ್ತಾರೆ. ಇವರಿಗೆ ಅದೃಷ್ಟದ ಸಾತ್ ಕೂಡ ಸಿಗುತ್ತದೆ. ಇದೆ ಕಾರಣದಿಂದ ಇವರು ಅಪಾರ ಹಣ ಹಾಗೂ ಎಲ್ಲಾ ರೀತಿಯ ಸೌಕರ್ಯಗಳನ್ನು ಸಂಪಾದಿಸುತ್ತಾರೆ.