Kiradu Temple: ಈ ಮಂದಿರದಲ್ಲಿ ರಾತ್ರಿ ತಂಗುವ ಭಕ್ತರು ಕಲ್ಲಾಗುತ್ತಾರೆ!

ಭಾರತ ದೇವಸ್ಥಾನಗಳ ದೇಶ. ಇಲ್ಲಿನ ಕೋಟ್ಯಂತರ ಜನರ ನಂಬಿಕೆ ಮತ್ತು ಸಂಪ್ರದಾಯವು ಸಾವಿರಾರು ವರ್ಷಗಳಿಂದ ದೇವಸ್ಥಾನಗಳೊಂದಿಗೆ ಸಂಬಂಧ ಹೊಂದಿದೆ.

ನವದೆಹಲಿ: ದೇವಸ್ಥಾನಗಳಿಲ್ಲದ ಭಾರತ ದೇಶವನ್ನು ಕಲ್ಪಿಸಿಕೊಳ್ಳುವುದು ಕೂಡ ಅಸಾಧ್ಯ. ನಮ್ಮ ದೇಶವು ಇಲ್ಲಿನ ಮಠ- ಮಂದಿರಗಳಿಗೆ ಪ್ರಖ್ಯಾತಿಯನ್ನು ಪಡೆದಿದೆ. ಹಲವು ಪ್ರಸಿದ್ಧ ದೇವಾಲಾಯಗಳ ಒಳಗೆ ರಹಸ್ಯಗಳ ಪ್ರಪಂಚವಿದೆ. ಇಂದು ನಾವು ರಾಜಸ್ಥಾನದ ಅಂತಹ ಒಂದು ನಿಗೂಢ ದೇವಾಲಯವನ್ನು ನಿಮಗೆ ಪರಿಚಯಿಸುತ್ತೇವೆ, ಅಲ್ಲಿ ಯಾವುದೇ ಭಕ್ತರು ಮುಸ್ಸಂಜೆಯ ನಂತರ ಉಳಿಯುವ ಧೈರ್ಯ ಮಾಡುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

1 /5

ಈ ನಿಗೂಢ ದೇವಸ್ಥಾನವು ರಾಜಸ್ಥಾನದ  (Rajasthan) ಬಾರ್ಮರ್  (Barmer)  ಜಿಲ್ಲೆಯಲ್ಲಿದೆ. ಈ ದೇವಸ್ಥಾನವನ್ನು 'ಕಿರಡು ದೇವಸ್ಥಾನ' (Kiradu Temple) ಎಂದೂ ಕರೆಯುತ್ತಾರೆ. ಕ್ರಿಸ್ತಪೂರ್ವ 1161 ರಲ್ಲಿ ಈ ಸ್ಥಳದ ಹೆಸರು 'ಕಿರಾತ್ ಕುಪ್' ಎಂದು ಹೇಳಲಾಗಿದೆ. ರಾಜಸ್ಥಾನದಲ್ಲಿದ್ದರೂ, ಈ ದೇವಸ್ಥಾನವನ್ನು ದಕ್ಷಿಣ ಭಾರತದ ಶೈಲಿಯಲ್ಲಿ ನಿರ್ಮಿಸಲಾಗಿದೆ. ಜನರು ಈ ದೇವಸ್ಥಾನವನ್ನು ರಾಜಸ್ಥಾನದ ಖಜುರಾಹೊ ಎಂದೂ ಕರೆಯುತ್ತಾರೆ.

2 /5

ಇದು ಐದು ದೇವಸ್ಥಾನಗಳ ಸರಣಿ. ಈ ಸರಣಿಯ ಬಹುತೇಕ ದೇವಾಲಯಗಳು ಈಗ ಪಾಳು ಬಿದ್ದಿವೆ. ಶಿವ ದೇವಸ್ಥಾನ (Shiva Temple) ಮತ್ತು ವಿಷ್ಣು ದೇವಾಲಯದ ಸ್ಥಿತಿ ಚೆನ್ನಾಗಿದೆ. ಈ ದೇವಸ್ಥಾನವನ್ನು ನಿರ್ಮಿಸಿದವರು ಯಾರು? ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಆದಾಗ್ಯೂ, ಜನರು ಖಂಡಿತವಾಗಿಯೂ ದೇವಾಲಯದ ನಿರ್ಮಾಣದ ಬಗ್ಗೆ ತಮ್ಮದೇ ಆದ ನಂಬಿಕೆಗಳನ್ನು ಹೊಂದಿದ್ದಾರೆ.

3 /5

ಒಂದಾನೊಂದು ಕಾಲದಲ್ಲಿ ಈ ದೇವಸ್ಥಾನದಲ್ಲಿ ಸಂಭವಿಸಿರುವ ಘಟನೆಯಿಂದ ಜನರು ಭಯಭೀತರಾಗಿದ್ದಾರೆ.  ಆ ಘಟನೆಯ ಬಗ್ಗೆ ಇಂದಿಗೂ ಕೂಡ ಜನರಲ್ಲಿ ಭಯವಿದೆ ಎಂದು ಹೇಳಲಾಗುತ್ತದೆ. ವಾಸ್ತವವಾಗಿ, ಹಲವು ವರ್ಷಗಳ ಹಿಂದೆ ಸನ್ಯಾಸಿಯೊಬ್ಬರು ತಮ್ಮ ಶಿಷ್ಯರೊಂದಿಗೆ ಈ ದೇವಸ್ಥಾನವನ್ನು ತಲುಪಿದ್ದರು. ಒಂದು ದಿನ ಸನ್ಯಾಸಿಯು ತನ್ನ ಶಿಷ್ಯರನ್ನು ದೇವಸ್ಥಾನದಲ್ಲಿಯೇ ಬಿಟ್ಟು ವಿಹಾರಕ್ಕೆ ತೆರಳಿದ್ದರು. ಈ ಸಮಯದಲ್ಲಿ, ಓರ್ವ ಶಿಷ್ಯನ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟಿತು. ಸಾಧುವಿನ ಇತರ ಶಿಷ್ಯರು ಗ್ರಾಮಸ್ಥರಿಂದ ಸಹಾಯ ಕೇಳಿದರು, ಆದರೆ ಯಾರೂ ಕೂಡ ಅವರಿಗೆ ಸಹಾಯ ಮಾಡಲಿಲ್ಲ. ಈ ವಿಷಯವನ್ನು ತಿಳಿದ ಸನ್ಯಾಸಿಯು ಕುಪಿತಗೊಂಡು ಸಂಜೆಯ ನಂತರ ಎಲ್ಲರೂ ಕಲ್ಲಾಗುವಂತೆ ಶಾಪ ನೀಡಿದ್ದರಂತೆ. ಇದನ್ನೂ ಓದಿ- Mysterious Temples: ದೇಶದ ಕೆಲ ನಿಗೂಢ ದೇವಾಲಯಗಳಿವು

4 /5

ಜಾನಪದ ಕಥೆಗಳ ಪ್ರಕಾರ, ಒಬ್ಬ ಮಹಿಳೆ ಸನ್ಯಾಸಿಯ ಶಿಷ್ಯರಿಗೆ ಸಹಾಯ ಮಾಡಿದಳು. ಸನ್ಯಾಸಿಯು ಇದರಿಂದ ಸಂತಸಗೊಂಡು ಆ ಮಹಿಳೆಗೆ ಸಂಜೆಯ ಮೊದಲು ಗ್ರಾಮವನ್ನು ತೊರೆಯಬೇಕು ಮತ್ತು ಹಿಂತಿರುಗಿ ನೋಡಬೇಡ ಎಂದು ಹೇಳಿದರು. ಮಹಿಳೆ ಹೊರಡುವಾಗ ಸ್ವಲ್ಪದೂರ ಮುಂದೆ ನಡೆದು ಕುತೂಹಲದಿಂದ ಹಿಂತಿರುಗಿ ನೋಡಿದಳು. ಬಳಿಕ ಕಲ್ಲಾಗಿ ಬದಲಾದಳು ಎಂದು ಹೇಳಲಾಗುತ್ತದೆ. ಇದನ್ನೂ ಓದಿ- Mysterious Lake: ದೇಶದ ಈ ನಿಗೂಢ ಸರೋವರದಲ್ಲಿದೆ ನೂರಾರು ಮಾನವ ಅಸ್ಥಿಪಂಜರಗಳು

5 /5

ಆ ಮಹಿಳೆಯ ವಿಗ್ರಹವನ್ನು ಈಗಲೂ ದೇವಾಲಯದ ಬಳಿ ಸ್ಥಾಪಿಸಲಾಗಿದೆ. ಈ ಶಾಪದಿಂದಾಗಿ, ಹತ್ತಿರದ ಹಳ್ಳಿಯ ಜನರಲ್ಲಿ ಭೀತಿ ಹರಡಿತು. ಈ ಕಾರಣದಿಂದಾಗಿ ಇಂದಿಗೂ ಸಹ ಈ ದೇವಸ್ಥಾನದಲ್ಲಿ ಯಾರು ತಂಗುತ್ತಾರೋ ಅವರು ಕೂಡ ಕಲ್ಲಾಗುತ್ತಾರೆ ಎಂಬ ನಂಬಿಕೆ ಜನರಲ್ಲಿ ಇದೆ. ಹಾಗಾಗಿಯೇ ಮುಸ್ಸಂಜೆಯ ನಂತರ ಈ ದೇವಸ್ಥಾನದಲ್ಲಿ ಉಳಿಯಲು ಯಾರೂ ಧೈರ್ಯ ಮಾಡುವುಡಿಲ್ಲ ಎನ್ನಲಾಗಿದೆ.