ಕೊನೆ ದಿನಗಳಲ್ಲಿ ಒಂದೊಂದು ರೂಪಾಯಿಗೂ ಪರದಾಡಿದ್ದರಂತೆ ದರ್ಶನ್‌ ತಂದೆ! ತೂಗುದೀಪ ಶ್ರೀನಿವಾಸ್‌ ಅವರ ಸ್ಥಿತಿ ನಿಜಕ್ಕೂ ಹೀಗಾಗಿತ್ತಾ?

Thugudeep Srinivas Life Story: ತೂಗುದೀಪ್‌ ಶ್ರೀನಿವಾಸ.. ಈ ಹೆಸರು ಕೇಳಿದ ತಕ್ಷಣ ನೆನಪಿಗೆ ಬರೋದು ಅವರ ಅದ್ಭುತ ನಟನೆ.. ವಿಲನ್‌ ಹಾಗೂ ಪೋಷಕ ಪಾತ್ರಗಳಲ್ಲಿ ಮಿಂಚಿ ಅಪಾ ಅಭಿಮಾನಿಗಳನ್ನು ಗಳಿಸಿದ ಕನ್ನಡದ ಖ್ಯಾತ ನಟ ತೂಗುದೀಪ್‌ ಶ್ರೀನಿವಾಸ.. ಇದೀಗ ಇವರ ಜೀವನದ ಕೆಲವು ಇಂಟ್ರೆಸ್ಟಿಂಗ್‌ ಮಾಹಿತಿಯನ್ನು ತಿಳಿಯೋಣ...
 

1 /8

ನಟ ತೂಗುದೀಪ್‌ ಶ್ರೀನಿವಾಸ ತಮ್ಮ ಕಣ್ಣಿನಲ್ಲೇ ನಟನೆ ಮಾಡುವ ಮೂಲಕ ಎಲ್ಲರಲ್ಲೂ ನಡುಕ ಹುಟ್ಟಿಸುತ್ತಿದ್ದರು.. ಖಡಕ್‌ ವಿಲನ್‌ ಎಂದರೇ ಮೊದಲು ನೆನಪಾಗೋದು ತೂಗುದೀಪ್‌ ಎಂದರೇ ಅತಿಶಯೋಕ್ತಿಯಲ್ಲ..     

2 /8

ಇನ್ನು ತೂಗುದೀಪ ಶ್ರೀನಿವಾಸ್‌ ಇಷ್ಟು ದೊಡ್ಡ ನಟನಾದರೂ ಕೂಡ ಅವರ ಮಕ್ಕಳಾದ ದರ್ಶನ್‌ ಹಾಗೂ ದಿನಕರ್‌ ಸಿನಿಮಾ ಇಂಡ್ರಸ್ಟಿಗೆ ಕಾಲಿಡಲು ಯಾಕೆ ಅಷ್ಟು ಕಷ್ಟಪಡಬೇಕಾಯಿತು.. ತೂಗುದೀಪ ಶ್ರೀನಿವಾಸ ಅವರು ಕೊನೆಗಾಲದಲ್ಲಿ ಎದುರಿಸಿದ ಕಷ್ಟಗಳೇನು? ಇದೆಲ್ಲದರ ಸಣ್ಣ ಮಾಹಿತಿ ಇಲ್ಲಿದೆ..     

3 /8

ಖಳನಾಯಕ ತೂಗುದೀಪ ಶ್ರೀನಿವಾಸ್‌ ಅವರು ಮೂಲತಃ ಮೈಸೂರಿನವರು.. ನಾಯ್ಡು ಆದರೂ ಅಪ್ಪಟ ಕನ್ನಡ ಕುಟುಂಬದಲ್ಲಿ ಇವರು ಜನಿಸಿದರು.. ಚಿಕ್ಕ ವಯಸ್ಸಿನಲ್ಲಿಯೇ ನಟ ತಂದೆ-ತಾಯಿಯನ್ನು ಕಳೆದುಕೊಳ್ಳುತ್ತಾರೆ.. ಹೀಗಾಗಿ ಕಷ್ಟದಲ್ಲೇ ಬೆಳೆಯುವಂತಹ ಪರಿಸ್ಥಿತಿ ಅವರಿಗೆ ಎದುರಾಗುತ್ತದೆ..    

4 /8

ಬಾಲ್ಯದಿಂದಲೂ ರಂಗಭೂಮಿಯಲ್ಲಿ ಆಸಕ್ತಿ ಹೊಂದಿದ್ದ ನಟ ತೂಗುದೀಪ್‌ ನಾಟಕಗಳಲ್ಲಿಯೂ ಮಿಂಚಿ ಒಳ್ಳೆಯ ಹೆಸರು ಮಾಡುತ್ತಾರೆ.. ಬಳಿಕ ತೂಗುದೀಪ ಎನ್ನುವ ಸಿನಿಮಾದ ಮೂಲಕ ನಟ ಶ್ರೀನಿವಾಸ್‌ ಬಣ್ಣದ ಲೋಕಕ್ಕೆ ಕಾಲಿಟ್ಟರು..    

5 /8

ಮೇಯರ್‌ ಮುತ್ತಣ್ಣ, ಪಂಜರದ ಗಿಣಿ, ಸಿಪಾಯಿ ರಾಮು ಹೀಗೆ ಹಲವಾರು ಹಿಟ್‌ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡ ಸಿನಿಮಾರಂಗದಲ್ಲಿ ತಮ್ಮದೇ ಆದ ದೊಡ್ಡ ಛಾಪು ಮೂಡಿಸಿದರು..    

6 /8

ಸಿನಿಮಾಗಳಲ್ಲಿ ಖಡಕ್‌ ವಿಲನ್‌ ಪಾತ್ರ ಮಾಡುತ್ತಿದ್ದ ನಟ ತೂಗುದೀಪ್‌ ಅವರ ನಿಜಜೀವನದಲ್ಲಿ ತುಂಬಾ ಮೃದು ವ್ಯಕ್ತಿತ್ವದವರಾಗಿದ್ದರು.. ಆದರೆ ಬಹುತೇಕ ನಟರಿಗೆ ಇದ್ದಂತೆ ಇವರಿಗೂ ಆಲ್ಕೋಹಾಲ್‌ ಸೆಳೆತವಿತ್ತು..   

7 /8

ಹೀಗಾಗಿ ಅವರಿಗೆ ಕಿಡ್ನಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ.. ಆಗ ಬೇರೋಬ್ಬರು ಇವರಿಗೆ ಕಿಡ್ನಿ ದಾನವಾಗಿ ನೀಡುವ ಪರಿಸ್ಥಿತಿ ಬರುತ್ತದೆ.. ಬಳಿಕ ಅವರ ಪತ್ನಿ ಮೀನಾ ತೂಗುದೀಪ್‌ ಅವರು ಕಿಡ್ನಿ ಪತಿ ತೂಗುದೀಪ್‌ ಶ್ರೀನಿವಾಸ ಅವರಿಗೆ ಕಿಡ್ನಿ ದಾನ ಮಾಡುತ್ತಾರೆ..     

8 /8

ಆಗ ಬೇಕಾದ ಖರ್ಚಿಗಾಗಿ ಮನೆಯಲ್ಲಿದ್ದ ಒಡವೆಗಳನ್ನೆಲ್ಲ ಮಾರುವ ಪರಿಸ್ಥಿತಿ ಬರುತ್ತದೆ.. ಹೀಗಾಗಿ ತೂಗುದೀಪ್‌ ಶ್ರೀನಿವಾಸ ಅವರ ಕುಟುಂಬ ಕೊನೆಗಾಲದಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ.. ಅಲ್ಲದೇ ಅಲ್ಲಿಂದ ಒಂದು ವರ್ಷ ಮಾತ್ರ ತೂಗುದೀಪ್‌ ಅವರು ಬದುಕುಳಿದರು..