Gardening in Monsoon: ಮಳೆಗಾಲದಲ್ಲಿ ಸಸ್ಯ ಗಿಡಗಳ ಆರೈಕೆಗೆ ಉಪಯುಕ್ತ ಟಿಪ್ಸ್ ಇಲ್ಲಿವೆ..

ಮನೆಯಲ್ಲಿ ಗಿಡಗಳಿದ್ದರೆ ಕೇವಲ ಹಸಿರು ಮಾತ್ರವಲ್ಲದೆ ನಿಮ್ಮ ಮನೆಗೆ ಸಕಾರಾತ್ಮಕತೆ ಸಿಗುತ್ತದೆ.

ನಿಮ್ಮ ಮನೆಯಲ್ಲಿರುವ ಸಸ್ಯ ಗಿಡಗಳ ಆರೈಕೆ ಮಾಡುವುದು ಅತ್ಯಗತ್ಯ. ಅವುಗಳಿಗೆ ನಿಯಮಿತವಾಗಿ ನೀರುಣಿಸುವುದು, ಸಾಕಷ್ಟು ಬಿಸಿಲು ಬರುವಂತೆ ನೋಡಿಕೊಳ್ಳುವುದು, ಮಣ್ಣು ಸರಿಪಡಿಸುವುದು, ಎಲ್ಲಕ್ಕಿಂತ ಮುಖ್ಯವಾಗಿ ಮಳೆಗಾಲದಲ್ಲಿ ಸಸ್ಯಗಿಡಗಳ ಆರೈಕೆಗೆ ಹೆಚ್ಚಿನ ಕಾಳಜಿ ವಹಿಸುವುದು ಉತ್ತಮ. ಇದರಿಂದ ನಿಮ್ಮ ಸಸ್ಯಗಳು ಯಾವುದೇ ಸಮಸ್ಯೆಯಿಲ್ಲದೆ ಸಮೃದ್ಧವಾಗಿ ಬೆಳೆಯುತ್ತವೆ.

ಮನೆಯಲ್ಲಿ ಗಿಡಗಳಿದ್ದರೆ ಕೇವಲ ಹಸಿರು ಮಾತ್ರವಲ್ಲದೆ ನಿಮ್ಮ ಮನೆಗೆ ಸಕಾರಾತ್ಮಕತೆ ಸಿಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಶುದ್ಧವಾದ ಗಾಳಿಯನ್ನು ನೀಡುತ್ತದೆ. ಇದರಿಂದ ನಿಮ್ಮ ಮಾನಸಿಕ ಮನಸ್ಥಿತಿ ಉತ್ತಮಗೊಳ್ಳುತ್ತದೆ. ಎಲ್ಲ ಸಸ್ಯಗಿಡಗಳು ಸಮೃದ್ಧವಾಗಿ ಬೆಳೆಯಲು ಸಾಕಷ್ಟು ನೀರು ಮತ್ತು ಬೆಳಕು ಅಗತ್ಯ. ಮಳೆಗಾಲದಲ್ಲಿ ಸಾಕಷ್ಟು ಬೆಳಕು ಸಿಗುವುದಿಲ್ಲ, ಆದರೆ ನೀರು ಸಾಕಷ್ಟು ಸಿಗುತ್ತದೆ. ಎರಡನ್ನೂ ನೀವು ಸರಿದೂಗಿಸಿಕೊಂಡು ಸಸ್ಯಗಿಡಗಳ ಆರೈಕೆ ಮಾಡಬೇಕಾಗುತ್ತದೆ. ಕಡಿಮೆ ತಾಪಮಾನ ಮತ್ತು ತೇವಾಂಶದಿಂದ ಮಾನ್ಸೂನ್ ವೇಳೆ ಸಸ್ಯ ಗಿಡಗಳನ್ನು ನೆಡಲು ಸೂಕ್ತ ಸಮಯ. ಆದರೆ ದೀರ್ಘಕಾಲದ ತೇವಾಂಶದ ಸಂಪರ್ಕವು ಶಿಲೀಂಧ್ರ ಮತ್ತು ಕೀಟಗಳ ದಾಳಿಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಇದರ ಬಗ್ಗೆ ನೀವು ಎಚ್ಚರಿಕೆ ವಹಿಸಬೇಕು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಸಸ್ಯ ಗಿಡಗಳ ಆರೈಕೆ ಮಾಡುವ ಮುಖ್ಯ ಅಂಶವೆಂದರೆ ಹೆಚ್ಚು ನೀರು ಬಳಸದಿರುವುದು. ಅಗತ್ಯ ಪ್ರಮಾಣದ ನೀರು ಬಳಬೇಕು. ಅತಿಯಾಗಿ ಸಸ್ಯಗಳಿಗೆ ನೀರು ಹಾಕುವುದು ಮಣ್ಣಿನ ಫಲವತ್ತತೆಗೆ ಪರಿಣಾಮ ಬೀರುತ್ತದೆ. ಇದರಿಂದ ನಿಮ್ಮ ಸಸ್ಯಗಳು ಹೆಚ್ಚು ಕಾಲ ಉಳಿಯುವುದಿಲ್ಲ.

2 /5

ಸಸ್ಯ ಗಿಡಗಳು ಸಮೃದ್ಧವಾಗಿ ಯಾವುದೇ ತೊಂದರೆಯಿಲ್ಲದೆ ಬೆಳೆಯಬೇಕೆಂದರೆ ಅದಕ್ಕೆ ಉತ್ತಮ ಪಾಟ್ ಗಳ ಅಗತ್ಯವಿರುತ್ತದೆ. ಹೀಗಾಗಿ ಬುಡದಲ್ಲಿ ರಂಧ್ರವಿರುವ ಮಡಿಕೆಗಳನ್ನು ಬಳಸಬೇಕಾಗುತ್ತದೆ. ಏಕೆಂದರೆ ಸಸ್ಯಗಳಿಗೆ ಹಾಕುವ ಹೆಚ್ಚುವರಿ ನೀರು ಆ ರಂಧ್ರದ ಮೂಲಕ ಹೊರಹೋಗುತ್ತದೆ.  ಒಂದು ವೇಳೆ ರಂಧ್ರವಿರದ ಮಡಿಕೆ ಬಳಸಿದರೆ ಹೆಚ್ಚುವರಿ ನೀರು ಸಂಗ್ರಹವಾಗಿ ಸಸ್ಯಗಳು ಕೊಳೆತು ಹೋಗಬಹುದು. ರಂಧ್ರವಿರುವ ಮಡಿಕೆಗಳು ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾದಿಂದ ಸಸ್ಯಗಿಡಗಳ ಸೂಕ್ಷ್ಮ ಬೇರುಗಳನ್ನು ರಕ್ಷಿಸುತ್ತವೆ.    

3 /5

ಅನೇಕ ಬಾರಿ ಸಸ್ಯ ಗಿಡಗಳು ವಿಚಿತ್ರ ರೋಗಕ್ಕೆ ತುತ್ತಾಗುತ್ತವೆ. ಇದರಿಂದ ಗಿಡಗಳ ಬೆಳವಣಿಗೆ ಕುಂಠಿತವಾಗುತ್ತದೆ. ಕಪ್ಪು ಚುಕ್ಕೆ ಶಿಲೀಂಧ್ರದಿಂದ ಉಂಟಾಗುವ ಸೋಂಕಿನಿಂದ ಎಲೆಗಳು ಉದುರಲು ಪ್ರಾರಂಭಿಸುತ್ತವೆ. ಸಂಪೂರ್ಣವಾಗಿ ಗಿಡಗಳೇ ಕೊಳೆತು ಹೋಗುವ ಹಾಗೆ ಸೋಂಕುಗಳು ಆವರಿಸುತ್ತವೆ. ಆಗಾಗ ಸೋಂಕಿನ ಬಗ್ಗೆ ಪರಿಶೀಲಿಸಿ ಅಗತ್ಯ ಆರೈಕೆ ಮಾಡಬೇಕು.  

4 /5

ಯಾವುದೇ ಸಸ್ಯ ಗಿಡಗಳು ಸಮೃದ್ಧವಾಗಿ ಬೆಳೆಯಲು ಸರಿಯಾದ ವಾತಾವರಣ ಅಗತ್ಯ. ಸರಿಯಾದ ತೇವಾಂಶ, ಬಿಸಿ ಗಾಳಿ ಸಸ್ಯಗಳ ಬೆಳವಣಿಗೆಗೆ ಕಾರಣವಾಗುತ್ತದೆ. ದ್ಯುತಿಸಂಶ್ಲೇಷಣೆಯ ಪ್ರಕ್ರಿಯೆಯಲ್ಲಿ ಸಸ್ಯಗಳು ಗಾಳಿಯಿಂದ ಇಂಗಾಲದ ಡೈಆಕ್ಸೈಡ್ ಪಡೆದುಕೊಂಡು ಆಮ್ಲಜನಕವನ್ನೂ ಹೊರಬೀಡುತ್ತವೆ. ಇಂದು ನಾವು ಉಸಿರಾಡುವ ಶುದ್ಧ ಗಾಳಿ ಸಸ್ಯ ಗಿಡಗಳ ಕೊಡುಗೆ ಎನ್ನುವುದನ್ನು ಮರೆಯದಿರಿ. ಹೀಗಾಗಿ ಸಾಧ್ಯವಾದಷ್ಟು ಗಿಡಗಳನ್ನು ಬೆಳೆಸಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.  

5 /5

ಮಳೆಗಾಲ ಪ್ರಾರಂಭಕ್ಕೂ ಮುನ್ನ ಸಸ್ಯ ಗಿಡಗಳನ್ನು ಅಗತ್ಯಕ್ಕೆ ತಕ್ಕಷ್ಟು ಕಟಾವು ಮಾಡಬೇಕು. ಇದು ವಿವಿಧ ರೋಗಗಳಿಂದ ಸಸ್ಯಗಳನ್ನು ಕಾಪಾಡುತ್ತದೆ. ಅಲ್ಲದೆ ಗಿಡಗಳ ಸೌಂದರ್ಯವನ್ನು ಹೆಚ್ಚಿಸುತ್ತದೆ. ನೋಡಲು ಮನಸ್ಸಿಗೆ ಮುದ ನೀಡುತ್ತದೆ.