'ತೆನೆ ಹೊತ್ತ ಮಹಿಳೆ'ಯ ಕೈ ಹಿಡಿದ ಚಿತ್ರ ನಿರ್ದೇಶಕ..!

    

Last Updated : Feb 21, 2018, 08:34 PM IST
'ತೆನೆ ಹೊತ್ತ ಮಹಿಳೆ'ಯ ಕೈ ಹಿಡಿದ ಚಿತ್ರ ನಿರ್ದೇಶಕ..!  title=

ಬೆಂಗಳೂರು: ರಾಜ್ಯದಲ್ಲಿ ಪಕ್ಷವನ್ನು ಎಲ್ಲಾ ವರ್ಗಗಳ ಬಳಿ ತೆಗೆದುಕೊಂಡು ಹೋಗಲು ನಿರ್ಧರಿಸಿರುವ ಜೆಡಿಎಸ್ ಅದರ ಭಾಗವಾಗಿ ಈ ಬಾರಿ ಬಿಎಸ್ಪಿ ಜೊತೆ ಚುನಾವಣಾ ಮೈತ್ರಿ ಮಾಡಿಕೊಂಡಿದೆ. ಆದಕ್ಕೆ ಪೂರಕವಾಗಿ ಅದು ದಲಿತ ಸಮುದಾಯದ ನಾಯಕರುಗಳಿಗೆ ಮಣೆ ಹಾಕುತ್ತಿದೆ.

ಈ ಹಿನ್ನೆಲೆಯಲ್ಲಿ  ಖ್ಯಾತ ಕನ್ನಡ ಚಿತ್ರ ರಂಗದ ನಿರ್ದೇಶಕ  ಎಸ್ ಮಹೇಂದರ್  ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ  ಕುಮಾರಸ್ವಾಮಿಯವರ ಸಮ್ಮುಖದಲ್ಲಿ ಸೇರ್ಪಡೆಯಾಗಿದ್ದಾರೆ. ಮೂಲತ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದವರಾದ ಮಹೇಂದರ್ ಕನ್ನಡದಲ್ಲಿ ಸಾಕಷ್ಟು ಹಿಟ್ ಚಿತ್ರಗಳನ್ನು ಕೊಟ್ಟವರು. ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಮೂಲಕ ಸ್ಪರ್ಧಿಸಿ ಸೋತಿದ್ದರು. ಈಗ ಜೆಡಿಎಸ್ ಮೂಲಕ ತೆನೆ ಹೊತ್ತ ಮಹಿಳೆಯ ಕೈ ಹಿಡಿದಿದ್ದಾರೆ. ಇದರಿಂದ  ಚಾಮರಾಜನಗರ ಭಾಗದಲ್ಲಿ ದಲಿತ ಸಮುದಾಯದ ಮತಗಳು ಹೆಚ್ಚಿಗೆ ಇರುವುದರಿಂದ ಇವರ ಸೇರ್ಪಡೆ ಪಕ್ಷಕ್ಕೆ ಇನ್ನುಷ್ಟು ಬಲ ಬರಲಿದೆ ಎಂದು ಹೇಳಲಾಗುತ್ತಿದೆ. 

Trending News