"ಉಪೇಂದ್ರ ಕಾರಣಕ್ಕೇ ನಾನು ಇನ್ನೂ ಮದ್ವೆಯಾಗಿಲ್ಲ"- ಉಪ್ಪಿ ಪತ್ನಿ ಪ್ರಿಯಾಂಕ ಮುಂದೆಯೇ ಸತ್ಯ ಬಿಚ್ಚಿಟ್ಟ ಆ್ಯಂಕರ್​ ಅನುಪಮಾ ಗೌಡ

Anchor Anupama Gowda: ಕಿರುತೆರೆಯಾಗಲಿ, ಹಿರಿತೆರೆಯಾಗಲಿ ಆಂಕರ್‌ ಅನುಪಮಾ ಗೌಡ ಸಖತ್‌ ಆಕ್ಟೀವ್‌. ನಟನೆ-ನಿರೂಪಣೆಯಲ್ಲಿ ಎಂಥವರನ್ನೂ ಮೀರಿಸುವ ಈ ಸುಂದರಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಅಕ್ಕ ಧಾರಾವಾಹಿ ಮೂಲಕ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

ಕಿರುತೆರೆಯಾಗಲಿ, ಹಿರಿತೆರೆಯಾಗಲಿ ಆಂಕರ್‌ ಅನುಪಮಾ ಗೌಡ ಸಖತ್‌ ಆಕ್ಟೀವ್‌. ನಟನೆ-ನಿರೂಪಣೆಯಲ್ಲಿ ಎಂಥವರನ್ನೂ ಮೀರಿಸುವ ಈ ಸುಂದರಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಅಕ್ಕ ಧಾರಾವಾಹಿ ಮೂಲಕ.

2 /7

ಅದಾದ ಬಳಿಕ ಬಿಗ್ ಬಾಸ್‌ ರಿಯಾಲಿಟಿ ಶೋನಲ್ಲಿ ಎರಡು ಸಲ ಸ್ಪರ್ಧಿಸಿ ಸಖತ್‌ ಫೇಮಸ್‌ ಆದರು. ಅದಷ್ಟೇ ಅಲ್ಲದೆ, ಅನೇಕ ರಿಯಾಲಿಟಿ ಶೋಗಳನ್ನು ನಿರೂಪಣೆ ಮಾಡಿ ಜನಮನ್ನಣೆ ಗಳಿಸಿದಾರೆ. ಆದರೆ ಅನುಪಮಾ ಇನ್ನೂ ಸಿಂಗಲ್‌ ಆಗಿಯೇ ಇದ್ದಾರೆ. ಇದಕ್ಕೆ ಕಾರಣ ಏನೆಂಬುದನ್ನು ವೇದಿಕೆ ಮುಂದೆಯೇ ಬಿಚ್ಚಿಟ್ಟಿದ್ದಾರೆ.  

3 /7

ಅನುಪಮಾ ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡುವುದಾದರೆ, ಅವರು ಪ್ರೀತಿಯ ವಿಷಯದಲ್ಲಿ  ತುಂಬಾ ನೋವು ಅನುಭವಿಸಿದವರು. ಈ ಹಿಂದೆ ತಮ್ಮ ಲವ್‌ ಸ್ಟೋರಿ ಬಗ್ಗೆ ಮಾತನಾಡಿದ್ದ ಅವರು, "ನನ್ನ ಲವ್ ಬ್ರೇಕಪ್ ಆಗಿದ್ದು ಬಹುತೇಕ ಎಲ್ಲರಿಗೂ ಗೊತ್ತು. ತುಂಬಾ ವರ್ಷ ಪ್ರೀತಿಸಿ, ಇನ್ನೇನು ಮದುವೆಯಾಗಿ ಲೈಫ್‌ʼನಲ್ಲಿ ಸೆಟಲ್ ಆಗುತ್ತೇನೆ ಎನ್ನುವಾಗಲೇ ಬ್ರೇಕಪ್‌ ಆಯಿತು" ಎಂದು ಹೇಳಿದ್ದರು.  

4 /7

ಆದರೆ ಇದೀಗ ಅವರು ಕಲರ್ಸ್​ ಕನ್ನಡದ ಅನುಬಂಧ ಅವಾರ್ಡ್ಸ್​ ವೇದಿಕೆಯಲ್ಲಿ ತಾನು ಮದುವೆಯಾಗದೇ ಇರುವುದಕ್ಕೆ ನಟ ಉಪೇಂದ್ರ ಅವರೇ ಕಾರಣ ಎಂದಿದ್ದಾರೆ.  

5 /7

ಅನುಬಂಧ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಉಪೇಂದ್ರ ಮತ್ತು ಪ್ರಿಯಾಂಕಾ ದಂಪತಿ ಮುಂದೆಯೇ ಅನುಪಮಾ ಹೀಗಂದಿದ್ದಾರೆ. ಆದರೆ ಇದು ತಮಾಷೆಯ ಸಂಭಾಷಣೆಯಾಗಿದೆ.  

6 /7

"ಪ್ರೀತಿ- ಪ್ರೇಮ ಪುಸ್ತಕದ ಬದನೆಕಾಯಿ ಅಂತ ಡೈಲಾಗ್​ ಹೇಳಿಬಿಟ್ರು. ಅದಕ್ಕೇ ನಾನು ಇನ್ನೂ ಮದ್ವೆಯಾಗಿಲ್ಲ" ಎಂದು ಅನುಪಮಾ ಗೌಡ ತಮಾಷೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಡೈಲಾಗ್​ ಕಿಂಗ್​ ಉಪೇಂದ್ರ, "ಆ ಡೈಲಾಗೇ ಪುಸ್ತಕದ ಬದನೆಕಾಯಿ ಅಮ್ಮಾ" ಎಂದು ಹೇಳಿದ್ದಾರೆ.  

7 /7

ಅದಕ್ಕೆ ಕೌಂಟರ್‌ ಕೊಟ್ಟ ಅನುಪಮಾ "ನಮಗೆ ನಿಮ್ಮನ್ನು ನೋಡಿದ್ರೆ ಹೊಟ್ಟೆ ಉರಿಯತ್ತೆ" ಎಂದರು. "ಹೊಟ್ಟೆ ಉರ್ಕೊಳ್ಳಿ ಅಂತನೇ ಮದ್ವೆಯಾಗಿದ್ದು" ಅಂತಾ ಉಪ್ಪಿ ಸಖತ್‌ ರಿಪ್ಲೈ ಕೊಟ್ಟಿದ್ದಾರೆ.