ʻರಂಗಿತರಂಗʼ ಬಳಿಕ ನಿರೂಪ್‌-ಸಾಯಿಕುಮಾರ್‌ ಕಾಂಬೋದಲ್ಲಿ ಹೊಸ ಸಿನಿಮಾ: ಚಿತ್ರಕಥೆಯೇನು ಗೊತ್ತೇ?

Nirup Bhandari And Saikumar: ಸ್ಯಾಂಡಲ್‌ವುಡ್‌ನಲ್ಲಿ ರಂಗಿತರಂಗ ಸಿನಿಮಾದ ಬಳಿಕ ನಟ ನಿರೂಪ್‌ ಭಂಡಾರಿ ಹಾಗೂ ಸಾಯಿಕುಮಾರ್ ಇಬ್ಬರು ಮತ್ತೆ ಒಂದಾಗಿ ಹೊಚ್ಚ ಹೊಸ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಹಾಗಾದ್ರೆ ಯಾವ ಸಿನಿಮಾ? ಚಿತ್ರದ ಟೈಟಲ್‌ ಏನು? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್.‌  

Written by - Zee Kannada News Desk | Last Updated : Jan 27, 2024, 09:01 AM IST
  • ನಟ ನಿರೂಪ್‌ ಭಂಡಾರಿ ಹಾಗೂ ಸಾಯಿಕುಮಾರ್‌ ಕಾಂಬೋದಲ್ಲಿ ಮೂಡಿಬಂದ ರಂಗಿತರಂಗ ಸಿನಿಮಾ ಬಾಹುಬಲಿ ಅಂತರ ಹೈಬಜೆಟ್‌ ಚಿತ್ರದ ಪೈಪೋಟೊಯೊಂದಿಗೂ ಮೋಡಿ ಮಾಡಿತ್ತು.
  • 'ರಂಗಿತರಂಗ' ಚಿತ್ರ ರಿಲೀಸ್‌ ಆಗಿ ಹೆಚ್ಚು ಕಡಿಮೆ 10 ವರ್ಷಗಳಾಗುತ್ತಾ ಬರುತ್ತಿದ್ದು, ಇಂತಹ ಸಮಯದಲ್ಲಿ ಮತ್ತೆ ನಿರೂಪ್ ಭಂಡಾರಿ ಹಾಗೂ ಸಾಯಿ ಜೋಡಿಯನ್ನು ನೋಡುವುದಕ್ಕೆ ಸಿನಿರಸಿಕರು ಎದುರು ನೋಡುತ್ತಿದ್ದಾರೆ.
  • ಸದ್ಯ ಸಾಯಿಕುಮಾರ್ ಚಿತ್ರತಂಡ ಸೇರಿಕೊಂಡಿದ್ದು, ಬಹಳ ವರ್ಷಗಳ ನಂತರ ಈ ಕಾಂಬೋ ಮತ್ತೆ ತೆರೆಮೇಲೆ ಬರುತ್ತಿರುವುದರಿಂದ ಕುತೂಹಲ ಹೆಚ್ಚಿದೆ.
ʻರಂಗಿತರಂಗʼ ಬಳಿಕ ನಿರೂಪ್‌-ಸಾಯಿಕುಮಾರ್‌ ಕಾಂಬೋದಲ್ಲಿ ಹೊಸ ಸಿನಿಮಾ: ಚಿತ್ರಕಥೆಯೇನು ಗೊತ್ತೇ? title=

New Movie In Nirup Bhandari And Saikumar Combo: ಚಂದನವನದಲ್ಲಿ ಕಳೆದ ಒಂಬತ್ತು ವರ್ಷದ ಹಿಂದೆ ನಟ ನಿರೂಪ್‌ ಭಂಡಾರಿ ಹಾಗೂ ಸಾಯಿಕುಮಾರ್‌ ಕಾಂಬೋದಲ್ಲಿ ಮೂಡಿಬಂದ ರಂಗಿತರಂಗ ಸಿನಿಮಾ ಬಾಹುಬಲಿ ಅಂತರ ಹೈಬಜೆಟ್‌ ಚಿತ್ರದ ಪೈಪೋಟೊಯೊಂದಿಗೂ  ಮೋಡಿ ಮಾಡಿತ್ತು. ಈ ಸಿನಿಮಾದಲ್ಲಿ ನಿರೂಪ್ ಹಾಗೂ ಸಾಯಿ ಕುಮಾರ್ ಇಬ್ಬರೂ ಕಾಂಬಿನೇಷನ್  ಹೈಲೈಟ್ ಆಗಿದ್ದು, ಅದರಲ್ಲೂ ಕ್ಲೈಮ್ಯಾಕ್ಸ್ ಸೀನ್‌ನಲ್ಲಿ ಸಾಯಿ ಕುಮಾರ್ ಪಾತ್ರವನ್ನು ನೋಡಿದಾಗ ಪ್ರೇಕ್ಷಕರು  ಬೆಚ್ಚಿಬಿದ್ದಿದ್ದರು. ನಟ ಸಾಯಿಕುಮಾರ್‌ ಪೋಸ್ಟ್ ಮ್ಯಾನ್ ಕಾಳಿಂಗನಾಗಿ ಆ ಚಿತ್ರದಲ್ಲಿಅಬ್ಬರಿಸಿದ್ದು, ಇದೀಗ ಮತ್ತೆ ಈ ಜೋಡಿ  ಒಟ್ಟಿಗೆ ತೆರೆಮೇಲೆ ಕಾಣಿಸಿಕೊಳ್ಳುತ್ತಿದೆ. 

ಹೌದು.. ಸಾಯಿ ಕುಮಾರ್ ಹಾಗೂ ನಿರೂಪ್ ಭಂಡಾರಿ ಹೊಚ್ಚ ಹೊಸ ಸಿನಿಮಾ ಒಪ್ಪಿಕೊಂಡಿದ್ದು, ಅದರಲ್ಲಿ ಇಬ್ಬರು ತಂದೆ-ಮಗನಾಗಿ ಕಾಣಿಸಿಕೊಳ್ಳಲಿದ್ದಾರೆ. 'ರಂಗಿತರಂಗ' ಚಿತ್ರ ರಿಲೀಸ್‌ ಆಗಿ ಹೆಚ್ಚು ಕಡಿಮೆ 10 ವರ್ಷಗಳಾಗುತ್ತಾ ಬರುತ್ತಿದ್ದು, ಇಂತಹ ಸಮಯದಲ್ಲಿ ಮತ್ತೆ ನಿರೂಪ್ ಭಂಡಾರಿ ಹಾಗೂ ಸಾಯಿ ಜೋಡಿಯನ್ನು ನೋಡುವುದಕ್ಕೆ ಸಿನಿರಸಿಕರು ಎದುರು ನೋಡುತ್ತಿದ್ದಾರೆ. ಸದ್ಯ ನೂತನ ಸಿನಿಮಾದ ಟೈಟಲ್ ರಿವೀಲ್ ಆಗದೆಯಿದ್ದರೂ, ಆದರೆ, ಈ ಚಿತ್ರವನ್ನು ಇದೇ ಮೊದಲ ಬಾರಿಗೆ ಡೈರೆಕ್ಷನ್ ಕ್ಯಾಪ್ ತೊಟ್ಟಿರುವ ಯುವ ಪ್ರತಿಭೆ ಸಚಿನ್ ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ: ವಿವಾಹಿತ ನಟನ ಜೊತೆಗಿನ ಅನೈತಿಕ ಸಂಬಂಧದಿಂದ ಕೆರಿಯರ್ ನಾಶ ಮಾಡಿಕೊಂಡ ಸೌತ್‌ ಸ್ಟಾರ್‌ ಈಕೆ!

ಸದ್ಯ ಸಾಯಿಕುಮಾರ್ ಚಿತ್ರತಂಡ ಸೇರಿಕೊಂಡಿದ್ದು, ಬಹಳ ವರ್ಷಗಳ ನಂತರ ಈ ಕಾಂಬೋ ಮತ್ತೆ ತೆರೆಮೇಲೆ ಬರುತ್ತಿರುವುದರಿಂದ ಕುತೂಹಲ ಹೆಚ್ಚಿದೆ. ಈ ಸಿನಿಮಾದ ಟೈಟಲ್‌ ಹಾಗೂ ಫಸ್ಟ್ ಲುಕ್ ಇದೇ ಫೆಬ್ರವರಿ 6ರಂದು ಅನಾವರಣಗೊಳ್ಳುತ್ತಿದೆ. ನಿರೂಪ್ ಭಂಡಾರಿ ಹಾಗೂ ಸಾಯಿ ಕುಮಾರ್ ಕಾಂಬಿನೇಷನ್ ಚಿತ್ರದ ಕಥೆ ಕೂಡ ಇಂಟ್ರೆಸ್ಟಿಂಗ್ ಆಗಿದ್ದು, ಇದು ಸತ್ಯ ಮತ್ತು ಸುಳ್ಳಿನ ನಡುವೆ ಇರುವ ಸಾಮಾಜಿಕ ಬದ್ಧತೆ ಸುತ್ತ ಸಾಗುವ ಕಾಮಿಡಿ ಮತ್ತು ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದೆ. 

ಇನ್ನೂ ಶೀರ್ಷಿಕೆ ರಿವಿಲ್‌ ಆಗದ ಚಿತ್ರವನ್ನು ಅಂಕೆತ್ ಸಿನಿಮಾಸ್ ಬ್ಯಾನರ್‌ನಲ್ಲಿ ಅಂಕಿತ್ ಸೋನಿಗಾರ ನಿರ್ಮಿಸಿಸುತ್ತಿದ್ದಾರೆ. ಪ್ರಶಾಂತ್ ಮುಲಗೆ ಸಹ ನಿರ್ಮಾಪಕರಾಗಿದ್ದು, ಈ ಸಿನಿಮಾಗೆ ಸಚಿನ್ ಬಸ್ರೂರ್ ಸಂಗೀತ ನೀಡುತ್ತಿದ್ದಾರೆ. ಸಂದೀಪ್ ವಲ್ಲೂರಿ ಸಿನಿಮಾದ ದೃಶ್ಯಗಳನ್ನು ಸೆರೆಹಿಡಿಯಲಿದ್ದು, ಉಜ್ವಲ್ ಚಂದ್ರ ಸಂಕಲನ, ಉಲ್ಲಾಸ್ ಹೈದೂರು ಕಲಾ ನಿರ್ದೇಶನವಿದೆ. ಇನ್ನೊಂದು ಇಂಟ್ರೆಸ್ಟಿಂಗ್ ವಿಷಯ ಅಂದರೆ, ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಫಸ್ಟ್ ಲುಕ್ ರಿಲೀಸ್ ಬಳಿಕ ಚಿತ್ರದ ಬಗ್ಗೆ ಮತ್ತಷ್ಟು ಮಾಹಿತಿ ಸಿಗುವ ಸಾಧ್ಯತೆಯಿದ್ದು, ನಿರೂಪ್ ಮತ್ತು ಸಾಯಿ ಕುಮಾರ್ ಲುಕ್ ಕೂಡ ರಿವೀಲ್ ಆಗಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News