ತೂಕ ಇಳಿಕೆಗೆ ಈ ಪಾನೀಯ ಒಂದು ರಾಮಬಾಣ ಉಪಾಯ? ಹೇಗೆ ಸೇವಿಸಬೇಕು ಇಲ್ಲಿ ತಿಳಿದುಕೊಳ್ಳಿ!

Weight Loss Home Remedies: ರಾತ್ರಿ ಹೊತ್ತು  ಪಾನೀಯಗಳನ್ನು ಕುಡಿಯುವುದು ನಮ್ಮ ದೇಹದ ಚಯಾಪಚಯ ದರವನ್ನು  ಹೆಚ್ಚಿಸಲು ಮತ್ತು ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ (Lifestyle News In Kannada).  

Written by - Nitin Tabib | Last Updated : Jan 3, 2024, 10:35 PM IST
  • ವಿಟಮಿನ್ ಸಿ ಸಮೃದ್ಧವಾಗಿರುವ ಈ ವಿಶೇಷ ರೀತಿಯ ನೀರಿನಲ್ಲಿ ನಿಂಬೆಯನ್ನು ಸಹ ನೀವು ಬಳಸಬಹುದು. ಇದು ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ.
  • ಇದಲ್ಲದೆ, ಲವಂಗವನ್ನು ಆಹಾರದ ರುಚಿಯನ್ನು ಹೆಚ್ಚಿಸಲು ಸಹ ಬಳಸಲಾಗುತ್ತದೆ. ಲವಂಗದ ಕಟುವಾದ ರುಚಿಯು ನೋಯುತ್ತಿರುವ ಗಂಟಲು ಕಿರಿಕಿರಿಯಿಂದ ಸಾಕಷ್ಟು ಪರಿಹಾರ ನೀಡುತ್ತದೆ.
  • ಇದರಿಂದ ಮೆಟಾಬಾಲಿಸಂ ಕೂಡ ಉತ್ತೆಜನಗೊಂಡು, ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ತೂಕ ಇಳಿಕೆಗೆ ಈ ಪಾನೀಯ ಒಂದು ರಾಮಬಾಣ ಉಪಾಯ? ಹೇಗೆ ಸೇವಿಸಬೇಕು ಇಲ್ಲಿ ತಿಳಿದುಕೊಳ್ಳಿ! title=

ಬೆಂಗಳೂರು: ತೂಕ ಇಳಿಕೆಯ ವಿಷಯಕ್ಕೆ ಬಂದಾಗ, ನೀವು ಎಲ್ಲಾ ರೀತಿಯ ಪರಿಹಾರಗಳನ್ನು ಪ್ರಯತ್ನಿಸಬೇಕು. ಕೆಲವು ನಿಮಗೆ ಲಾಭದಾಯಕವೆಂದು ಸಾಬೀತಾದರೆ, ಕೆಲವು ವಿಫಲ ಕೂಡ ಸಾಬೀತಾಗಬಹುದು. ಆದರೆ ಚಯಾಪಚಯ ಕ್ರಿಯೆಯ ವೇಗವು ಕೂಡ ತೂಕವನ್ನು ಇಳಿಕೆ ಮಾಡಲು ಸಹಾಯ ಮಾಡುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಹೌದು, ಇದರ  (Health News In Kannada) ಜೊತೆಗೆ ನೀವು ಏನು ಸೇವಿಸುತ್ತಿರುವಿರಿ ಅಥವಾ ಕುಡಿಯುತ್ತಿರುವಿರಿ ಎಂಬುದರ ಬಗ್ಗೆಯೂ ಗಮನ ಹರಿಸುವುದು ತುಂಬಾ ಮುಖ್ಯ. ರಾತ್ರಿಯಲ್ಲಿ ಪಾನೀಯಗಳನ್ನು ಕುಡಿಯುವುದು ನಮ್ಮ ದೇಹದ ಚಯಾಪಚಯ ದರವನ್ನು ಹೆಚ್ಚಿಸಲು ಮತ್ತು ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ. ತೂಕವನ್ನು ಕಳೆದುಕೊಳ್ಳಲು ನೀವು ರಾತ್ರಿಯ ಹೊತ್ತು ಶುಂಠಿ-ಲವಂಗ ನೀರನ್ನು ತೆಗೆದುಕೊಳ್ಳಬಹುದು. (Lifestyle News In Kannada).

ಶುಂಠಿ-ಲವಂಗ ನೀರನ್ನು ಹೇಗೆ ತಯಾರಿಸಬೇಕು?
ಇದಕ್ಕಾಗಿ ಮೊದಲು ಶುಂಠಿಯನ್ನು ಚೆನ್ನಾಗಿ ತೊಳೆದುಕೊಳ್ಳಿ. 3-4 ಬಾರಿ ಶುದ್ಧ ನೀರಿನಿಂದ ತೊಳೆಯಿರಿ. ಈಗ ಶುಂಠಿ ಮತ್ತು ಲವಂಗವನ್ನು  ತೆಳುವಾಗಿ ಕತ್ತರಿಸಿ. ಒಂದು ಪ್ಯಾನ್ ತೆಗೆದುಕೊಂಡು ಅದರಲ್ಲಿ 10-12 ಲವಂಗ, ಪುದೀನ ಎಲೆಗಳು, ಕತ್ತರಿಸಿದ ಶುಂಠಿ ಮತ್ತು ಲವಂಗವನ್ನು ಹಾಕಿ. ಜೊತೆಗೆ 2 ಗ್ಲಾಸ್ ನೀರು ಸೇರಿಸಿ ಮತ್ತು ಪ್ಯಾನ್ ಅನ್ನು ಮುಚ್ಚಿ. 10 ನಿಮಿಷಗಳ ಕಾಲ ನೀರನ್ನು ಕುದಿಸಿ. ನಿಮ್ಮ ಶುಂಠಿ-ಲವಂಗ ನೀರು ಸಿದ್ಧವಾಗಿದೆ. ಪ್ರತಿದಿನ ರಾತ್ರಿ ಮಲಗುವ ಮುನ್ನ ಈ ನೀರನ್ನು ಚಹಾದಂತೆ ಕುಡಿಯಿರಿ.

ಇದನ್ನೂ ಓದಿ-ಮಧುಮೇಹ ನಿಯಂತ್ರಣಕ್ಕೆ ಈ 5 ಕಾಳು ತರಕಾರಿಗಳು ನಿಮ್ಮ ಆಹಾರದಲ್ಲಿರಲಿ!

ಶುಂಠಿ-ಲವಂಗ ನೀರಿನ ಪ್ರಯೋಜನಗಳು
ವಿಟಮಿನ್ ಸಿ ಸಮೃದ್ಧವಾಗಿರುವ ಈ ವಿಶೇಷ ರೀತಿಯ ನೀರಿನಲ್ಲಿ ನಿಂಬೆಯನ್ನು ಸಹ ನೀವು ಬಳಸಬಹುದು. ಇದು ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ. ಇದಲ್ಲದೆ, ಲವಂಗವನ್ನು ಆಹಾರದ ರುಚಿಯನ್ನು ಹೆಚ್ಚಿಸಲು ಸಹ ಬಳಸಲಾಗುತ್ತದೆ. ಲವಂಗದ ಕಟುವಾದ ರುಚಿಯು ನೋಯುತ್ತಿರುವ ಗಂಟಲು ಕಿರಿಕಿರಿಯಿಂದ ಸಾಕಷ್ಟು ಪರಿಹಾರ ನೀಡುತ್ತದೆ. ಇದರಿಂದ ಮೆಟಾಬಾಲಿಸಂ ಕೂಡ ಉತ್ತೆಜನಗೊಂಡು, ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ, ನೀರಿನಲ್ಲಿ ಬಳಸುವ ಶುಂಠಿಯು ದೇಹದ ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಹಸಿವನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಪುದೀನ ಎಲೆಗಳು ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತಮವಾಗಿಡುತ್ತವೆ, ಏಕೆಂದರೆ ರಂಜಕ, ಕ್ಯಾಲ್ಸಿಯಂ ಮತ್ತು ಅನೇಕ ವಿಧದ ವಿಟಮಿನ್ಗಳು ಅದರಲ್ಲಿ ಕಂಡುಬರುತ್ತವೆ.

ಇದನ್ನೂ ಓದಿ-ನಿತ್ಯ ಬೆಳಗ್ಗೆ ಈ ಹೂವಿನ ಚಹಾ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತೆ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News