Vastu Tips: ಮನೆಯ ಈ ದಿಕ್ಕಿಗೆ ಗಣಪತಿಯ ಮೂರ್ತಿ ಇಡುವುದರಿಂದ ಅದೃಷ್ಟ

Ganesh Idol for Home Vastu: ವಿಘ್ನ ವಿನಾಶಕ ಗಣೇಶ ಪ್ರತಿಯೊಂದು ತೊಂದರೆ ಮತ್ತು ಬಿಕ್ಕಟ್ಟುಗಳನ್ನು ನಿವಾರಿಸುವನು ಎಂದು ಹೇಳಲಾಗುತ್ತದೆ. ಇದರೊಂದಿಗೆ ಬದುಕಿನಲ್ಲಿ ಅಪಾರವಾದ ಸುಖ-ಸಮೃದ್ಧಿ, ಆನಂದವನ್ನು ಕರುಣಿಸುತ್ತಾನೆ ಎಂಬ ನಂಬಿಕೆಯೂ ಇದೆ. ವಾಸ್ತು ಶಾಸ್ತ್ರದಲ್ಲಿ ಗಣಪತಿಯ ವಿಗ್ರಹವನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ತುಂಬಾ ಶುಭ ಎಂದು ಪರಿಗಣಿಸಲಾಗಿದೆ.

Written by - Yashaswini V | Last Updated : May 27, 2022, 12:35 PM IST
  • ಮನೆಯಲ್ಲಿ ಗಣಪತಿಯ ವಿಗ್ರಹವನ್ನು ಪ್ರತಿಷ್ಠಾಪಿಸುವಾಗ, ಮೂರ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಇಡುವಂತೆ ವಿಶೇಷ ಕಾಳಜಿ ವಹಿಸಿ
  • ವಾಸ್ತು ಪ್ರಕಾರ ಗಣಪತಿಯ ವಿಗ್ರಹವನ್ನು ಸ್ಥಾಪಿಸಲು ಸರಿಯಾದ ದಿಕ್ಕನ್ನು ಆರಿಸಿ
  • ಆದರೆ ಅಪ್ಪಿತಪ್ಪಿಯೂ ತಪ್ಪಾದ ದಿಕ್ಕಿನಲ್ಲಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಬೇಡಿ.
Vastu Tips: ಮನೆಯ ಈ ದಿಕ್ಕಿಗೆ ಗಣಪತಿಯ ಮೂರ್ತಿ ಇಡುವುದರಿಂದ ಅದೃಷ್ಟ  title=
Vastu For Ganesh Idol At Home

ಮನೆಯಲ್ಲಿ ಗಣೇಶನ ವಿಗ್ರಹವನ್ನು ಯಾವ ದಿಕ್ಕಿನಲ್ಲಿ ಇಡುವುದು ಶುಭ:  ವಾಸ್ತು ಶಾಸ್ತ್ರದಲ್ಲಿ ಕೆಲವು ವಿಷಯಗಳನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಕೆಲವು ವಿಗ್ರಹಗಳ ಉಪಸ್ಥಿತಿಯು ಅನೇಕ ವಾಸ್ತು ದೋಷಗಳನ್ನು ನಿವಾರಿಸುತ್ತದೆ. ಈ ಮಂಗಳಕರ ಚಿಹ್ನೆಗಳಲ್ಲಿ ಗಣಪತಿಯ ವಿಗ್ರಹಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಗಣಪತಿಯು ಪ್ರಸನ್ನನಾಗಿದ್ದರೆ ಜೀವನದಲ್ಲಿ ಯಾವುದೇ ದುಃಖ ಮತ್ತು ನೋವು ಇರುವುದಿಲ್ಲ. ಜೀವನದಲ್ಲಿ ಅಪಾರ ಸಂತೋಷ ಮತ್ತು ಸಮೃದ್ಧಿ ತುಂಬಿರುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ, ನಿಮ್ಮ ಮನೆಯಲ್ಲಿ ಗಣೇಶನ ವಿಗ್ರಹವನ್ನು ಸ್ಥಾಪಿಸಿ. ಆದರೆ, ಮನೆಯಲ್ಲಿ ಯಾವ ದಿಕ್ಕಿನಲ್ಲಿ ಗಣೇಶನ ವಿಗ್ರಹವನ್ನು ಸ್ಥಾಪಿಸಬೇಕು ಎಂಬುದನ್ನು ತಿಳಿಯುವುದರ ಜೊತೆಗೆ ಈ ಸಮಯದಲ್ಲಿ ವಾಸ್ತು ಶಾಸ್ತ್ರದ ನಿಯಮಗಳನ್ನು ಅನುಸರಿಸುವುದು ಅವಶ್ಯಕ. 

ಮನೆಯಲ್ಲಿ ಗಣಪತಿಯ ವಿಗ್ರಹವನ್ನು ಎಲ್ಲಿ ಇಡಬೇಕು :
ಮನೆಯಲ್ಲಿ ಗಣಪತಿಯ ವಿಗ್ರಹವನ್ನು ಪ್ರತಿಷ್ಠಾಪಿಸುವಾಗ, ಮೂರ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಇಡುವಂತೆ ವಿಶೇಷ ಕಾಳಜಿ ವಹಿಸಿ. ಗಣಪತಿಯ ವಿಗ್ರಹವನ್ನು ಇಡಲು ಉತ್ತಮವಾದ ದಿಕ್ಕು ಮನೆಯ ಈಶಾನ್ಯ ಮೂಲೆ ಶುಭ ಎಂದು ಪರಿಗಣಿಸಲಾಗುತ್ತದೆ. ಗಣಪತಿಯ ವಿಗ್ರಹವನ್ನು ಇಲ್ಲಿ ಇರಿಸಲು ಸಾಧ್ಯವಾಗದಿದ್ದರೆ, ಉತ್ತರ ಅಥವಾ ಪೂರ್ವ ದಿಕ್ಕನ್ನು ಆರಿಸಿ. ಆದರೆ ಅಪ್ಪಿತಪ್ಪಿಯೂ ದಕ್ಷಿಣ ದಿಕ್ಕಿನಲ್ಲಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಬೇಡಿ. ಈ ದಿಕ್ಕನ್ನು ದೇವತೆಗಳ ಆರಾಧನೆಗೆ ಅಶುಭವೆಂದು ಪರಿಗಣಿಸಲಾಗಿದೆ. ಅಲ್ಲದೆ, ವಿಗ್ರಹವನ್ನು ಪ್ರತಿಷ್ಠಾಪಿಸುವ ಸ್ಥಳದಲ್ಲಿ ಯಾವುದೇ ಕೊಳಕು ಇರಬಾರದು, ಕಸ ಅಥವಾ ಶೌಚಾಲಯ ಇರಬಾರದು ಎಂಬುದನ್ನು ನೆನಪಿನಲ್ಲಿಡಿ. 

ಇದನ್ನೂ ಓದಿ- Friday Remedy: ಶುಕ್ರವಾರದ ಈ ಬೀಗ ಜಡಿಯುವ ಉಪಾಯ ನಿಮ್ಮ ಭಾಗ್ಯದ ಬಾಗಿಲು ತೆರೆಯುತ್ತದೆ

ಲೋಹ ಅಥವಾ ಹಸುವಿನ ಸಗಣಿ ವಿಗ್ರಹ :
ವಿಗ್ರಹವನ್ನು ಪ್ರತಿಷ್ಠಾಪಿಸುವಾಗ, ಮೂರ್ತಿಯನ್ನು ಮಣ್ಣು, ಗೋಮಯ ಅಥವಾ ಲೋಹದಿಂದ ಮಾಡಬೇಕೆಂದು ನೆನಪಿನಲ್ಲಿಡಿ. ಪ್ಲಾಸ್ಟರ್ ಆಫ್ ಪ್ಯಾರಿಸ್ ಅಥವಾ ಗಾಜಿನ ಪ್ರತಿಮೆಯನ್ನು ಎಂದಿಗೂ ಇಡಬೇಡಿ. ದೇವತೆಗಳ ವಿಗ್ರಹಗಳು ಯಾವಾಗಲೂ ಶುದ್ಧ ಲೋಹ ಅಥವಾ ಮಣ್ಣಿನ ಸಗಣಿಯಿಂದ ಮಾಡಿರುವುದನ್ನು ತುಂಬಾ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಆಗ ಮಾತ್ರ ಅವರು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತಾರೆ ಎಂಬ ನಂಬಿಕೆಯೂ ಇದೆ.

ಇದನ್ನೂ ಓದಿ- Vastu Tips For Money: ಮನೆಯಲ್ಲಿ ಹಣ ಇಡುವ ಜಾಗದಲ್ಲಿ ಈ ಸಣ್ಣ ವಸ್ತುವನ್ನೂ ಇಟ್ಟರೆ ಎಂದೂ ಕಾಡಲ್ಲ ಹಣದ ಕೊರತೆ

ಈ ರೀತಿಯ ವಿಗ್ರಹವು ವಾಸ್ತು ದೋಷವನ್ನು ನಿವಾರಿಸುತ್ತದೆ:
ಮನೆಯಲ್ಲಿ ಜಗಳಗಳು, ಆರ್ಥಿಕ ನಷ್ಟ, ಜೀವನವು ತೊಂದರೆಗಳಿಂದ ಆವೃತವಾಗಿದ್ದರೆ, ಮನೆಯ ವಾಸ್ತು ದೋಷಗಳು ಅದರ ಹಿಂದೆ ಪ್ರಮುಖ ಕಾರಣವಾಗಿರಬಹುದು. ಅಂತಹ ಪರಿಸ್ಥಿತಿಯಲ್ಲಿ, ಮನೆಯ ಮುಖ್ಯ ಬಾಗಿಲಿನ ಮೇಲೆ, ಬಾಗಿಲಿನ ಚೌಕಟ್ಟಿನ ಮೇಲೆ ಅಥವಾ ಪ್ರವೇಶ ದ್ವಾರದ ಮುಂಭಾಗದಲ್ಲಿ, ಗಣಪತಿಯ ಎರಡು ವಿಗ್ರಹಗಳನ್ನು ಅಥವಾ ಚಿತ್ರಗಳನ್ನು ಎರಡರ ಬೆನ್ನು ಒಂದಕ್ಕೊಂದು ಜೋಡಿಸುವ ರೀತಿಯಲ್ಲಿ ಇರಿಸಿ. ಇದರೊಂದಿಗೆ, ಒಂದು ವಿಗ್ರಹ ಅಥವಾ ಚಿತ್ರದಲ್ಲಿ, ಗಣಪತಿಯ ಮುಖವು ಮನೆಯ ಒಳಭಾಗಕ್ಕೆ ಮತ್ತು ಇನ್ನೊಂದು ಹೊರಗಿನ ಕಡೆಗೆ ಇರಬೇಕು. ವಿಗ್ರಹ ಅಥವಾ ಫೋಟೋ ಸಮಾನ ಗಾತ್ರದಲ್ಲಿರಬೇಕು ಎಂಬುದನ್ನು ನೆನಪಿನಲ್ಲಿಡಿ. ಹೀಗೆ ಮಾಡುವುದರಿಂದ ಮನೆಯ ಋಣಾತ್ಮಕ ಶಕ್ತಿ ಹಾಗೂ ವಾಸ್ತು ದೋಷ ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News