ನಿರಂತರವಾಗಿ ತಾಯಿ ಲಕ್ಷ್ಮಿ ಕೃಪೆ ನಿಮ್ಮ ಮೇಲೆ ಇರಬೇಕು ಎಂದ್ರೆ, ನಿತ್ಯ ಬೆಳಗ್ಗೆ ಈ ಕೆಲಸ ಮಾಡಿ!

Tips For Getting Lakshmi Blessings: ಉತ್ತಮ ಜೀವನಕ್ಕಾಗಿ ಮನುಷ್ಯ ಏನೆಲ್ಲಾ ಪ್ರಯತ್ನ ಮಾಡುವುದಿಲ್ಲ. ಇದಕ್ಕಾಗಿ ಮನುಷ್ಯ ಹಗಲು-ರಾತ್ರಿ ಎನ್ನದೆ ಕಷ್ಟಪಟ್ಟು ದುಡಿಯುತ್ತಾನೆ. ಮನೆ ಮತ್ತು ಕುಟುಂಬದ ಎಲ್ಲಾ ಸದಸ್ಯರಿಗೆ ಸುಖಸೌಕರ್ಯಗಳು ಸಿಗಲಿ ಎಂಬುದೇ ಇದರ ಹಿಂದಿನ ಉದ್ದೇಶವಾಗಿರುತದೆ. (Lifestyle News In Kannada)  

Written by - Nitin Tabib | Last Updated : Dec 8, 2023, 10:55 PM IST
  • ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ತುಳಸಿ ಗಿಡಕ್ಕೆ ನೀರನ್ನು ಅರ್ಪಿಸಿ ಮತ್ತು ತುಳಸಿ ಗಿಡಕ್ಕೆ ಪೂಜೆ ಮಾಡಿ.
  • ಈ ಸಮಯದಲ್ಲಿ 'ಮಹಾಪ್ರಸಾದ ಜನನಿ, ಸರ್ವ ಸೌಭಾಗ್ಯವರ್ಧಿನಿ, ಆದಿ ವ್ಯಾಧಿ ಹರ ನಿತ್ಯಂ, ತುಳಸಿ ತ್ವಂ ನಮೋಸ್ತುತೇ' ಮಂತ್ರವನ್ನು ಪಠಿಸಿ.
  • ಪ್ರತಿದಿನ ತುಳಸಿಗೆ ಮೇಲೆ ನೀರು ಅರ್ಪಿಸಿದ ನಂತರ ಈ ಮಂತ್ರವನ್ನು ಪಠಿಸುವುದರಿಂದ ಜೀವನದಲ್ಲಿ ಪ್ರಗತಿಯ ದಾರಿ ಸುಗಮವಾಗುತ್ತದೆ.
ನಿರಂತರವಾಗಿ ತಾಯಿ ಲಕ್ಷ್ಮಿ ಕೃಪೆ ನಿಮ್ಮ ಮೇಲೆ ಇರಬೇಕು ಎಂದ್ರೆ, ನಿತ್ಯ ಬೆಳಗ್ಗೆ ಈ ಕೆಲಸ ಮಾಡಿ! title=

Tips For Getting Lakshmi Blessings: ಉತ್ತಮ ಜೀವನಕ್ಕಾಗಿ ಮನುಷ್ಯ ಏನೆಲ್ಲಾ ಪ್ರಯತ್ನ ಮಾಡುವುದಿಲ್ಲ. ಇದಕ್ಕಾಗಿ ಮನುಷ್ಯ ಹಗಲು-ರಾತ್ರಿ ಎನ್ನದೆ ಕಷ್ಟಪಟ್ಟು ದುಡಿಯುತ್ತಾನೆ. ಮನೆ ಮತ್ತು ಕುಟುಂಬದ ಎಲ್ಲಾ ಸದಸ್ಯರಿಗೆ ಸುಖಸೌಕರ್ಯಗಳು ಸಿಗಲಿ ಎಂಬುದೇ ಇದರ ಹಿಂದಿನ ಉದ್ದೇಶವಾಗಿರುತದೆ. ಆದರೆ, ಕೆಲವೊಮ್ಮೆ ಭಾಗ್ಯದ ಸಾಥ್ ಸಿಗದೇ ಹೋದರೆ, ಈ ರೀತಿ ಆಗುವುದಿಲ್ಲ. ಹೀಗಿರುವಾಗ ತಾಯಿ ಲಕ್ಷ್ಮಿಯ ನಿರಂತರ ಕೃಪೆಗಾಗಿ ಕೆಲವೊಂದು ಉಪಾಯಗಳನ್ನು ಮಾಡುವುದು ಅವಶ್ಯಕವಾಗಿ ಬಿಡುತ್ತದೆ. ತಾಯಿ ಲಕ್ಷ್ಮಿಯ ನಿರಂತರ ಕೃಪೆಗಾಗಿ ಬೆಳಗ್ಗೆ ಎದ್ದಾಕ್ಷಣ ಯಾವ ಕೆಲಸ ಮಾಡಬೇಕು ಎಂಬುದನ್ನು ಇಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ ಬನ್ನಿ.(Lifestyle News In Kannada)  

1. ತುಳಸಿ ಪೂಜೆಯಿಂದ ತಾಯಿ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿದಿನ ಬೆಳಗ್ಗೆ ಎದ್ದು ತುಳಸಿ ಪೂಜೆ ಮಾಡಿ. ಇದರಿಂದ ತಾಯಿ ಲಕ್ಷ್ಮಿ ಪ್ರಸನ್ನಗೊಂಡು ತನ್ನ ಕೃಪಾವೃಷ್ಟಿ ಸುರಿಸುತ್ತಾಳೆ. ಇದು ಆರ್ಥಿಕ ಬಿಕ್ಕಟ್ಟನ್ನು ನಿವಾರಿಸುತ್ತದೆ.

2. ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ತುಳಸಿ ಗಿಡಕ್ಕೆ  ನೀರನ್ನು ಅರ್ಪಿಸಿ ಮತ್ತು ತುಳಸಿ ಗಿಡಕ್ಕೆ ಪೂಜೆ ಮಾಡಿ. ಈ ಸಮಯದಲ್ಲಿ 'ಮಹಾಪ್ರಸಾದ ಜನನಿ, ಸರ್ವ ಸೌಭಾಗ್ಯವರ್ಧಿನಿ, ಆದಿ ವ್ಯಾಧಿ ಹರ ನಿತ್ಯಂ, ತುಳಸಿ ತ್ವಂ ನಮೋಸ್ತುತೇ' ಮಂತ್ರವನ್ನು ಪಠಿಸಿ. ಪ್ರತಿದಿನ ತುಳಸಿಗೆ  ಮೇಲೆ ನೀರು ಅರ್ಪಿಸಿದ ನಂತರ ಈ ಮಂತ್ರವನ್ನು ಪಠಿಸುವುದರಿಂದ ಜೀವನದಲ್ಲಿ ಪ್ರಗತಿಯ ದಾರಿ ಸುಗಮವಾಗುತ್ತದೆ.

3. ಪೂಜೆಯ ನಂತರ, ತುಳಸಿಗೆ ನೀರನ್ನು ಅರ್ಪಿಸಿದ ಪಾತ್ರೆಯಲ್ಲಿ ಸ್ವಲ್ಪ ನೀರನ್ನು ಉಳಿಸಿ ಮತ್ತು ಇಡೀ ಮನೆಯಲ್ಲಿ ತುಳಸಿ ಎಲೆಯಿಂದ ಅದನ್ನು ಸಿಂಪಡಿಸಿ. ಇದರಿಂದ, ಮನೆಯಲ್ಲಿ ಯಾವುದೇ ಕೆಟ್ಟ ಮತ್ತು ನಕಾರಾತ್ಮಕ ಶಕ್ತಿಗಳು ಇದ್ದರೆ, ಅವರು ಹೊರಗೆ ಹೋಗುತ್ತವೆ.

4. ಪ್ರದೋಷ ಕಾಲದಲ್ಲಿ ಪ್ರತಿದಿನ ಸಂಜೆ ಪೂಜೆಯ ನಂತರ ತುಳಸಿ ಗಿಡದ ಕೆಳಗೆ ತುಪ್ಪದ ದೀಪವನ್ನು ಬೆಳಗಬೇಕು. ಹೀಗೆ ಮಾಡುವುದರಿಂದ ತಾಯಿ ಲಕ್ಷ್ಮಿಯು ಪ್ರಸನ್ನಳಾಗುತ್ತಾಳೆ ಮತ್ತು ತನ್ನ ಆಶೀರ್ವಾದವನ್ನು ನೀಡುತ್ತಾಳೆ. ತುಳಸಿಯನ್ನು ಪೂಜಿಸುವ ಮನೆಯಲ್ಲಿ ತಾಯಿ ಲಕ್ಷ್ಮಿ ವಾಸ ಸದಾ ಇರುತ್ತದೆ ಎನ್ನಲಾಗುತ್ತದೆ.

ಇದನ್ನೂ ಓದಿ-ಕೆಲವೇ ಗಂಟೆಗಳಲ್ಲಿ ಕಲಾತ್ಮಕ ರಾಜಯೋಗ ರಚನೆ, ಧನಕುಬೇರ ಕೃಪೆಯಿಂದ ಈ ಜನರ ಜೀವನದಲ್ಲಿ ಶುಕ್ರದೆಸೆ ಆರಂಭ!

5. ತುಳಸಿ ಗಿಡಗಳನ್ನು ಸಂಜೆ ಹೊತ್ತಿನಲ್ಲಿ ಸ್ಪರ್ಶಿಸಬಾರದು. ಭಾನುವಾರ ತುಳಸಿಗೆ ನೀರು ಅರ್ಪಿಸಬೇಡಿ. ನಮಸ್ಕರಿಸದೆ ತುಳಸಿ ಎಲೆಗಳನ್ನು ಎಂದಿಗೂ ಕೇಳಬೇಡಿ. ಈ ರೀತಿ ಮಾಡುವುದರಿಂದ ತಾಯಿ ಲಕ್ಷ್ಮಿ ಮುನಿಸಿಕೊಂಡು ಮನೆಯಿಂದ ಹೊರಟು ಹೋಗಬಹುದು. 

ಇದನ್ನೂ ಓದಿ-ಹನ್ನೆರಡು ವರ್ಷಗಳ ಬಳಿಕ ಪವರ್ಫುಲ್ ರಾಜ ಲಕ್ಷಣ ರಾಜಯೋಗ ರಚನೆ, ಲಕ್ಷ್ಮಿ ಕೃಪೆಯಿಂದ ಈ ಜನರಿಗೆ ಸಾಹುಕಾರರಾಗುವ ಯೋಗ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News