Palmistry: ಅಂಗೈಯಲ್ಲಿರೋ ಈ ಒಂದು ಗುರುತು ಅದೃಷ್ಟದ ಸುಳಿವು ನೀಡುತ್ತೆ

ಶುಕ್ರರೇಖೆಯ ಮೇಲೆ ಚೌಕಾಕಾರದ ಗುರುತು ಇದ್ದರೆ, ವ್ಯಕ್ತಿಯು ಶ್ರೀಮಂತ ಕುಟುಂಬದವರನ್ನು ಮದುವೆಯಾಗುತ್ತಾನೆ ಎನ್ನಲಾಗಿದೆ.

Written by - Bhavishya Shetty | Last Updated : Aug 1, 2022, 02:30 PM IST
  • ಜೀವನದಲ್ಲಿ ಅಪಾರ ಸಂಪತ್ತು, ಗೌರವ ಮತ್ತು ಯಶಸ್ಸನ್ನು ಪಡೆಯುತ್ತಾನೆ
  • ಈ ಅಂಗೈ ಗುರುತುಗಳು ಅಪಾರ ಸಂಪತ್ತನ್ನು ತರುತ್ತವೆ
  • ಕೈಯಲ್ಲಿ 3 ಪ್ರಕಾಶಮಾನ ರೇಖೆಗಳನ್ನು ಹೊಂದಿರುವ ಜನ ಅದೃಷ್ಟವಂತರಾಗಿರುತ್ತಾರೆ
Palmistry: ಅಂಗೈಯಲ್ಲಿರೋ ಈ ಒಂದು ಗುರುತು ಅದೃಷ್ಟದ ಸುಳಿವು ನೀಡುತ್ತೆ title=
Palmistry

ಕೆಲವರಿಗೆ ಸುಲಭವಾಗಿ ಹಣ ಸಿಗುತ್ತದೆ ಆದರೆ ಕೆಲವರಿಗೆ ಕಷ್ಟಪಟ್ಟು ಕೆಲಸ ಮಾಡಿದರೂ ಯಶಸ್ಸು ಸಿಗುವುದಿಲ್ಲ. ಇದರ ಹಿಂದೆ ವ್ಯಕ್ತಿಯ ಭವಿಷ್ಯವೂ ಕಾರಣವಾಗಿರುತ್ತದೆ. ಅಂಗೈಯಲ್ಲಿ ಕೆಲವು ವಿಶೇಷ ಗುರುತುಗಳ ಉಪಸ್ಥಿತಿಯು ವ್ಯಕ್ತಿಯು ಖಂಡಿತವಾಗಿಯೂ ಶ್ರೀಮಂತನಾಗುತ್ತಾನೆ ಎಂದು ಹೇಳುತ್ತದೆ ಎಂದು ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಹೇಳಲಾಗಿದೆ. ಈ ಚಿಹ್ನೆಗಳನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ವ್ಯಕ್ತಿಯ ಕೈಯಲ್ಲಿ ಇವುಗಳಲ್ಲಿ ಯಾವುದಾದರೂ ಒಂದು ಗುರುತು ಇದ್ದರೆ, ಅವನು ಖಂಡಿತವಾಗಿಯೂ ತನ್ನ ಜೀವನದಲ್ಲಿ ಅಪಾರ ಸಂಪತ್ತು, ಗೌರವ ಮತ್ತು ಯಶಸ್ಸನ್ನು ಪಡೆಯುತ್ತಾನೆ.

ಇದನ್ನೂ ಓದಿ: ಅತ್ಯಂತ ರೊಮ್ಯಾಂಟಿಕ್ ಆಗಿರುತ್ತಾರಂತೆ ಈ ನಾಲ್ಕು ರಾಶಿಯವರು .!

ಈ ಅಂಗೈ ಗುರುತುಗಳು ಅಪಾರ ಸಂಪತ್ತನ್ನು ತರುತ್ತವೆ:
ಶುಕ್ರರೇಖೆಯು ಜನರ ಅಂಗೈಯಲ್ಲಿ ಬೆಳೆದರೆ, ಆ ವ್ಯಕ್ತಿಯು ತುಂಬಾ ಶ್ರೀಮಂತನಾಗುತ್ತಾನೆ. ಸಂಬಂಧಿಕರಿಂದಲೂ ಸಾಕಷ್ಟು ಹಣ ಪಡೆಯುತ್ತಾರೆ. ಜೊತೆಗೆ ಜೀವನದಲ್ಲಿ ಎಲ್ಲಾ ಸಂತೋಷವನ್ನು ಪಡೆಯುತ್ತಾನೆ ಮತ್ತು ಐಷಾರಾಮಿ ಜೀವನವನ್ನು ನೆಡೆಸುತ್ತಾನೆ ಎಂದು ಹೇಳಲಾಗುತ್ತದೆ. ̇

ಶುಕ್ರ ರೇಖೆ ಇರುವುದು ಅಂಗೈಯಲ್ಲಿ. ನಿಮ್ಮ ಹೆಬ್ಬೆರಳು ಅಂಗೈಯನ್ನು ಸಂಧಿಸುವ ಸ್ಥಳದಲ್ಲಿ ಶುಕ್ರ ನೆಲೆಸಿರುತ್ತಾನೆ ಎಂಬುದು ನಂಬಿಕೆ.

ಶುಕ್ರರೇಖೆಯ ಮೇಲೆ ಚೌಕಾಕಾರದ ಗುರುತು ಇದ್ದರೆ, ವ್ಯಕ್ತಿಯು ಶ್ರೀಮಂತ ಕುಟುಂಬದವರನ್ನು ಮದುವೆಯಾಗುತ್ತಾನೆ ಎನ್ನಲಾಗಿದೆ.

ಶುಕ್ರರೇಖೆಯ ಮೇಲೆ ಅಡ್ಡ ಗುರುತು ಇದ್ದರೆ, ಮದುವೆಯ ನಂತರ ವ್ಯಕ್ತಿಯು ತುಂಬಾ ಶ್ರೀಮಂತನಾಗುತ್ತಾನೆ. ಜೀವನ ಸಂಗಾತಿ ಯಶಸ್ಸಿನಲ್ಲಿ ದೊಡ್ಡ ಕೊಡುಗೆ ನೀಡುತ್ತಾರೆ ಎಂದರ್ಥ.

ತಮ್ಮ ಕೈಯಲ್ಲಿ 3 ಪ್ರಕಾಶಮಾನ ರೇಖೆಗಳನ್ನು ಹೊಂದಿರುವ ಜನರು ಮತ್ತು ಅವುಗಳು ತುಂಬಾ ಸ್ಪಷ್ಟವಾಗಿದ್ದರೆ, ಅಂತಹ ವ್ಯಕ್ತಿಯು ಬಹಳಷ್ಟು ಸಂಪತ್ತನ್ನು ಹೊಂದಿರುತ್ತಾನೆ. ಜೊತೆಗೆ ತುಂಬಾ ಜ್ಞಾನವನ್ನು ಹೊಂದಿದ್ದಾರೆ. ವ್ಯಕ್ತಿಯು ತನ್ನ ಹಿಂದಿನ ಜನ್ಮದಲ್ಲಿಯೂ ಸಹ ಒಳ್ಳೆಯ ಕಾರ್ಯಗಳನ್ನು ಮಾಡಿದ್ದಾನೆ ಎಂಬುದನ್ನು ಇದು ತೋರಿಸುತ್ತದೆ.

ಅಂಗೈಯಲ್ಲಿ ಗುರುವಿನ ಹೊರಹೊಮ್ಮುವಿಕೆಯು ವ್ಯಕ್ತಿಯನ್ನು ಶ್ರೀಮಂತ ಮತ್ತು ಪ್ರಸಿದ್ಧನನ್ನಾಗಿ ಮಾಡುತ್ತದೆ. ಅಂತಹ ಜನರು ವೇಗವಾಗಿ ಯಶಸ್ಸನ್ನು ಪಡೆಯುತ್ತಾರೆ.

​ಇದನ್ನೂ ಓದಿ: ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ ತನಿಖೆ ಮಾಡಲು ಪೊಲೀಸರಿಗೆ ಮುಕ್ತ ಅಧಿಕಾರ: ಸಿಎಂ ಬೊಮ್ಮಾಯಿ

ಉಬ್ಬು ಶನಿ ರೇಖೆಯು ವ್ಯಕ್ತಿಯನ್ನು ಅತ್ಯಂತ ಪ್ರಭಾವಶಾಲಿ ಮತ್ತು ಉತ್ತಮ ನಾಯಕನನ್ನಾಗಿ ಮಾಡುತ್ತದೆ. ಅಂತಹ ಜನರು ಕಷ್ಟಪಟ್ಟು ದುಡಿಯುತ್ತಾರೆ ಮತ್ತು ಜೀವನದಲ್ಲಿ ಸ್ವಂತವಾಗಿ ಹೆಸರು, ಹಣವನ್ನು ಗಳಿಸುತ್ತಾರೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News