Hair Fall Tips: ಈ ಆಯುರ್ವೇದ ಮೂಲಿಕೆ ಕೂದಲು ಉದುರುವಿಕೆಯಿಂದ ಮುಕ್ತಿ ನೀಡುತ್ತದೆ

ಕೂದಲು ಉದುರುವಿಕೆಗೆ ಆರ್ಯುವೇದದ ಮೂಲಿಕೆ: ಕೂದಲಿನ ಸಮಸ್ಯೆಗಳನ್ನು ತಪ್ಪಿಸಲು ರಾಸಾಯನಿಕ ಆಧಾರಿತ ಕೂದಲಿನ ಉತ್ಪನ್ನಗಳನ್ನು ಎಂದಿಗೂ ಬಳಸಬಾರದು. ಬದಲಿಗೆ ನೀವು ನೈಸರ್ಗಿಕ ಪರಿಹಾರಗಳನ್ನು ಅಳವಡಿಸಿಕೊಳ್ಳಬೇಕು.

Written by - Puttaraj K Alur | Last Updated : Aug 12, 2023, 04:09 PM IST
  • ಭೃಂಗರಾಜ್ ಕೂದಲಿಗೆ ತುಂಬಾ ಪ್ರಯೋಜನಕಾರಿಯಾದ ಅನೇಕ ಅಂಶಗಳನ್ನು ಒಳಗೊಂಡಿದೆ
  • ಭೃಂಗರಾಜ್‍ನಲ್ಲಿ ವಿಟಮಿನ್ ಇ, ವಿಟಮಿನ್ ಡಿ, ಮೆಗ್ನೀಸಿಯಮ್, ಕಬ್ಬಿಣ, ಕ್ಯಾಲ್ಸಿಯಂ ಸಮೃದ್ಧವಾಗಿದೆ
  • ಬೋಳು ತಪ್ಪಿಸಲು ಬಯಸಿದರೆ ನೀವು ಖಂಡಿತ ಭೃಂಗರಾಜ್ ಪುಡಿಯನ್ನು ಬಳಸಬೇಕು
Hair Fall Tips: ಈ ಆಯುರ್ವೇದ ಮೂಲಿಕೆ ಕೂದಲು ಉದುರುವಿಕೆಯಿಂದ ಮುಕ್ತಿ ನೀಡುತ್ತದೆ title=
ಕೂದಲು ಉದುರುವಿಕೆಗೆ ಆರ್ಯುವೇದದ ಮೂಲಿಕೆ

ನವದೆಹಲಿ: ಕೂದಲು ಉದುರುವುದು ಇತ್ತೀಚಿನ ದಿನಗಳಲ್ಲಿ ತುಂಬಾ ಸಾಮಾನ್ಯವಾಗಿದೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ, ಮುಂದೆ ಬೋಳುತಲೆ ಕೂಡ ಉಂಟಾಗುತ್ತದೆ. ಅನೇಕ ಪುರುಷರು ಮತ್ತು ಮಹಿಳೆಯರು ಈ ಸಮಸ್ಯೆಯಿಂದ ಹೋರಾಡುತ್ತಿದ್ದಾರೆ. ಆದರೆ ಅನೇಕ ಪ್ರಯತ್ನಗಳ ನಂತರವೂ ಕೂದಲು ಉದುರುವಿಕೆಯಿಂದ ಮುಕ್ತಿ ದೊರೆತಿರುವುದಿಲ್ಲ. ಇದರಿಂದ ಟೆನ್ಷನ್ ಉಂಟಾಗುತ್ತದೆ. ಸಾಮಾನ್ಯವಾಗಿ ಕೊಳಕು, ಪೋಷಣೆಯ ಕೊರತೆ ಮತ್ತು ಕಳಪೆ ಜೀವನಶೈಲಿಯಿಂದ ಕೂದಲು ಉದುರುವಿಕೆ ಉಂಟಾಗುತ್ತದೆ. ನಿಮ್ಮ ಕೂದಲು ದಪ್ಪ ಮತ್ತು ಗಟ್ಟಿಯಾಗಬೇಕೆಂದು ಬಯಸಿದರೆ ಇದಕ್ಕಾಗಿ ನೀವು ಭೃಂಗರಾಜ್ ಬಳಸಬೇಕು.

ಕೂದಲಿಗೆ ವಿಶೇಷ ಔಷಧ ಭೃಂಗರಾಜ!

ಭೃಂಗರಾಜ್ ಆಯುರ್ವೇದ ಮೂಲಿಕೆಯಾಗಿದ್ದು, ಅದು ಕೂದಲಿಗೆ ತುಂಬಾ ಪ್ರಯೋಜನಕಾರಿಯಾದ ಅನೇಕ ಅಂಶಗಳನ್ನು ಒಳಗೊಂಡಿದೆ. ಈ ಕಾರಣಕ್ಕಾಗಿಯೇ ಈ ಮೂಲಿಕೆಯನ್ನು ಅನೇಕ ಕೂದಲ ರಕ್ಷಣೆಯ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ನೀವು ನಿಮ್ಮ ಮನೆಯಲ್ಲಿ ಭೃಂಗರಾಜ ಪುಡಿಯನ್ನು ಇಟ್ಟುಕೊಳ್ಳಬೇಕು ಮತ್ತು ಕೂದಲಿನ ಆರೋಗ್ಯವನ್ನು ಸುಧಾರಿಸಲು ಬಳಸಬೇಕು.

ಇದನ್ನೂ ಓದಿ: ಕೆಲವೇ ದಿನಗಳಲ್ಲಿ ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಲು ಈ ಒಂದೇ ಒಂದು ಹಣ್ಣು ನಿಮ್ಮ ಆಹಾರದಲ್ಲಿರಲಿ!

ಭೃಂಗರಾಜ್‌ನಲ್ಲಿ ಕಂಡುಬರುವ ಪೋಷಕಾಂಶಗಳು

ಭೃಂಗರಾಜ್‌ನಲ್ಲಿ ಕಂಡುಬರುವ ಪೋಷಕಾಂಶಗಳನ್ನು ಇಂಗ್ಲಿಷ್‌ನಲ್ಲಿ ಫಾಲ್ಸ್ ಡೈಸಿ ಎಂದು ಕರೆಯಲಾಗುತ್ತದೆ. ಇದರ ವೈಜ್ಞಾನಿಕ ಹೆಸರು ಎಕ್ಲಿಪ್ಟಾ ಪ್ರೋಸ್ಟ್ರಟಾ. ವಿಟಮಿನ್ ಇ, ವಿಟಮಿನ್ ಡಿ, ಮೆಗ್ನೀಸಿಯಮ್, ಕಬ್ಬಿಣ, ಕ್ಯಾಲ್ಸಿಯಂ ಜೊತೆಗೆ ಆಂಟಿವೈರಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇದರಲ್ಲಿ ಕಂಡುಬರುತ್ತವೆ, ಇದು ಕೂದಲಿಗೆ ಎಲ್ಲಾ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ.

ಕೂದಲು ಉದುರುವುದು ನಿಲ್ಲುತ್ತದೆ

ಇಂತಹ ಅನೇಕ ಅಂಶಗಳು ಭೃಂಗರಾಜ್ ಪೌಡರ್‌ನಲ್ಲಿ ಕಂಡುಬರುತ್ತವೆ, ಇದು ರಕ್ತ ಪರಿಚಲನೆ ಸುಧಾರಿಸುತ್ತದೆ. ಇದು ನಮ್ಮ ಕೂದಲು ಮತ್ತು ಅದರ ಬೇರುಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಪುಡಿಯಿಂದ ನೆತ್ತಿಯು ಪ್ರಚಂಡ ಶಕ್ತಿಯನ್ನು ಪಡೆಯುತ್ತದೆ. ಇದರಿಂದಾಗಿ ಕೂದಲು ಒಡೆಯುವುದು ನಿಲ್ಲುತ್ತದೆ. ನೀವು ಸಹ ಬೋಳು ತಪ್ಪಿಸಲು ಬಯಸಿದರೆ, ಖಂಡಿತ ಭೃಂಗರಾಜ್ ಪುಡಿಯನ್ನು ಬಳಸಬೇಕು.

ಇದನ್ನೂ ಓದಿ: ಈರುಳ್ಳಿ ಎಣ್ಣೆಗೆ ಇದನ್ನು ಬೆರೆಸಿ ಹಚ್ಚಿದರೆ ಬೋಳು ತಲೆಯಲ್ಲೂ ಕೂದಲು ಬೆಳೆಯುವುದು!

ಭೃಂಗರಾಜ್ ಪುಡಿಯನ್ನು ಹೇಗೆ ಬಳಸುವುದು?

ಇದಕ್ಕಾಗಿ ಗ್ಯಾಸ್ ಮೇಲೆ ಪಾತ್ರೆಯನ್ನು ಇಟ್ಟು  2 ಚಮಚ ತೆಂಗಿನ ಎಣ್ಣೆ ಸೇರಿಸಿ, ಬಿಸಿ ಮಾಡಿದ ನಂತರ 1 ಚಮಚ ಭೃಂಗರಾಜ್ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದು ಕುದಿಯುವಾಗ ಅದನ್ನು ಇನ್ನೊಂದು ಪಾತ್ರೆಯಲ್ಲಿ ತೆಗೆದುಕೊಂಡು ಅದನ್ನು ಫಿಲ್ಟರ್ ಮಾಡಿ. ಈಗ ಈ ಎಣ್ಣೆಯನ್ನು ಕೂದಲಿಗೆ ಹಚ್ಚಿರಿ.

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ  ಸಲಹೆ ಗೆದುಕೊಳ್ಳಬೇಕು. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News