Hasta Samudrika Shastra: ಕೈಯಲ್ಲಿ ಈ ಗೆರೆ ಇದ್ದರೆ ಯಾವುದೇ ವ್ಯಕ್ತಿ ಶ್ರೀಮಂತನಾಗುತ್ತಾನೆ!

Hasta Samudrika Shastra: ಹಸ್ತದ ಕೆಲವು ಸಾಲುಗಳು ತುಂಬಾ ಮಂಗಳಕರವಾಗಿವೆ. ತಮ್ಮ ಕೈಯಲ್ಲಿ ಅದರಷ್ಟದ ರೇಖೆಗಳನ್ನು ಹೊಂದಿರುವ ಜನರು ಜೀವನದಲ್ಲಿ ಒಂದು ಹಂತದಲ್ಲಿ ಖಂಡಿತವಾಗಿಯೂ ಶ್ರೀಮಂತರಾಗುತ್ತಾರೆ. ಇವರು ಸಾಕಷ್ಟು ಸಂಪತ್ತನ್ನು ಗಳಿಸುತ್ತಾರೆ.

Written by - Puttaraj K Alur | Last Updated : Dec 6, 2022, 06:22 PM IST
  • ಕೈಯಲ್ಲಿ ಧನ ರೇಖೆ ಹೊಂದಿರುವ ಜನರು ಹಣದ ವಿಷಯದಲ್ಲಿ ಅದೃಷ್ಟದ ಜೊತೆಗೆ ಶ್ರೀಂಮತರಾಗುತ್ತಾರೆ
  • ಕೈಯಲ್ಲಿ ಸ್ಪಷ್ಟ & ಒಡೆಯದ ಮುಖ್ಯ ಸಾಲು ಹೊಂದಿರುವ ಜನರು ಸಾಕಷ್ಟು ಹೆಸರು, ಹಣ ಗಳಿಸುತ್ತಾರೆ
  • ಹೆಡ್ ಲೈನ್, ಫೇಟ್ ಲೈನ್ & ಲೈಫ್ ಲೈನ್ ಈ 3 ಅಂಗೈಯಲ್ಲಿ ತ್ರಿಕೋನ ರೂಪಿಸಿದರೆ ಅಂತಹ ವ್ಯಕ್ತಿ ಅದೃಷ್ಟಶಾಲಿ
Hasta Samudrika Shastra: ಕೈಯಲ್ಲಿ ಈ ಗೆರೆ ಇದ್ದರೆ ಯಾವುದೇ ವ್ಯಕ್ತಿ ಶ್ರೀಮಂತನಾಗುತ್ತಾನೆ! title=
ಅದೃಷ್ಟದ ರೇಖೆಗಳು

ನವದೆಹಲಿ: ಪ್ರತಿಯೊಬ್ಬರೂ ಶ್ರೀಮಂತರಾಗಲು ಹಾತೊರೆಯುತ್ತಾರೆ, ಆದರೆ ಈ ವಿಷಯದಲ್ಲಿ ಅದೃಷ್ಟವು ಎಲ್ಲರಿಗೂ ಬೆಂಬಲ ನೀಡುವುದಿಲ್ಲ. ಇದರ ಹಿಂದೆ ಹಲವು ಕಾರಣಗಳಿವೆ. ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಕೆಲವು ರೇಖೆಗಳು, ಚಿಹ್ನೆಗಳು ಮತ್ತು ಗುರುತುಗಳ ಬಗ್ಗೆ ಹೇಳಲಾಗಿದೆ. ಇವುಗಳು ವ್ಯಕ್ತಿ ಶ್ರೀಮಂತನಾಗುವ ಸ್ಪಷ್ಟ ಸೂಚನೆಯನ್ನು ನೀಡುತ್ತವೆ. ನಿಮ್ಮ ಕೈಯಲ್ಲಿಯೂ ಇಂತಹ ರೇಖೆಗಳಿದ್ದರೆ ಸಂತೋಷವಾಗಿರಿ. ಏಕೆಂದರೆ ನೀವು ಖಂಡಿತ ಶ್ರೀಮಂತರಾಗುವ ಅದೃಷ್ಟ ಹೊಂದಿರುತ್ತೀರಿ.

ಇದನ್ನೂ ಓದಿ: Palmistry: ನೀವು ಯಾವಾಗ ಮದುವೆಯಾಗ್ತೀರಿ ಎಂದು ಹೇಳುತ್ತೆ ಈ ಅಂಗೈ ರೇಖೆ!

ಕೈಯಲ್ಲಿ ಈ ಗೆರೆ ಇದ್ದವರು ಮಿಲಿಯನೇರ್ ಆಗುತ್ತಾರೆ!

- ಕೈಯಲ್ಲಿ ಉಂಗುರದ ಬೆರಳಿನ ಕೆಳಗೆ ನೇರವಾದ ಲಂಬ ರೇಖೆಯನ್ನು ಮನಿ ಲೈನ್ ಅಥವಾ ಧನ ರೇಖೆ ಎಂದು ಕರೆಯಲಾಗುತ್ತದೆ. ಕೈಯಲ್ಲಿ ಈ ರೇಖೆಯನ್ನು ಹೊಂದಿರುವ ಜನರು ಹಣದ ವಿಷಯದಲ್ಲಿ ಅದೃಷ್ಟವಂತರು. ಈ ಜನರು ಜೀವನದಲ್ಲಿ ಸಾಕಷ್ಟು ಹಣವನ್ನು ಗಳಿಸುವ ಮೂಲಕ ಐಷಾರಾಮಿ ಜೀವನ ನಡೆಸುತ್ತಾರೆ.

- ತಮ್ಮ ಕೈಯಲ್ಲಿ ಸ್ಪಷ್ಟ ಮತ್ತು ಒಡೆಯದ ಮುಖ್ಯ ಸಾಲುಗಳನ್ನು ಹೊಂದಿರುವ ಜನರು ತಮ್ಮ ಜೀವನದಲ್ಲಿ ಸಾಕಷ್ಟು ಹೆಸರು ಮತ್ತು ಹಣವನ್ನು ಗಳಿಸುತ್ತಾರೆ. ಸೂರ್ಯನ ರೇಖೆಯು ಸ್ಪಷ್ಟವಾಗಿ, ಆಳವಾಗಿ ಮತ್ತು ಒಡೆಯದೆ ಇದ್ದರೆ ಹಣದ ಜೊತೆಗೆ ಹೆಚ್ಚಿನ ಗೌರವ ಮತ್ತು ಉನ್ನತ ಸ್ಥಾನವನ್ನು ಪಡೆಯುತ್ತಾರೆ.

- ಹಣದ ರೇಖೆಯು ವಕ್ರವಾಗಿದ್ದರೆ, ವ್ಯಕ್ತಿಗೆ ಹಣ ಬರುತ್ತದೆ, ಆದರೆ ವೆಚ್ಚಗಳು ಸಹ ಹೆಚ್ಚು ಹೆಚ್ಚು ಇರುತ್ತವೆ. ಈ ಜನರ ಆದಾಯದಲ್ಲಿ ಏರಿಳಿತಗಳಿರುತ್ತದೆ.

- ಯಾರ ಕೈಯಲ್ಲಿ ಸೂರ್ಯನ ರೇಖೆಯಿಂದ ಹೊರಹೊಮ್ಮುವ ರೇಖೆಯು ಹಣದ ರೇಖೆಯನ್ನು ದಾಟುತ್ತದೆಯೋ, ಅಂತಹ ಜನರು ಖಂಡಿತವಾಗಿಯೂ ತಮ್ಮ ಜೀವನದಲ್ಲಿ ಒಂದು ಹಂತದಲ್ಲಿ ಶ್ರೀಮಂತರಾಗುತ್ತಾರೆ. ಇವರಿಗೆ  ಇದ್ದಕ್ಕಿದ್ದಂತೆ ಹಣ ಹರಿದುಬರುತ್ತದೆ. ಸಾಮಾನ್ಯ ಜೀವನ ನಡೆಸುತ್ತಿರುವಾಗ ಇವರಿಗೆ  ಇದ್ದಕ್ಕಿದ್ದಂತೆ ಧನಲಾಭವಾಗಲಿದೆ. ಇದು ಅವರನ್ನು ಕ್ಷಣಾರ್ಧದಲ್ಲಿ ಶ್ರೀಮಂತರನ್ನಾಗಿ ಮಾಡುತ್ತದೆ.

- ಹೆಡ್ ಲೈನ್, ಫೇಟ್ ಲೈನ್ ಮತ್ತು ಲೈಫ್ ಲೈನ್ ಈ ಮೂರೂ ಅಂಗೈಯಲ್ಲಿ ತ್ರಿಕೋನವನ್ನು ರೂಪಿಸಿದರೆ, ಅಂತಹ ವ್ಯಕ್ತಿಯು ತುಂಬಾ ಅದೃಷ್ಟಶಾಲಿ. ಇವರಿಗೆ ಸಾಕಷ್ಟು ಹಣ, ಉನ್ನತ ಸ್ಥಾನ, ಕೀರ್ತಿ ಎಲ್ಲವೂ ಸಿಗುತ್ತದೆ. ಸಂಪತ್ತು ಮತ್ತು ಕೀರ್ತಿಯ ಜೊತೆಗೆ ಸಮಾಜದಲ್ಲಿ ವಿಶೇಷ ಗೌರವವನ್ನು ಇವರು ಪಡೆಯುತ್ತಾರೆ.

ಇದನ್ನೂ ಓದಿ: Shani Dev: ಮನೆಯಲ್ಲಿ ಶನಿಯ ವಿಗ್ರಹ ಏಕೆ ಇಡಬಾರದು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News