Career Remedies: ಕೆಲಸ ಕಳೆದುಕೊಳ್ಳುವ ಭಯವೇ? ತುಳಸಿಯ ಈ ಪರಿಹಾರವನ್ನು ಮಾಡಿ, ಬಡ್ತಿಯೊಂದಿಗೆ ಸಂಬಳವೂ ಹೆಚ್ಚಾಗುತ್ತದೆ

Career Remedies: ಮನೆಯಲ್ಲಿರುವ ತುಳಸಿ ಗಿಡ  (Tulsi Plant) ಬಹಳ ಮಂಗಳಕರ. ಅಲ್ಲದೆ, ಇದು ಪರಿಹಾರಗಳ  (Remedies) ವಿಷಯದಲ್ಲಿ ತುಂಬಾ ಪರಿಣಾಮಕಾರಿಯಾಗಿದೆ. ತುಳಸಿ ಕಾ ಉಪಾಯವು ಉದ್ಯೋಗ-ವ್ಯಾಪಾರ (Job-Business), ಹಣದ ಕೊರತೆಯಂತಹ ಅನೇಕ ಸಮಸ್ಯೆಗಳನ್ನು ತ್ವರಿತವಾಗಿ ಜಯಿಸಬಹುದು.  

Written by - Yashaswini V | Last Updated : Sep 14, 2021, 08:18 AM IST
  • ತುಳಸಿ ಪರಿಹಾರವು ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ
  • ತುಳಸಿಯನ್ನು ಈ ರೀತಿ ಪೂಜಿಸುವುದರಿಂದ ಉದ್ಯೋಗದಲ್ಲಿ ಬಡ್ತಿ ಸಿಗಲಿದೆ
  • ವ್ಯಾಪಾರದಲ್ಲಿ ಲಾಭ ಪಡೆಯಲು ಈ ರೀತಿಯಾಗಿ ತುಳಸಿ ಪರಿಹಾರ ಮಾಡಿ
Career Remedies: ಕೆಲಸ ಕಳೆದುಕೊಳ್ಳುವ ಭಯವೇ? ತುಳಸಿಯ ಈ ಪರಿಹಾರವನ್ನು ಮಾಡಿ, ಬಡ್ತಿಯೊಂದಿಗೆ ಸಂಬಳವೂ ಹೆಚ್ಚಾಗುತ್ತದೆ title=
Career Remedies- ಕೆಲಸ, ಬುಸಿನೆಸ್, ಆರ್ಥಿಕ ಸಮಸ್ಯೆಗಳಿಂದ ಹೊರಬರಲು ಇಂದೇ ಮಾಡಿ ತುಳಸಿ ಪರಿಹಾರ

ನವದೆಹಲಿ: Career Remedies- ತುಳಸಿ ಗಿಡಕ್ಕೆ (Tulsi Plant) ಧಾರ್ಮಿಕವಾಗಿ, ಜ್ಯೋತಿಷ್ಯದಲ್ಲಿ ಮತ್ತು ವಾಸ್ತು ಪ್ರಕಾರ ಹೆಚ್ಚಿನ ಮಹತ್ವ ನೀಡಲಾಗಿದೆ. ಇದು ಹಲವು ರೀತಿಯ ವಾಸ್ತು ದೋಷಗಳನ್ನು (Vastu Dosh) ನಿವಾರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ತರುತ್ತದೆ. ತುಳಸಿಯನ್ನು ಪೂಜಿಸುವುದರಿಂದ ಭಗವಾನ್ ವಿಷ್ಣು  (Lord Vishnu) ಸಂತೋಷಪಡುತ್ತಾನೆ. ಮಾತ್ರವಲ್ಲ ಲಕ್ಷ್ಮೀ ದೇವಿ (Lord Laxmi) ಕೂಡ ಸಂತಸಗೊಳ್ಳುತ್ತಾಳೆ. ಮನೆಯಿಂದ ಹೊರಗಡೆ ಹೋಗುವಾಗ ತುಳಸಿಗೆ ನಮಸ್ಕರಿಸಿದರೆ ಒಳ್ಳೆಯದಾಗುತ್ತದೆ ಎಂದು ಎಲ್ಲರಿಗೂ ತಿಳಿಸಿದೆ. ತುಳಸಿ ಪರಿಹಾರಗಳು ವೃತ್ತಿಜೀವನಕ್ಕೆ (Career) ತುಂಬಾ ಪ್ರಯೋಜನಕಾರಿ ಎಂದು ಕೆಲವರಿಗೆ ತಿಳಿದಿದ್ದರೂ, ಅದರಿಂದ ಬಡ್ತಿಯ ಜೊತೆಗೆ ಸಂಬಳವೂ ಹೆಚ್ಚಾಗುತ್ತದೆ ಎಂಬುದು ಬಹಳಷ್ಟು ಮಂದಿಗೆ ತಿಳಿದಿಲ್ಲ.

ತುಳಸಿಯ ಪರಿಣಾಮಕಾರಿ ಪರಿಹಾರಗಳು :
ಬಡತನವನ್ನು ಹೋಗಲಾಡಿಸಲು ಪರಿಹಾರ:
ಜೀವನದಲ್ಲಿ ಹಣದ ಕೊರತೆಯನ್ನು ಎದುರಿಸುತ್ತಿರುವ ಜನರು, ತುಳಸಿ ಗಿಡದ ಬೇರನ್ನು ಬೆಳ್ಳಿಯ ಲಾಕೆಟ್ ನಲ್ಲಿ ಹಾಕಿ ಕುತ್ತಿಗೆಗೆ ಧರಿಸಿದರೆ ಬಹಳ ಪ್ರಯೋಜನವಾಗುತ್ತದೆ. ತುಳಸಿಯ ಬೇರು ನವಗ್ರಹ ದೋಷವನ್ನು (Navgrah Dosh) ತೆಗೆದುಹಾಕುವ ಮೂಲಕ ಅದೃಷ್ಟವನ್ನು ಬೆಳಗಿಸುತ್ತದೆ ಮತ್ತು ಕೆಲವೇ ದಿನಗಳಲ್ಲಿ ವ್ಯಕ್ತಿಯ ಬಡತನ ದೂರವಾಗುತ್ತದೆ ಎಂಬ ನಂಬಿಕೆಯಿದೆ. 

ಇದನ್ನೂ ಓದಿ- Guru Rashi Parivartan: ದೇವಗುರು ಬೃಹಸ್ಪತಿ ರಾಶಿ ಬದಲಾವಣೆ, ಈ 6 ರಾಶಿಗಳಿಗೆ ಒಳ್ಳೆಯ ಸಮಯ

ಹಣದ ಕೊರತೆಯನ್ನು ನಿವಾರಿಸಲು ಪರಿಹಾರ: ಎಷ್ಟೇ ಕಷ್ಟ-ಪಟ್ಟು ದುಡಿದರೂ ಆರ್ಥಿಕ ಪರಿಸ್ಥಿತಿ ಸುಧಾರಿಸದಿದ್ದರೆ ಪ್ರತಿ ಗುರುವಾರ ಅಥವಾ ಏಕಾದಶಿಯಂದು ತುಳಸಿಯನ್ನು ಭಕ್ತಿಯಿಂದ ಪೂಜಿಸಿ. ನಂತರ ತುಳಸಿ ಎಲೆಯನ್ನು (Tulsi Leave) ನಿಮ್ಮ ಪರ್ಸ್‌ನಲ್ಲಿ ಅಥವಾ ಹಣವನ್ನು ಇರಿಸುವ ಸ್ಥಳದಲ್ಲಿ ಸುರಕ್ಷಿತವಾಗಿ ಇರಿಸಿ. ಈ ಎಲೆ ನಿಮ್ಮ ಜೀವನದಲ್ಲಿ ಹಣವನ್ನು ಆಯಸ್ಕಾಂತದಂತೆ ಆಕರ್ಷಿಸುತ್ತದೆ ಎಂದು ಹೇಳಲಾಗುತ್ತದೆ. 

ಕೆಲಸದ ಸಮಸ್ಯೆಗೆ ಪರಿಹಾರ: ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ವಿಶ್ವ ಆರ್ಥಿಕತೆಯು ಕೆಟ್ಟದಾಗಿ ಪರಿಣಾಮ ಬೀರಿದೆ. ಅನೇಕ ಜನರು ತಮ್ಮ ಉದ್ಯೋಗವನ್ನು  (Job)  ಕಳೆದುಕೊಂಡಿದ್ದಾರೆ. ಇನ್ನೂ ಅನೇಕರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುವ ಭಯದಲ್ಲಿದ್ದಾರೆ. ಅಂತಹ ಭಯವನ್ನು ಹೋಗಲಾಡಿಸಲು ತುಳಸಿ ಗಿಡವನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ ಮತ್ತು ನಿಮ್ಮ ಕೆಲಸದ ಸ್ಥಳದಲ್ಲಿ ಗುರುವಾರ ಇಟ್ಟುಕೊಳ್ಳಿ. ಅಲ್ಲದೆ, ಸೋಮವಾರ, 16 ತುಳಸಿ ಬೀಜಗಳನ್ನು ಬಿಳಿ ಬಟ್ಟೆಯಲ್ಲಿ ಕಟ್ಟಿ ಕಛೇರಿಯ ಮಣ್ಣಿನಲ್ಲಿ ಹೂತು ಹಾಕಿ. ಈ ಪರಿಹಾರವು ಉದ್ಯೋಗವನ್ನು ಉಳಿಸುವುದಲ್ಲದೆ ಬಡ್ತಿಯನ್ನು ಕೂಡ ತರುತ್ತದೆ ಎನ್ನಲಾಗಿದೆ.

ಇದನ್ನೂ ಓದಿ- Ruby Gemstone: ಸೂರ್ಯನನ್ನು ಪ್ರತಿನಿಧಿಸುವ ಈ ರತ್ನ ಧಾರಣೆಯಿಂದ ಆತ್ಮವಿಶ್ವಾಸ ಹೆಚ್ಚಾಗುತ್ತಂತೆ

ವ್ಯಾಪಾರದಲ್ಲಿ ಲಾಭಕ್ಕೆ ಪರಿಹಾರ: ಕಠಿಣ ಪರಿಶ್ರಮದ ನಂತರವೂ ನಿಮಗೆ ವ್ಯಾಪಾರದಲ್ಲಿ (Business) ಯಶಸ್ಸು ಸಿಗದಿದ್ದರೆ, 3 ದಿನಗಳ ಕಾಲ ತುಳಸಿ ಎಲೆಗಳನ್ನು ನೀರಿನಲ್ಲಿ ಇರಿಸಿದ ನಂತರ, ನಿಮ್ಮ ಅಂಗಡಿ ಅಥವಾ ಕಚೇರಿಯಲ್ಲಿ ನೀವು ಹಣ ಇಡುವ ಸ್ಥಳದಲ್ಲಿ ಆ ನೀರನ್ನು ಪ್ರೋಕ್ಷಿಸಿ ಮತ್ತು ಅದನ್ನು ಎಲ್ಲಾ ಬಾಗಿಲುಗಳ ಮೇಲೆ ಸಿಂಪಡಿಸಿ. ಈ ಒಂದು ಪರಿಹಾರವು ನಿಮ್ಮ ವ್ಯಾಪಾರವನ್ನು ವೇಗಗೊಳಿಸುತ್ತದೆ. 

(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News