Mustard Seeds Remedies: ನಿಮ್ಮ ಅದೃಷ್ಟವನ್ನೇ ಬದಲಾಯಿಸುತ್ತೆ ಸಾಸಿವೆ ಕಾಳು

Mustard Seeds Remedies: ಸಾಸಿವೆ ಕಾಳು  ಅನೇಕ ರೀತಿಯ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಇದರೊಂದಿಗೆ, ಸಾಸಿವೆಯ ತಂತ್ರಗಳು ದುರದೃಷ್ಟವನ್ನು ತೊಡೆದುಹಾಕುವ ಮೂಲಕ ನಿಮ್ಮನ್ನು ಅದೃಷ್ಟವಂತರನ್ನಾಗಿ ಮಾಡುತ್ತದೆ. ಅಷ್ಟೇ ಅಲ್ಲ ಸಾಸಿವೆಯ ಉಪಾಯವು ಬಡತನ ಮತ್ತು ಹಣದ ಕೊರತೆಯನ್ನು ಸಹ ತೊಡೆದುಹಾಕುತ್ತದೆ. 

Written by - Yashaswini V | Last Updated : Dec 14, 2021, 12:53 PM IST
  • ಸಾಸಿವೆಯ ಉಪಾಯವು ದುರದೃಷ್ಟವನ್ನು ತೆಗೆದುಹಾಕುತ್ತದೆ
  • ಬಡತನ ಮತ್ತು ಹಣದ ಕೊರತೆಯಿಂದ ಸಿಗುತ್ತೆ ಮುಕ್ತಿ
  • ಸಾಸಿವೆ ಕಾಳು ನಿಮ್ಮನ್ನು ಅದೃಷ್ಟವಂತರನ್ನಾಗಿ ಮಾಡುತ್ತದೆ
Mustard Seeds Remedies: ನಿಮ್ಮ ಅದೃಷ್ಟವನ್ನೇ ಬದಲಾಯಿಸುತ್ತೆ ಸಾಸಿವೆ ಕಾಳು title=
Mustard Seeds Remedies

Mustard Seeds Remedies: ಅಡುಗೆಗೆ ಒಗ್ಗರಣೆ ಎಷ್ಟು ಮುಖ್ಯವೋ, ಒಗ್ಗರಣೆಗೆ ಸಾಸಿವೆಯೂ ಅಷ್ಟೇ ಮುಖ್ಯ. ಸಾಸಿವೆಯನ್ನು ಹಲವು ವಿಧಗಳಲ್ಲಿ ಮಸಾಲೆ ಪದಾರ್ಥವಾಗಿ ಬಳಸಲಾಗುತ್ತದೆ. ಉಪ್ಪಿನಕಾಯಿ ತಯಾರಿಕೆಯಲ್ಲಿಯೂ ಸಾಸಿವೆ ಬಳಸುತ್ತಾರೆ. ಸಾಸಿವೆಯಲ್ಲಿ ಅನೇಕ ರೀತಿಯ ಗುಣಲಕ್ಷಣಗಳಿವೆ, ಆದ್ದರಿಂದ ಅನೇಕ ಜನರು ಇದನ್ನು ಅಡುಗೆಮನೆಯ ಬಹುಮುಖ್ಯ ಆಹಾರ ಪದಾರ್ಥ ಎಂದು ಪರಿಗಣಿಸುತ್ತಾರೆ. ಇದಲ್ಲದೆ ಸಾಸಿವೆಯ ಪರಿಹಾರವೂ ಅನೇಕ ರೀತಿಯ ಸಮಸ್ಯೆಗಳಿಂದ ಹೊರಬರಲು ಸಹಾಯ ಮಾಡುತ್ತದೆ. ಇದರೊಂದಿಗೆ, ಸಾಸಿವೆಯ ತಂತ್ರಗಳು ದುರದೃಷ್ಟವನ್ನು ತೊಡೆದುಹಾಕುವ ಮೂಲಕ ನಿಮ್ಮನ್ನು ಅದೃಷ್ಟವಂತರನ್ನಾಗಿ ಮಾಡುತ್ತದೆ. ಸಾಸಿವೆ ಬೀಜಗಳ ಸಹಾಯದಿಂದ ಕೆಟ್ಟ ದೃಷ್ಟಿಯನ್ನು ಸಹ ನಿವಾರಿಸಬಹುದು. ಸಾಸಿವೆಯ ತಂತ್ರಗಳು ಮತ್ತು ಅದು ಹೇಗೆ ಪ್ರಯೋಜನಕಾರಿ ಎಂದು ತಿಳಿಯಿರಿ. 

ದುರಾದೃಷ್ಟವನ್ನು ನಿವಾರಿಸಲು ಸಾಸಿವೆಯ ಪರಿಹಾರ:
ದುರಾದೃಷ್ಟವನ್ನು ಹೋಗಲಾಡಿಸಲು ಹೂಜಿಯಲ್ಲಿ ನೀರು ತುಂಬಿ ಅದರಲ್ಲಿ ಸಾಸಿವೆ (Mustard Totke) ಎಲೆಗಳನ್ನು ಹಾಕಿ ಸ್ನಾನ ಮಾಡಿದರೆ ದುರಾದೃಷ್ಟ ದೂರವಾಗುತ್ತದೆ. ಇದರೊಂದಿಗೆ ಈ ಉಪಾಯದ ಪ್ರಭಾವದಿಂದ ರೋಗಗಳೂ ದೂರವಾಗುತ್ತವೆ. ಇದಲ್ಲದೆ, ಬಡತನ ಮತ್ತು ಹಣದ ಕೊರತೆಯಿಂದ ಮುಕ್ತರಾಗಬಹುದು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- Luckiest Zodiac Sign Of 2022: ಈ ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿದೆ ಹೊಸ ವರ್ಷ

ದುಷ್ಟ ಕಣ್ಣಿನಿಂದ ದೂರವಿರಲು :
ದೃಷ್ಟಿ ತೆಗೆಯಲು ಏಳು ಸಾಸಿವೆ ಕಾಳು, ಏಳು ಸಣ್ಣ ಕಲ್ಲು ಉಪ್ಪು, ಏಳು ಕೆಂಪು ಮೆಣಸಿನಕಾಯಿಗಳನ್ನು ತೆಗೆದುಕೊಂಡು ಇಳಿ ತೆಗೆದು ಹಾಕಿ. ಲಾಲ್ ಕಿತಾಬ್ ಪ್ರಕಾರ, ಸಾಸಿವೆಯ ಇದನ್ನು ಎಡಗೈಯಿಂದ ಮಾಡಬೇಕು.  ಈ ರೀತಿ ಮಾಡುವುದರಿಂದ ದೃಷ್ಟಿ ನಿವಾರಣೆ ಆಗುತ್ತದೆ.

ಇದನ್ನೂ ಓದಿ-  Lucky Zodiac People: ಈ 2 ರಾಶಿಯವರ ಮೇಲೆ ಮಂಗಳನ ವಿಶೇಷ ಅನುಗ್ರಹ

ಗುರುವಾರ ಸಾಸಿವೆ ಕಾಳುಗಳನ್ನು (Mustard Seeds Remedies) ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರೊಂದಿಗೆ ಹಣಕ್ಕೆ ಸಂಬಂಧಿಸಿದ ಸಮಸ್ಯೆಗೂ ಪರಿಹಾರ ದೊರೆಯುತ್ತದೆ. ಇದಲ್ಲದೆ, ಸಾಲದಿಂದ ಸಹ ಮುಕ್ತರಾಗಬಹುದು ಎಂದು ಹೇಳಲಾಗುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News