ಇಂದಿನಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ: ಕಾಂಗ್ರೇಸ್ ಕಟ್ಟಿಹಾಕಲು ಸಜ್ಜಾದ ಬಿಜೆಪಿ-ಜೆಡಿಎಸ್

                                

Last Updated : Nov 13, 2017, 10:00 AM IST
ಇಂದಿನಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ: ಕಾಂಗ್ರೇಸ್ ಕಟ್ಟಿಹಾಕಲು ಸಜ್ಜಾದ ಬಿಜೆಪಿ-ಜೆಡಿಎಸ್ title=

ಬೆಳಗಾವಿ: ಇಂದಿನಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಪ್ರಾರಂಭವಾಗಲಿದ್ದು, ಕಾಂಗ್ರೇಸ್ ಪಕ್ಷವನ್ನು ಕಟ್ಟಿಹಾಕಲು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ಬತ್ತಳಿಕೆಯಲ್ಲಿ ಬಾಣಗಳನ್ನು ತಯಾರಿಸಿಕೊಂಡಿವೆ.

ಬಿಜೆಪಿಯ ಅಸ್ತ್ರಗಳು-

* ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲು ಬಿಜೆಪಿ ತೀರ್ಮಾನಿಸಿದೆ.

* ಸಿದ್ದರಾಮಯ್ಯ ಸರ್ಕಾರದಲ್ಲಿ ಬಾರಿ ಹಗರಣ ನಡೆದಿದೆ, ಈ ಕುರಿತಾಗಿ ದಾಖಲೆಗಳನ್ನು ಇಂದೇ ಬಿಡುಗಡೆ ಮಾಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

* ಕೇಂದ್ರ ಸರ್ಕಾರ ನೀಡಿರುವ ಹಣವನ್ನು ರಾಜ್ಯಸರ್ಕಾರ ಸರಿಯಾದ ರೀತಿಯಲ್ಲಿ ಉಪಯೋಗ ಮಾಡಿಕೊಂಡಿಲ್ಲ ಎಂಬ ಆರೋಪ.

* ವಿದ್ಯುತ್ ಹಗರಣ.

ಜೆಡಿಎಸ್ ಅಸ್ತ್ರಗಳು-

* ಏತನೀರಾವರಿ ಯೋಜನೆಯನ್ನು ಸರ್ಕಾರ ಕೈಬಿಟ್ಟಿರುವುದರ  ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ.

* ಸರ್ಕಾರ ಚಕ್ ಪೋಸ್ಟ್ಗಳಲ್ಲಿ ಹಣ ವಸೂಲಿ ಮಾಡುತ್ತಿರುವುದನ್ನು ವಿರೋಧಿಸಲು ಜೆಡಿಎಸ್ ಸಜ್ಜಾಗಿದೆ.

ಕಾಂಗ್ರೇಸ್ ಪ್ರತಿತಂತ್ರ-

* ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದಿರುವ ವಿದ್ಯುತ್ ಹಗರಣವನ್ನು ತಿಳಿಸುವ ಮೂಲಕ ಬಿಜೆಪಿ ಬಾಯಿಮುಚ್ಚಿಸಲು ಸಿದ್ದು ಸರ್ಕಾರ ತಯಾರಿದೆ.

* ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ನ್ಯಾಯವಾಗಿ ಬರಬೇಕಾದ ಅನುದಾನದಲ್ಲಿ ಕಡಿಮೆಯಾಗಿರುವ ರೂ.10,000 ಕೋಟಿಯನ್ನು ಕೊಡಿಸುವಂತೆ ಆಗ್ರಹಿಸುವ ಸಾಧ್ಯತೆ ಇದೆ.

ಈ ರೀತಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ತಂತ್ರ-ಪ್ರತಿತಂತ್ರಗಳ ಬತ್ತಳಿಕೆಗೆ ಬೆಳಗಾವಿಯ ಸುವರ್ಣ ಸೌಧ ಸಾಕ್ಷಿಯಾಗಲಿದೆ.

Trending News