15 ಶ್ರೀಮಂತರ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದೆ, ಆದರೆ ರೈತರದ್ದಲ್ಲ- ರಾಹುಲ್ ಗಾಂಧಿ

ರೈತರ ಸಾಲ ಮನ್ನಾ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಸರ್ಕಾರದ ನೀತಿಗಳಲ್ಲಿ ಸೇರಿಸಲಾಗಿಲ್ಲ ಎಂದು ರಾಹುಲ್ ಹೇಳಿದ್ದಾರೆ.

Last Updated : Mar 20, 2018, 04:06 PM IST
15 ಶ್ರೀಮಂತರ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದೆ, ಆದರೆ ರೈತರದ್ದಲ್ಲ- ರಾಹುಲ್ ಗಾಂಧಿ title=

ಉಡುಪಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ರೈತರ ಸಾಲದ ಮನ್ನಾ ಬಗ್ಗೆ ಬಿಜೆಪಿ ಮೇಲೆ ದಾಳಿ ಮಾಡಿದ್ದಾರೆ. ಬಿಜೆಪಿ ಸರ್ಕಾರವು ಕಳೆದ ಕೆಲವು ವರ್ಷಗಳಲ್ಲಿ 15 ಶ್ರೀಮಂತ ಜನರ 2.5 ಲಕ್ಷ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಿದೆ ಎಂದು ರಾಹುಲ್ ಆರೋಪಿಸಿದರು. ರೈತನ ಸಾಲ ಮನ್ನಾವನ್ನು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ತಮ್ಮ ಸರ್ಕಾರದ ನೀತಿಗಳಲ್ಲಿ ಸೇರಿಸಿಲ್ಲ ಎಂದು ಇದೇ ಸಂದರ್ಭದಲ್ಲಿ ದಾಳಿ ನಡೆಸಿದರು. ಇದೇ ವೇಳೆ ಕರ್ನಾಟಕ ಸರ್ಕಾರ ರೈತರ ಸಾಲವನ್ನು ಮನ್ನಾ ಮಾಡಿರುವ ಬಗ್ಗೆ ಪ್ರಶಂಸಿಸಿದ ರಾಹುಲ್ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯ ರೈತರ ಸಾಲವನ್ನು 8,000 ಕೋಟಿ ರೂ.ವರೆಗೆ ಮನ್ನಾ ಮಾಡಿದೆ ಎಂದು ತಿಳಿಸಿದರು.

ಇಂದಿನಿಂದ ಎರಡು ದಿನಗಳ ಕಾಲ ಕರಾವಳಿ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಉಡುಪಿಯ ಪಡುಬಿದ್ರೆಯಲ್ಲಿ ಸಭೆಯಲ್ಲಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಧಾನಿ ಮೋದಿ ಶ್ರೀ ನಾರಾಯಣ್ ಗುರು ಮತ್ತು ಬಸವಣ್ಣರಂತಹ ತತ್ವಜ್ಞಾನಿಗಳ ಬಗ್ಗೆ ಮಾತನಾಡುತ್ತಾರೆ, ಆದರೆ ಅವರ ನೀತಿಗಳು ಸೇರಿಲ್ಲ. ದೊಡ್ಡ ಕೈಗಾರಿಕೋದ್ಯಮಿಗಳ 2.5 ಲಕ್ಷ ಕೋಟಿ ಮೌಲ್ಯದ ಸಾಲಗಳನ್ನು ಅವರು ಕಳೆದುಕೊಳ್ಳಬಹುದು ಆದರೆ ರೈತರಿಗೆ ಏಕೆ ಸಹಾಯ ಮಾಡಬಾರದು? ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದರು.

2014 ರಲ್ಲಿ ಮೋದಿ ನೀಡಿದ್ದ 3 ಪ್ರಮುಖ ಭರವಸೆಗಳು
1) ಪ್ರತಿಯೊಬ್ಬ ವ್ಯಕ್ತಿಯ ಖಾತೆಗೆ ರೂ .15 ಲಕ್ಷವನ್ನು ಠೇವಣಿ ಮಾಡಲಾಗುವುದು.
2) ವರ್ಷಕ್ಕೆ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸಲಾಗುವುದು.
3) MSP ಯನ್ನು 1.5 ಪಟ್ಟು ಹೆಚ್ಚಿಸುವ ಮೂಲಕ ರೈತರಿಗೆ ಸಹಾಯ ಮಾಡಲಾಗುವುದು ಎಂಬ ಭರವಸೆಗಳನ್ನು ನೀಡಿದರು. ಆದರೆ ಯಾವ ಒಂದು ಭರವಸೆಯನ್ನೂ ಮೋದಿ ಸರ್ಕಾರ ಈಡೇರಿಸಿಲ್ಲ ಎಂದು ಮೋದಿಯನ್ನು ಅಣುಕಿಸಿದರು.

ಕಾಂಗ್ರೆಸ್ ಮಹಾಅಧಿವೇಶನದಲ್ಲೂ ಮೋದಿ ವಿರುದ್ಧ ದಾಳಿ ಮಾಡಿದ ರಾಹುಲ್
ಇತ್ತೀಚೆಗೆ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಸಹ ಎಐಸಿಸಿ ಅಧ್ಯಕ್ಷರ ರಾಹುಲ್ ಗಾಂಧಿ ಭಾಷಣದುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಸರ್ಕಾರದ ದಾಳಿ ನಡೆಸಿದರು. ಕೌರವರು ಶಕ್ತಿಶಾಲಿಗಳಾಗಿದ್ದರು ಮತ್ತು ಸೊಕ್ಕಿನವರು, ಆದರೆ ಪಾಂಡವರು ವಿನಮ್ರರಾಗಿದ್ದರು ಸತ್ಯಕ್ಕಾಗಿ ಹೋರಾಡಿದರು. ಅದರಂತೆ ಬಿಜೆಪಿ ಅಧಿಕಾರಕ್ಕಾಗಿ ಹಪಾಹಪಿಸಿದರೆ, ಕಾಂಗ್ರೆಸ್ ಪಕ್ಷವು ಸತ್ಯಕ್ಕಾಗಿ ಹೋರಾಡಲಿದೆ ಎಂದು ರಾಹುಲ್ ತಮ್ಮ ಭಾಷಣದಲ್ಲಿ ತಿಳಿಸಿದರು. 

ಅದೇ ರೀತಿಯಾಗಿ ಪ್ರಧಾನಮಂತ್ರಿಗಳ ಹೆಸರಿನವನೇ ಆದ ನೀರವ್ ಮೋದಿ ಭಾರತದ ಅತಿ ದೊಡ್ಡ ಲೂಟಿಗೆ ಸಾಕ್ಷಿಯಾಗಿದ್ದಾನೆ. ಇದು ನಿಜಕ್ಕೂ ಏನನ್ನು ಪ್ರತಿನಿಧಿಸುತ್ತದೆ, ಇದು ಭಾರತದ ಅತಿ ದೊಡ್ಡ ಕ್ರೋನಿ ಬಂಡವಾಳಶಾಹಿ ಮತ್ತು ಪ್ರಧಾನಿ ಮೋದಿ ನಡುವಿನ ರಹಸ್ಯ ಒಪ್ಪಂದವನ್ನು ಸೂಚಿಸುತ್ತದೆ. ಒಬ್ಬ ಮೋದಿ ಇನ್ನೊಬ್ಬ ಮೋದಿಗೆ 30 ಸಾವಿರ ಕೋಟಿ ರೂಗಳನ್ನು ನೀಡುತ್ತಾನೆ. ಅದಕ್ಕೆ ಪ್ರತಿಯಾಗಿ ಮೋದಿ ಚುನಾವಣೆಯಲ್ಲಿ ಮೋದಿಯನ್ನು ಮಾರ್ಕೆಟಿಂಗ್ ಮಾಡಲು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಲು ಹಣವನ್ನು ನೀಡುತ್ತಾನೆ ಎಂದು ರಾಹುಲ್ ಹರಿಹೈದಿದ್ದರು.

Trending News