Ramesh Jarkiholi CD Case: ರಮೇಶ್ ಜಾರಕಿಹೊಳೆ ಸಿಡಿ ಕೇಸ್ ಗೆ ಬ್ಲಾಸ್ಟಿಂಗ್ ಟ್ವಿಸ್ಟ್..!

ಕಿಂಗ್ ಪೀನ್ ನರೇಶ್ ಮತ್ತೆ ಶ್ರವಣ್ ಇಬ್ಬರು ನನ್ನನ್ನು ಹನಿ ಟ್ರ್ಯಾಪ್ ಬಳಸಿಕೊಂಡಿದ್ದಾರೆ. ಮುಂದೆ ಅವರು ಹೇಳಿದಂತೆ ನಾನು ನಡೆದುಕೊಂಡಿದ್ದಾನೆ

Last Updated : Apr 12, 2021, 02:02 PM IST
  • ಎಸ್ಐಟಿ ಮುಂದೆ ಸ್ಪೋಟಕ ಹೇಳಿಕೆ ನೀಡಿದ ಸಂತ್ರಸ್ತ ಯುವತಿ
  • ನನ್ನನ್ನು ಹನಿ ಟ್ರ್ಯಾಪ್ ಗೆ ಬಳಸಿಕೊಂಡಿದ್ದಾರೆ
  • ರಮೇಶ್ ಜಾರಕಿಹೊಳೆ ವಿರುದ್ಧ ನೀಡಿರುವ ಹೇಳಿಕೆ ಪೂರ್ಣ ಸತ್ಯ ಅಲ್ಲ
Ramesh Jarkiholi CD Case: ರಮೇಶ್ ಜಾರಕಿಹೊಳೆ ಸಿಡಿ ಕೇಸ್ ಗೆ ಬ್ಲಾಸ್ಟಿಂಗ್ ಟ್ವಿಸ್ಟ್..! title=

ಬೆಂಗಳೂರು : ನನ್ನನ್ನು ಹನಿ ಟ್ರ್ಯಾಪ್ ಗೆ ಬಳಸಿಕೊಂಡಿದ್ದಾರೆ ಎಂದು ಸಂತ್ರಸ್ತ ಯುವತಿ ಎಸ್ಐಟಿ ಮುಂದೆ ಸ್ಪೋಟಕ ಹೇಳಿಕೆ ನೀಡಿದ್ದಾಳೆ.

ಇಂದು ಯುವತಿ ಎಸ್ಐಟಿ ಅಧಿಕಾರಿಗಳಿಗೆ(SIT Officers) ಉಲ್ಟಾ ಹೊಂದಿದ್ದಾಳೆ. ನಾನು  ಹನಿ ಟ್ರ್ಯಾಪ್ ಆಗಿದ್ದೆ. ಕಿಂಗ್ ಪೀನ್ ನರೇಶ್ ಮತ್ತೆ ಶ್ರವಣ್ ಇಬ್ಬರು ನನ್ನನ್ನು ಹನಿ ಟ್ರ್ಯಾಪ್ ಬಳಸಿಕೊಂಡಿದ್ದಾರೆ. ಮುಂದೆ ಅವರು ಹೇಳಿದಂತೆ ನಾನು ನಡೆದುಕೊಂಡಿದ್ದಾನೆ ಎಂದು ಎಂದು ಯುವತಿ ಹೇಳಿದ್ದಾರೆ. ಈ ಹೇಳಿಕೆಗೆ ಎಸ್ಐಟಿ ಅಧಿಕಾರಿಗಳು ದಂಗಾಗಿದ್ದಾರೆ.

ಇದನ್ನೂ ಓದಿ : DK Shivakumar: ಮಸ್ಕಿ ಬಿಜೆಪಿ ಅಭ್ಯರ್ಥಿಯನ್ನ ಅನರ್ಹಗೊಳಿಸಲು ಕಾಂಗ್ರೆಸ್ ಶತ ಪ್ರಯತ್ನ..!

ಹೀಗಾಗಲಿ ಇನ್ನೊಮ್ಮೆ ಯುವತಿಯನ್ನ ಜಡ್ಜ್ ಮುಂದೆ ಹಾಜರು ಪಡಿಸಲು ಎಸ್ಐಟಿ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಯುವತಿ ಸಿಆರ್‌ಪಿಸಿ 161 ಎಸ್ಐಟಿ ತನಿಖಾ ಅಧಿಕಾರಿ ಕವಿತಾ(Kavita) ಮುಂದೆ ಯುವತಿ ಹೇಳಿಕೆ ನೀಡಿದ್ದಾಳೆ.

ಇದನ್ನೂ ಓದಿ : Bus Strike: ಐದನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ; ಇದಕ್ಕೆ ಸರ್ಕಾರದ ಅಭಿಪ್ರಾಯವೇನು?

ರಮೇಶ್ ಜಾರಕಿಹೊಳೆ(Ramesh Jarkiholi) ವಿರುದ್ಧ ನೀಡಿರುವ ಹೇಳಿಕೆ ಪೂರ್ಣ ಸತ್ಯ ಅಲ್ಲ. ನಾನು ಒತ್ತಡದಿಂದ ಆ ರೀತಿ ಹೇಳಿಕೆ ನೀಡಿದ್ದೇನೆ ಎಂದು ಯುವತಿ ಎಸ್ಐಟಿ ಹೇಳಿದ್ದಾಳೆ.

ಇದನ್ನೂ ಓದಿ : ಪ್ರಥಮ ಘಟಿಕೋತ್ಸವದ ಸಂಭ್ರಮದಲ್ಲಿ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾನಿಲಯ

ಈ ಕುರಿತು ಮಾತನಾಡಿರುವ ಸಿಡಿ ಲೇಡಿ ಪರ ವಕೀಲ ಮಂಜುನಾಥ, ಯುವತಿ ಎಸ್ಐಟಿ ಮುಂದೆ ಯಾವುದೇ ಉಲ್ಟಾ ಹೊಡೆದಿಲ್ಲ ಎಂದು ಹೇಳಿದ್ದಾರೆ.  

ಇದನ್ನೂ ಓದಿ : Heavy Rainfall: ಬಿರು ಬಿಸಿಲಿನ ಮಧ್ಯ ಉತ್ತರ ಕರ್ನಾಟಕದಲ್ಲಿ ಗುಡುಗು ಸಹಿತ ಭಾರಿ ಮಳೆ!

ಯಾವುದು ಸತ್ಯ ಯಾವುದು ಸುಳ್ಳು ಕಾದು ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News