ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಖೈದಿಗಳ ಪ್ರತಿಭಟನೆ

ಮನೆಯಿಂದ ತಂದ ಊಟ ತಲುಪಿಸದ ಹಿನ್ನೆಲೆಯಲ್ಲಿ ವಿಚಾರಣಾಧೀನ ಖೈದಿಗಳು ಇಂದು ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

Last Updated : Sep 4, 2017, 02:52 PM IST
ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಖೈದಿಗಳ ಪ್ರತಿಭಟನೆ title=

ಬೆಂಗಳೂರು: ಮನೆಯಿಂದ ತಂದ ಊಟ ತಲುಪಿಸದ ಹಿನ್ನೆಲೆಯಲ್ಲಿ ವಿಚಾರಣಾಧೀನ ಖೈದಿಗಳು ಇಂದು ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ವಾರದ ಪರೀಕ್ಷಣೆಗೆ  ಬಂದ ಅಧಿಕಾರಿಗಳ ಮುಂದೆ ಖೈದಿಗಳು ಪ್ರತಿಭಟನೆ ನಡೆಸಿದ್ದಾರೆ. 
ನಿಯಮದ ಪ್ರಕಾರ ವಿಚಾರಣಾಧೀನ ಖೈದಿಗಳಿಗೆ ಮನೆ ಊಟ ಕೊಡಬಹುದು. ಆದರೆ, ಜೈಲಿನ ಅಧಿಕಾರಿಗಳು ಊಟವನ್ನು ಕೊಂಡೊಯ್ಯಲು ಬಿಡದೆ  

ಆದ್ರೆ ಅಧಿಕಾರಿಗಳು ಊಟವನ್ನು ಕೊಂಡೊಯ್ಯಲು ಬಿಡದೆ ತಡೆ ಹಿಡಿದಿದ್ದಾರೆ. ಈ ಸಂಬಂಧ ಊಟ ತಿಂಡಿ ಬಿಟ್ಟು ವಿಚಾರಣಾಧೀನ ಖೈದಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಜೈಲು ಸಿಬ್ಬಂಧಿಗಳಿಂದ  ಖೈದಿಗಳ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರಾದರೂ ಮನವೊಲಿಕೆಗೆ ಬಗ್ಗದ ವಿಚಾರಣಾಧೀನ ಖೈದಿಗಳು ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.

Trending News