7 ವರ್ಷವಾದರೂ ಸಿಗದ ಪರಿಹಾರ: ಶಾಸಕ, ಸಚಿವರ ವಿರುದ್ಧ ಸಂತ್ರಸ್ಥನ ಆಕ್ರೋಶ

ಚಾಮರಾಜನಗರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಕಚೇರಿಯಲ್ಲಿ ಸಚಿವ ಕೆ.ವೆಂಕಟೇಶ್ ಅಹವಾಲು ಸ್ವೀಕಾರದ ವೇಳೆ ಸೈಯದ್ ನಸೀರ್ ಅಹ್ಮದ್ ಎಂಬಾತ ಸಚಿವ ವೆಂಕಟೇಶ್, ಶಾಸಕ ಸಿ‌.ಪುಟ್ಟರಂಗಶೆಟ್ಟಿ ವಿರುದ್ಧ ಆಕ್ರೋಶ ಹೊರಹಾಕಿದರು‌.

Written by - Yashaswini V | Last Updated : Jan 2, 2024, 02:25 PM IST
  • ಸ್ಥಳವನ್ನು ವಶಕ್ಕೆ ಪಡೆದು 7 ವರ್ಷಗಳಾದರೂ ನಮಗೆ ಬೇರೆ ಜಾಗ ಸಿಕ್ಕಿಲ್ಲ, ಪರಿಹಾರವೂ ಸಿಕ್ಕಿಲ್ಲ
  • ಜನ ಸಂಪರ್ಕ ಸಭೆಯಲ್ಲಿ ಈ ಬಗ್ಗೆ ದೂರು ಕೊಡಲಾಗಿತ್ತಾದರೂ ಪರಿಹಾರ ಏನೂ ಸಿಕ್ಕಿಲ್ಲ
  • ಅಹವಾಲು ಸಲ್ಲಿಸುವ ವೇಳೆ ತನ್ನ ಸಮಸ್ಯೆ ಹೇಳಿಕೊಳ್ಳದಂತೆ ಶಾಸಕರ ಹಿಂಬಾಲಕರು ಹೊರಕ್ಕೆ ಕಳುಹಿಸಿದ್ದಾರೆ- ಸಂತ್ರಸ್ತ ಸೈಯದ್ ನಸೀರ್ ಅಹ್ಮದ್
7 ವರ್ಷವಾದರೂ ಸಿಗದ ಪರಿಹಾರ: ಶಾಸಕ, ಸಚಿವರ ವಿರುದ್ಧ ಸಂತ್ರಸ್ಥನ ಆಕ್ರೋಶ  title=

ಚಾಮರಾಜನಗರ: ರಸ್ತೆ ಅಗಲೀಕರಣದ ವೇಳೆ ಜಾಗವನ್ನು ವಶಕ್ಕೆ ಪಡೆದು 7 ವರ್ಷಗಳಾದರೂ ಪರಿಹಾರ ಸಿಕ್ಕಿಲ್ಲ ಎಂದು ಸಂತ್ರಸ್ಥನೋರ್ವ ಸಚಿವ ಹಾಗೂ ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದ ಘಟನೆ ನಡೆಯಿತು.

ಚಾಮರಾಜನಗರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಕಚೇರಿಯಲ್ಲಿ ಸಚಿವ ಕೆ.ವೆಂಕಟೇಶ್ ಅಹವಾಲು ಸ್ವೀಕಾರದ ವೇಳೆ ಸೈಯದ್ ನಸೀರ್ ಅಹ್ಮದ್ ಎಂಬಾತ ಸಚಿವ ವೆಂಕಟೇಶ್, ಶಾಸಕ ಸಿ‌.ಪುಟ್ಟರಂಗಶೆಟ್ಟಿ ವಿರುದ್ಧ ಆಕ್ರೋಶ ಹೊರಹಾಕಿದರು‌.

ಇದನ್ನೂ ಓದಿ- ಕಡಿಮೆ ಬೆಲೆಗೆ ದುಬೈ ಚಿನ್ನ ಕೊಡಿಸುವುದಾಗಿ ವಂಚನೆ : 80 ಲಕ್ಷ ಸುಲಿಗೆ ಮಾಡಿದ್ದ ಐವರ ಬಂಧನ

ಸ್ಥಳವನ್ನು ವಶಕ್ಕೆ ಪಡೆದು 7 ವರ್ಷಗಳಾದರೂ ನಮಗೆ ಬೇರೆ ಜಾಗ ಸಿಕ್ಕಿಲ್ಲ, ಪರಿಹಾರವೂ ಸಿಕ್ಕಿಲ್ಲ , ಜನ ಸಂಪರ್ಕ ಸಭೆಯಲ್ಲಿ ಈ ಬಗ್ಗೆ ದೂರು ಕೊಡಲಾಗಿತ್ತಾದರೂ ಪರಿಹಾರ ಏನೂ ಸಿಕ್ಕಿಲ್ಲ ಎಂದರು. 

ಶಾಸಕರಿಂದ ದರ್ಪ ಎಂದು ಕಿಡಿ: 
ಅಹವಾಲು ಸಲ್ಲಿಸುವ ವೇಳೆ ತನ್ನ ಸಮಸ್ಯೆ ಹೇಳಿಕೊಳ್ಳದಂತೆ ಶಾಸಕರ ಹಿಂಬಾಲಕರು ಹೊರಕ್ಕೆ ಕಳುಹಿಸಿದ್ದಾರೆ, ಶಾಸಕರು ದರ್ಪ  ಮೆರೆದಿದ್ದಾರೆ ಎಂದು ಸಂತ್ರಸ್ತ  ಕಿಡಿಕಾರಿದರು. 

ಇದನ್ನೂ ಓದಿ- ಜಮೀನು ವಿಚಾರ:ಎರಡು ಗುಂಪುಗಳ ನಡುವೆ ಮಾರಾಮಾರಿ

ಸಂತ್ರಸ್ಥ ಹಾಗೂ ಶಾಸಕರ  ನಡುವೆ ಚಾಲೆಂಜ್ ವಾರ್: 
ಬೇರೆಯವರು ನ್ಯಾಯಾಲಯಕ್ಕೆ ಹೋಗಿ  ಪರಿಹಾರ ಪಡೆದುಕೊಂಡಿದ್ದಾರೆ ಎಂದು ಸಂತ್ರಸ್ಥ ನಾಸಿರ್ ಹೇಳಿದ್ದಕ್ಕೆ ಸಿಡಿಮಿಡಿಗೊಂಡ ಶಾಸಕ ಸಿ.ಪುಟ್ಟರಂಗಶೆಟ್ಟಿ ಗರಂ ಆದರು. ಇದು ಚಾಲೆಂಜ್ ಆಗೇ ಬಿಡಲಿ, ಯಾರು ಪರಿಹಾರ ತೆಗೆದುಕೊಂಡಿದ್ದಾರೆ ತೋರಿಸು ಎಂದು ಕುಪಿತರಾದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News