ನಿರ್ಮಲಾ ಸೀತಾರಾಮನ್ ಅವರು ತೋರಿದ ನಡವಳಿಕೆ ಅತಿಯಾದದ್ದು- ಸಿದ್ದರಾಮಯ್ಯ

  

Last Updated : Aug 26, 2018, 04:33 PM IST
ನಿರ್ಮಲಾ ಸೀತಾರಾಮನ್ ಅವರು ತೋರಿದ ನಡವಳಿಕೆ ಅತಿಯಾದದ್ದು- ಸಿದ್ದರಾಮಯ್ಯ title=

ಮೈಸೂರು: ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತೋರಿದ ನಡವಳಿಕೆ ಅತಿಯಾಗಿತ್ತು ಅದು ಕೇಂದ್ರ ಸಚಿವರ ರೀತಿ ಇರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. 

ಮೈಸೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ "ಪ್ರಧಾನಮಂತ್ರಿಗಳ  ಪ್ರತಿನಿಧಿಯಾಗಿ ಬಂದಂತಹ  ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಒಂದು ಪೈಸೆ ಪರಿಹಾರವನ್ನು ಸಹ ನೀಡಿಲ್ಲ,ಇನ್ನು ಮಡಿಕೇರಿಯಲ್ಲಿ ನಡೆದ ಸಭೆ ವೇಳೆ ರಕ್ಷಣಾ ಸಚಿವೆ ತೋರಿದ ನಡವಳಿಕೆ ಅತಿಯಾದದ್ದು ಎಂದು ಅವರು ಕಿಡಿಕಾರಿದ ಸಿದ್ದರಾಮಯ್ಯ  ಅವರ ನಡವಳಿಕೆ ಕೇಂದ್ರ ಸಚಿವರ ತರಹ ಇರಲಿಲ್ಲ "ಎಂದು ಟೀಕಿಸಿದರು.

ಇನ್ನು ಮುಂದುವರೆದು  ಬಿಜೆಪಿಯವರು ಪ್ರಾಕೃತಿಕ ವಿಕೋಪದ ಕುರಿತಾಗಿ ಸಮನ್ವಯ ಸಭೆ ಕರೆಯಲಿಲ್ಲ ಎನ್ನುತ್ತಾರೆ ಆದರೆ ಅವರು ಬಿಜೆಪಿ ಸಂಸದರು ಅನುದಾನ ಬಿಡುಗಡೆ ವಿಚಾರವಾಗಿ ಒತ್ತಡ ಹೇರದೆ ಏನು ಮಾಡುತ್ತಿದ್ದರು ಎಂದು ತೀರುಗೇಟು ನೀಡಿದರು. ಬಿಜೆಪಿಯವರಿಗೆ ಮಾತಾನಾಡುವ ನೈತಿಕತೆಯಾದರು ಎಲ್ಲಿದೆ ಎಂದು ಬಿಜೆಪಿ ಆರೋಪಕ್ಕೆ ಟಾಂಗ್ ಕೊಟ್ಟರು. 

Trending News