MTB Nagaraj : 'ನಾನು ಪಾರ್ಟಿ ಬಿಟ್ಟು ಬಂದು ಶರತ್ ಬಚ್ಚೇಗೌಡಗೆ ಭಿಕ್ಷೆ ನೀಡಿದ್ದೇನೆ'

ಹೊಸಕೋಟೆ ತಾಲೂಕಿನಲ್ಲಿ ಕೆಲವು ರಾಜಕಾರಣಿಗಳು ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಸಚಿವ ಎಂಟಿಬಿ ನಾಗರಾಜ್ ಎಂದು ಹೇಳಿದ್ದಾರೆ.

Written by - Zee Kannada News Desk | Last Updated : May 6, 2022, 04:48 PM IST
  • ಲಂಚ ಪಡೆಯುವ ಬುದ್ದಿ ನನ್ನ ರಾಜಕೀಯ ಜೀವನದಲ್ಲಿ ಇಲ್ಲಾ
  • ನಾನು ಪಾರ್ಟಿ ಬಿಟ್ಟು ಬಂದು ಶರತ್ ಬಚ್ಚೇಗೌಡಗೆ ಭಿಕ್ಷೆ ನೀಡಿದ್ದೇನೆ
  • ಈ ಭಾರಿಯ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸುತ್ತಾರೆ
MTB Nagaraj : 'ನಾನು ಪಾರ್ಟಿ ಬಿಟ್ಟು ಬಂದು ಶರತ್ ಬಚ್ಚೇಗೌಡಗೆ ಭಿಕ್ಷೆ ನೀಡಿದ್ದೇನೆ' title=

ದೇವನಹಳ್ಳಿ : ಹೊಸಕೋಟೆ ತಾಲೂಕಿನಲ್ಲಿ ಕೆಲವು ರಾಜಕಾರಣಿಗಳು ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಸಚಿವ ಎಂಟಿಬಿ ನಾಗರಾಜ್ ಎಂದು ಹೇಳಿದ್ದಾರೆ.

ಸೂಲಿಬೆಲೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಎಂಟಿಬಿ ನಾಗರಾಜ್, ತಾಲೂಕಿನಾದ್ಯಾಂತ 50ಕ್ಕೂ ಅಧಿಕ ದೇವಸ್ಥಾನಗಳನ್ನು ನಿರ್ಮಾಣ ಮಾಡಿದ್ದೇನೆ, ಆದರೆ ಶಾಸಕ ಹಾಗೂ ಸಂಸದರು ಒಂದು ದೇವಸ್ಥಾನ ಸಹ ನಿರ್ಮಾಣ ಮಾಡಿಲ್ಲ. ನಾನು ಯಾರಿಂದ ಸಹ ಲಂಚ ಪಡೆದಿಲ್ಲ, ದೇವಾಲಯ ನಿರ್ಮಾಣ ಮಾಡಲು ಸಹಾಯ ಮಾಡುವವರು ಇದ್ದರೆ ನೀಡಿ ಎಂದು ಹೇಳಿದ್ದೇನೆ. ರಾಮ ದೇವರ ಮೇಲೆ ಪ್ರಮಾಣ ಮಾಡುತ್ತೇನೆ ಲಂಚ ಪಡೆಯುವ ಬುದ್ದಿ ನನ್ನ ರಾಜಕೀಯ ಜೀವನದಲ್ಲಿ ಇಲ್ಲಾ ಎಂದು ಗುಡುಗಿದರು.  

ಇದನ್ನೂ ಓದಿ : ‘ಡಿ.ಕೆ.ಶಿವಕುಮಾರ್ ಮತ್ತು 40 ಡೀಲುಗಳು!’

ನನಗೆ ದೇವರು ಬೇಕಾದಷ್ಟು ನೀಡಿದ್ದಾನೆ, ನಾನು ಪಾರ್ಟಿ ಬಿಟ್ಟು ಬಂದು ಶರತ್ ಬಚ್ಚೇಗೌಡಗೆ ಭಿಕ್ಷೆ ನೀಡಿದ್ದೇನೆ. ಈ ಭಾರಿಯ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸುತ್ತಾರೆ. ತಕ್ಕ ಉತ್ತರ ನೀಡುತ್ತಾರೆ.  ಪೌರಾಡಳಿತ ಹಾಗೂ ಸಣ್ಣ ಕೈಗಾರಿಕಾ ಉದ್ದಿಮೆಗಳ ಸಚಿವ ಎಂಟಿಬಿ ನಾಗರಾಜ್ ಶರತ್ ಬಚ್ಛೇಗೌಡ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News