ವಿದ್ಯಾರ್ಥಿಗಳ ಪ್ರವಾಸಕ್ಕೂ ಕಾಂಗ್ರೆಸ್ ಸರ್ಕಾರದಿಂದ ಕೊಕ್ಕೆ: ಬಿಜೆಪಿ ಆಕ್ರೋಶ

ವಿದ್ಯಾರ್ಥಿ ವೇತನವನ್ನು ಕಾಂಗ್ರೆಸ್ ಸರ್ಕಾರ ಈಗಾಗಲೇ ಶೇ‌.90ರಷ್ಟು ಕಡಿತಗೊಳಿಸಿದೆ. ಆದರೆ ಶೈಕ್ಷಣಿಕ ವರ್ಷ ಆರಂಭವಾಗಿ 6 ತಿಂಗಳಾದರೂ ಅದನ್ನೂ ಬಿಡುಗಡೆ ಮಾಡದೆ #ATMSarkara ವಿದ್ಯಾರ್ಥಿಗಳಿಗೆ ದ್ರೋಹ ಬಗೆಯುತ್ತಿದೆ ಎಂಬು ಬಿಜೆಪಿ ಕಿಡಿಕಾರಿದೆ.

Written by - Puttaraj K Alur | Last Updated : Nov 23, 2023, 07:16 PM IST
  • ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ರಾಜ್ಯದ ವಿದ್ಯಾರ್ಥಿಗಳ ಪ್ರವಾಸಕ್ಕೂ ಕೊಕ್ಕೆ ಹಾಕಿದೆ
  • ರಾಜ್ಯದ ಕಾಂಗ್ರೆಸ್ ಸರ್ಕಾರ ರಾಜ್ಯದ ವಿದ್ಯಾರ್ಥಿಗಳ ಪಾಲಿಗೆ ಮರಣಶಾಸನವಾಗಿದೆ
  • ಅರ್ಧ ಶೈಕ್ಷಣಿಕ ವರ್ಷ ಮುಗಿದರೂ, ಪಠ್ಯಪುಸ್ತಕ, ಶೂ, ಸಮವಸ್ತ್ರ ವಿತರಿಸಿಲ್ಲವೆಂದು ಬಿಜೆಪಿ ಆಕ್ರೋಶ
ವಿದ್ಯಾರ್ಥಿಗಳ ಪ್ರವಾಸಕ್ಕೂ ಕಾಂಗ್ರೆಸ್ ಸರ್ಕಾರದಿಂದ ಕೊಕ್ಕೆ: ಬಿಜೆಪಿ ಆಕ್ರೋಶ title=
ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ!

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ರಾಜ್ಯದ ವಿದ್ಯಾರ್ಥಿಗಳ ಪ್ರವಾಸಕ್ಕೂ ಕೊಕ್ಕೆ ಹಾಕಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಗುರುವಾರ ಟ್ವೀಟ್ ಮಾಡಿರುವ ಬಿಜೆಪಿ, ‘ಮಕ್ಕಳ ಪ್ರವಾಸಕ್ಕೂ ಕಾಂಗ್ರೆಸ್ ಕೊಕ್ಕೆ ಹಾಕಿದೆ, ಇದರಿಂದ ಮಕ್ಕಳ ಶಾಲಾ ಪ್ರವಾಸದ ಕನಸು ಭಗ್ನವಾಗಿದೆ’ ಎಂದು ಟೀಕಿಸಿದೆ.

‘ರಾಜ್ಯದ ಕಾಂಗ್ರೆಸ್ ಸರ್ಕಾರ ರಾಜ್ಯದ ವಿದ್ಯಾರ್ಥಿಗಳ ಪಾಲಿಗೆ ಮರಣಶಾಸನವಾಗಿದೆ. ಅರ್ಧ ಶೈಕ್ಷಣಿಕ ವರ್ಷ ಮುಗಿದರೂ, ಪಠ್ಯಪುಸ್ತಕ, ಶೂ, ಸಮವಸ್ತ್ರ ವಿತರಿಸಿಲ್ಲ, ಈಗ ಮಕ್ಕಳ ಶೈಕ್ಷಣಿಕ ಪ್ರವಾಸವನ್ನೂ ಸಹ ಮೊಟಕುಗೊಳಿಸಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪನವರೇ #NEP ಬದಲು #SEP ಅಳವಡಿಸಿಕೊಳ್ಳುತ್ತೆವೆಂಬ ವಿತಂಡವಾದವನ್ನು ದೂರವಿಟ್ಟು, ಮೊದಲು ಇತ್ತ ಕಡೆ ಗಮನಹರಿಸಿ’ ಎಂದು ಬಿಜೆಪಿ ಸಲಹೆ ನೀಡಿದೆ.

ಇದನ್ನೂ ಓದಿ: ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ಮಳೆ

ನಿಮಗೆ ಕಲೆಕ್ಷನ್ ಚೆಲ್ಲಾಟ, ಬಡರೋಗಿಗಳಿಗೆ ಪ್ರಾಣ ಸಂಕಟ!

‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ದೆಸೆಯಿಂದ ಜೀವನಾವಶ್ಯಕ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಜನರ ಬದುಕು ದುರ್ಬರವಾಗುತ್ತಿರುವ ಹೊತ್ತಲ್ಲೇ, ಸಿಎಂ ಸಿದ್ದರಾಮಯ್ಯರ ಸರ್ಕಾರ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ಪೂರೈಕೆಯಲ್ಲಿ ಗೋಲ್‌ಮಾಲ್ ಮಾಡಿ ರೋಗಿಗಳನ್ನು ಪರದಾಡುವಂತೆ ಮಾಡಿದೆ. ಒಂದು ಕಡೆ ಜೀವ ಸಂರಕ್ಷಕ ಔಷಧಗಳ ಬೆಲೆ ಏರಿಸಿ ಕಲೆಕ್ಷನ್‌ಗೆ ಇಳಿದಿರುವ ಸಿದ್ದರಾಮಯ್ಯರವರ ಸರ್ಕಾರ, ಇನ್ನೊಂದು ಕಡೆ ಸರ್ಕಾರಿ ಆಸ್ಪತ್ರೆಗಳ ಅಗತ್ಯ ಔಷಧಗಳನ್ನೇ ಕೊಳ್ಳೆ ಹೊಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೇ, ನಿಮ್ಮಗಳ ಪರಮಸ್ವಾರ್ಥಕ್ಕಾಗಿ ಇಡೀ ರಾಜ್ಯವನ್ನೇ ಐಸಿಯುನಲ್ಲಿ ಇಟ್ಟಿದ್ದೀರಿ. ಈಗ ಕಲೆಕ್ಷನ್ ಹಪಹಪಿಗಾಗಿ ಬಡವರನ್ನು ಬಲಿ ತೆಗೆದುಕೊಳ್ಳಬೇಡಿ. ನಿಮಗೆ ಕಲೆಕ್ಷನ್ ಚೆಲ್ಲಾಟ, ಬಡರೋಗಿಗಳಿಗೆ ಪ್ರಾಣ ಸಂಕಟ’ವೆಂದು ಬಿಜೆಪಿ ಕಿಡಿಕಾರಿದೆ.

ಶೇ.90ರಷ್ಟು ವಿದ್ಯಾರ್ಥಿ ವೇತನ ಕಡಿತ!

‘ವಿದ್ಯಾರ್ಥಿ ವೇತನವನ್ನು ಕಾಂಗ್ರೆಸ್ ಸರ್ಕಾರ ಈಗಾಗಲೇ ಶೇ‌.90ರಷ್ಟು ಕಡಿತಗೊಳಿಸಿದೆ. ಆದರೆ ಶೈಕ್ಷಣಿಕ ವರ್ಷ ಆರಂಭವಾಗಿ 6 ತಿಂಗಳಾದರೂ ಅದನ್ನೂ ಬಿಡುಗಡೆ ಮಾಡದೆ #ATMSarkara ವಿದ್ಯಾರ್ಥಿಗಳಿಗೆ ದ್ರೋಹ ಬಗೆಯುತ್ತಿದೆ. ಹೊರ ರಾಜ್ಯಗಳ ಚುನಾವಣೆಗೆ ಹೋಗಿ ಬರಲು ಪುರುಸೊತ್ತಿರುವ ಈ ಸರ್ಕಾರದ ಬಳಿ ವಿದ್ಯಾರ್ಥಿಗಳ ಓದಿಗೆ ಸಹಕರಿಸಲು ಹಣವೂ ಇಲ್ಲ, ಮನಸ್ಸೂ ಇಲ್ಲ’ವೆಂದು ಬಿಜೆಪಿ ಕುಟುಕಿದೆ.

ಇದನ್ನೂ ಓದಿ: ಸಮಯಕ್ಕೆ ಸರಿಯಾಗಿ ಬಸ್‌ ಬಾರದ ಹಿನ್ನಲೆ ಲಕ್ಕುಂಡಿಯಲ್ಲಿ ಪ್ರತಿಭಟನೆ

ಬಕಾಸುರನಂತೆ ವರ್ತಿಸುತ್ತಿರುವ ಕಾಂಗ್ರೆಸ್ ಸರ್ಕಾರ!

‘ಎಷ್ಟು ತಿಂದರೂ ಸಾಕಾಗದ ಬಕಾಸುರನಂತೆ ರಾಜ್ಯದ ಕಾಂಗ್ರೆಸ್ ಸರ್ಕಾರ ವರ್ತಿಸುತ್ತಿದೆ. ಕಾವೇರಿಯನ್ನು ಹರಿಬಿಟ್ಟೂ ಬಿಟ್ಟು ರೈತರ ಹೊಲಗಳನ್ನು ಒಣಗಿಸಿದ್ದಾಗಿದೆ, ಗುತ್ತಿಗೆದಾರರ ಮಂಚದ ಅಡಿ ಸಂಗ್ರಹಿಸಿಟ್ಟೂ ಇಟ್ಟು ಹಂಚಿದ್ದೂ ಆಗಿದೆ. ಇದೀಗ ರಾಜ್ಯದಲ್ಲಿ ಅಕ್ರಮ ಕ್ವಾರಿಗಳನ್ನು ನಡೆಸುವುದೂ ಅಲ್ಲದೆ, ಅಕ್ರಮವಾಗಿ ಕೇರಳಕ್ಕೂ ಸಾಗಾಟ ಮಾಡುವ ದಂಧೆಯಲ್ಲಿ ಪಾಲುದಾರಿಕೆ ವ್ಯವಹಾರಕ್ಕೆ #ATMSarkara ಕೈ ಹಾಕಿದೆ’ ಎಂದು ಬಿಜೆಪಿ ಟೀಕಿಸಿದೆ.

‘ರಾಜ್ಯದ ಕುರಿಗಾಹಿಗಳಿಗೆ ಎಲ್ಲರಂತೆ ಸ್ವಾಭಿಮಾನದ ಸ್ವಾವಲಂಬನೆಯ ಜೀವನವನ್ನು ಕಟ್ಟಿಕೊಳ್ಳಲು ಹಿಂದಿನ ಬಿಜೆಪಿ ಸರ್ಕಾರ, ಅಮೃತ ಕುರಿಗಾಹಿ, ಅನುಗ್ರಹ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿತ್ತು. ಆದರೆ ಈಗಿನ ಕಾಂಗ್ರೆಸ್ ನೇತೃತ್ವದ #ATMSarkara "ಸುರಕ್ಷಾ ಅನುಗ್ರಹ"ದ ಯೋಜನೆಯ ಅನುದಾನವನ್ನು ಸಹ ನುಂಗಿ ನೀರು ಕುಡಿದಿದೆ. ಹೀಗಾಗಿ ಕುರಿಗಳಿಂದಾದ ನಷ್ಟಕ್ಕೆ ಪರಿಹಾರ ಕೋರಿ ಕುರಿಗಾಹಿಗಳು ಸಲ್ಲಿಸಿರುವ ಅರ್ಜಿಗಳು ಕೊಳೆಯುತ್ತಿವೆ’ ಎಂದು ಬಿಜೆಪಿ ಟೀಕಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News