ಕಾಂಗ್ರೆಸ್ ಒಂದೊಂದರಂತೆ ಜನವಿರೋಧಿ ಗ್ಯಾರಂಟಿಗಳನ್ನು ಜಾರಿಗೆ ತರುತ್ತಿದೆ: ಬಿಜೆಪಿ ಆರೋಪ

ರೈತರಿಗೆ ಆಸರೆಯಾಗುವ ಹಾಲಿನ ಪ್ರೋತ್ಸಾಹಧನವನ್ನು ಕಡಿತಗೊಳಿಸುವ ರೈತವಿರೋಧಿ ಆದೇಶವನ್ನು ಕೂಡಲೆ ಹಿಂಪಡೆಯಬೇಕೆಂದು ಎಚ್ಚರಿಸುತ್ತೇವೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.

Written by - Zee Kannada News Desk | Last Updated : Jun 2, 2023, 03:33 PM IST
  • ಕಾಂಗ್ರೆಸ್‌ ಇದೀಗ ಒಂದೊಂದರಂತೆ ಜನವಿರೋಧಿ ಗ್ಯಾರಂಟಿಗಳನ್ನು ಜಾರಿಗೆ ತರುತ್ತಿದೆ
  • ಹೈನುಗಾರರ ಪ್ರೋತ್ಸಾಹಧನ ಕಡಿತಗೊಳಿಸುವ ಮೂಲಕ ಅನ್ನದಾತರಿಗೂ ಕಾಂಗ್ರೆಸ್‌ ಸರ್ಕಾರ ದ್ರೋಹ ಬಗೆದಿದೆ
  • ರಾಜ್ಯದ ಅನ್ನದಾತರ ಪರವಾಗಿ ಧ್ವನಿ ಎತ್ತಲು, ಹೋರಾಡಲು ಬಿಜೆಪಿ ಸದಾ ಬದ್ಧವಾಗಿದೆ
ಕಾಂಗ್ರೆಸ್ ಒಂದೊಂದರಂತೆ ಜನವಿರೋಧಿ ಗ್ಯಾರಂಟಿಗಳನ್ನು ಜಾರಿಗೆ ತರುತ್ತಿದೆ: ಬಿಜೆಪಿ ಆರೋಪ title=
ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ!

ಬೆಂಗಳೂರು: ಅಧಿಕಾರಕ್ಕೆ ಬಂದ ಕೂಡಲೇ ಕೊಟ್ಟ ಐದೂ ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಎಂದಿದ್ದ ಕಾಂಗ್ರೆಸ್‌, ಇದೀಗ ಒಂದೊಂದರಂತೆ ಜನವಿರೋಧಿ ಗ್ಯಾರಂಟಿಗಳನ್ನು ಜಾರಿಗೆ ತರುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

ಈ ಬಗ್ಗೆ ಶುಕ್ರವಾರ ಟ್ವೀಟ್ ಮಾಡಿರುವ ಬಿಜೆಪಿ, ‘ಹೈನುಗಾರರ ಪ್ರೋತ್ಸಾಹಧನ ಕಡಿತಗೊಳಿಸುವ ಮೂಲಕ ಅನ್ನದಾತರಿಗೂ ಕಾಂಗ್ರೆಸ್‌ ಸರ್ಕಾರ ದ್ರೋಹ ಬಗೆದಿದೆ. ರೈತರಿಗೆ ಆಸರೆಯಾಗುವ ಹಾಲಿನ ಪ್ರೋತ್ಸಾಹಧನವನ್ನು ಕಡಿತಗೊಳಿಸುವ ರೈತವಿರೋಧಿ ಆದೇಶವನ್ನು ಕೂಡಲೆ ಹಿಂಪಡೆಯಬೇಕೆಂದು ಎಚ್ಚರಿಸುತ್ತೇವೆ. ರಾಜ್ಯದ ಅನ್ನದಾತರ ಪರವಾಗಿ ಧ್ವನಿ ಎತ್ತಲು, ಹೋರಾಡಲು ಬಿಜೆಪಿ ಸದಾ ಬದ್ಧವಾಗಿದೆ’ ಎಂದು ಹೇಳಿದೆ.

ಇದನ್ನೂ ಓದಿ: ಗ್ಯಾರಂಟಿ ಯೋಜನೆ ಬಗ್ಗೆ ಇಂದೇ ಅಂತಿಮ ನಿರ್ಧಾರ

‘#ATMSarkaraದ ಮೊದಲ ಸಚಿವ ಸಂಪುಟದಲ್ಲೇ ಎಲ್ಲಾ 5 ಗ್ಯಾರಂಟಿಗಳನ್ನು ಜಾರಿಗೆ ತರುತ್ತೇವೆ ಎಂದು ಸ್ವತಃ ಗಡುವು ವಿಧಿಸಿಕೊಳ್ಳುವಾಗ ಪ್ರಿಯಾಂಕ್‌ ಖರ್ಗೆ ಅವರಿಗೆ ಪರಿಜ್ಞಾನ ಇರಲಿಲ್ಲವೇ? ಗ್ಯಾರಂಟಿಗಳ ನಿರೀಕ್ಷೆಯಲ್ಲಿರುವ ಕನ್ನಡಿಗರ ಪರವಾಗಿ ನಾವು ಧ್ವನಿ ಎತ್ತಿದ್ದೇವೆ. ತಾವುಗಳು ಹೇಳಿರುವ ಗ್ಯಾರಂಟಿಗಳು ಜಾರಿಯಾಗದಿದ್ದರೆ ಜನತೆಯ ಪರವಾಗಿ ಮುಂದೆ ಬೀದಿಗಿಳಿಯಲೂ ಬಿಜೆಪಿ ಸಿದ್ಧವಿದೆ’ ಎಂದು ಹೇಳಿದೆ.

‘ಕನ್ನಡಿಗರ ಜೀವನ ಹೈರಾಣಾಗಿಸಲು ಪಣತೊಟ್ಟಿರುವಂತಿದೆ ಕಾಂಗ್ರೆಸ್ ಸರ್ಕಾರ! ಮಾರ್ಕೆಟಿಂಗ್ ಸಂಸ್ಥೆಗಳು ತನ್ನ ಮಾರ್ಕೆಟಿಂಗ್ ಎಕ್ಸೆಕ್ಯುಟಿವ್‌ಗಳಿಗೆ ಟಾರ್ಗೆಟ್ ಕೊಡುವ ಹಾಗೆ ರಾಜ್ಯದ ಪೋಲಿಸರಿಗೆ ಕನಿಷ್ಟ ಇಂತಿಷ್ಟು ಕೇಸ್ ದಾಖಲಿಸಲೇಬೇಕು ಎಂದು ಟಾರ್ಗೆಟ್ ನೀಡಿರುವುದು, ಈ ಸರ್ಕಾರಕ್ಕೆ ಗೊತ್ತು-ಗುರಿಯಿಲ್ಲವೆಂಬುದರ ಸ್ಪಷ್ಟ ನಿದರ್ಶನ! ‘ನಾನು ಇಷ್ಟು ಬಜೆಟ್ ಮಂಡಿಸಿದ್ದೇನೆ, ಅಷ್ಟು ಬಜೆಟ್ ಮಂಡಿಸಿದ್ದೇನೆ’ ಎಂದು ಬಡಾಯಿ ಬಿಡುವ ಸಿದ್ದರಾಮಯ್ಯನವರು ಇದ್ಯಾವ ಆರ್ಥಿಕ ತಂತ್ರಗಾರಿಕೆ ಎಂಬುದನ್ನು ಉತ್ತರಿಸಲಿ’ ಎಂದು ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ: ಮೊದಲ ಹಂತದಲ್ಲಿ 3 ಗ್ಯಾರಂಟಿ ಜಾರಿಗೆ ಚಿಂತನೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News