ಬಿಜೆಪಿ ಈಗ ಯಾರಿಗೂ ಬೇಡದ ಅನಾಥ ಶಿಶುವಾಗಿದೆ!: ಕಾಂಗ್ರೆಸ್ ವ್ಯಂಗ್ಯ

BJP vs BJP: ಜೆಡಿಎಸ್ ಬಿಜೆಪಿಯ ಆಶ್ರಯದಲ್ಲಿದೆಯೋ, ಬಿಜೆಪಿ ಜೆಡಿಎಸ್ ಸೇರಿಗಿನ ಆಶ್ರಯ ಪಡೆದಿದೆಯೋ ಎಂಬ ಅನುಮಾನ ಬಿಜೆಪಿಗರಿಗೇ ಶುರುವಾಗಿದೆ! ವಿರೋಧ ಪಕ್ಷದ ನಾಯಕನಿಲ್ಲದೆ ಸದನದ ಒಳಗೂ ಹೊರಗೂ ಬಿಜೆಪಿ ಅಬ್ಬೇಪಾರಿಯಂತಾಗಿದೆ, ಈ ಬಗ್ಗೆ ಬಿಜೆಪಿ ಶಾಸಕರ ಗೋಳು ಮುಗಿಲು ಮುಟ್ಟಿದೆ.

Written by - Puttaraj K Alur | Last Updated : Nov 2, 2023, 04:36 PM IST
  • ಶಾಸಕರಿಗೆ ಒಬ್ಬ ನಾಯಕನನ್ನು ಆಯ್ಕೆ ಮಾಡದ ಬಿಜೆಪಿ ವಿರುದ್ಧ ಬಿಜೆಪಿಗರೇ ಪ್ರತಿಭಟನೆಗೆ ಇಳಿದಿದ್ದಾರೆ!
  • ಬಿಜೆಪಿ ಶಾಸಕರು ಹೀನಾಯ ಸ್ಥಿತಿಗೆ ತಲುಪಿದ್ದಾರೆ, ಇದು ಬಿಜೆಪಿಯ ರಾಜಕೀಯ ದಿವಾಳಿತನವಲ್ಲದೆ ಇನ್ನೇನು?
  • ರಾಜ್ಯದ ಜನರಿಂದ & ಹೈಕಮಾಂಡ್ ನಾಯಕರಿಂದಲೂ ತಿರಸ್ಕಾರ, ಬಿಜೆಪಿ ಈಗ ಯಾರಿಗೂ ಬೇಡದ ಅನಾಥ ಶಿಶುವಾಗಿದೆ!
ಬಿಜೆಪಿ ಈಗ ಯಾರಿಗೂ ಬೇಡದ ಅನಾಥ ಶಿಶುವಾಗಿದೆ!: ಕಾಂಗ್ರೆಸ್ ವ್ಯಂಗ್ಯ title=
ಬಿಜೆಪಿಯ ರಾಜಕೀಯ ದಿವಾಳಿತನವಲ್ಲದೆ ಇನ್ನೇನು?  

ಬೆಂಗಳೂರು: ಬಿಜೆಪಿ ಶಾಸಕರು ಹೀನಾಯ ಸ್ಥಿತಿಗೆ ತಲುಪಿದ್ದಾರೆ, ಶಾಸಕರಿಗೆ ಒಬ್ಬ ನಾಯಕನನ್ನು ಆಯ್ಕೆ ಮಾಡದ ಬಿಜೆಪಿ ವಿರುದ್ಧ ಬಿಜೆಪಿಗರೇ ಪ್ರತಿಭಟನೆಗೆ ಇಳಿದಿದ್ದಾರೆ.. ಇದು ಬಿಜೆಪಿಯ ರಾಜಕೀಯ ದಿವಾಳಿತನವಲ್ಲದೆ ಇನ್ನೇನು? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಈ ಬಗ್ಗೆ ಗುರುವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಹೈಕಮಾಂಡ್ ನಾಯಕರು ರಾಜ್ಯದ ಯಾವೊಬ್ಬ ನಾಯಕರ ಮುಖವನ್ನೂ ನೋಡುತ್ತಿಲ್ಲ, 5 ತಿಂಗಳಾದರೂ ವಿಪಕ್ಷ ನಾಯಕನ ಆಯ್ಕೆಗೆ ಮುಂದಾಗುತ್ತಿಲ್ಲ. ರಾಜ್ಯದ ಜನರಿಂದಲೂ ತಿರಸ್ಕಾರ, ಹೈಕಮಾಂಡ್ ನಾಯಕರಿಂದಲೂ ತಿರಸ್ಕಾರ, ಬಿಜೆಪಿ ಈಗ ಯಾರಿಗೂ ಬೇಡದ ಅನಾಥ ಶಿಶುವಾಗಿದೆ! ವಿಪಕ್ಷ ನಾಯಕನ ಆಯ್ಕೆಯಾಗದಿದ್ದರೆ ಸದನಕ್ಕೆ ಗೈರಾಗುವ ಮೂಲಕ ಪ್ರತಿಭಟಿಸುತ್ತೇವೆ ಎನ್ನುವ ಶಾಸಕರು ಹತಾಶ ಸ್ಥಿತಿಗೆ ತಲುಪಿದ್ದಾರೆ ಅಲ್ಲವೇ ಬಿಜೆಪಿ?’ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: ರಸ್ತೆ ದಾಟುತ್ತಿದ್ದವರ ಮೇಲೆ ಲಾರಿ ಹರಿದು ಇಬ್ಬರು ಸಾವು..!

‘ಜೆಡಿಎಸ್ ಬಿಜೆಪಿಯ ಆಶ್ರಯದಲ್ಲಿದೆಯೋ, ಬಿಜೆಪಿ ಜೆಡಿಎಸ್ ಸೇರಿಗಿನ ಆಶ್ರಯ ಪಡೆದಿದೆಯೋ ಎಂಬ ಅನುಮಾನ ಬಿಜೆಪಿಗರಿಗೇ ಶುರುವಾಗಿದೆ! ವಿರೋಧ ಪಕ್ಷದ ನಾಯಕನಿಲ್ಲದೆ ಸದನದ ಒಳಗೂ ಹೊರಗೂ ಬಿಜೆಪಿ ಅಬ್ಬೇಪಾರಿಯಂತಾಗಿದೆ, ಈ ಬಗ್ಗೆ ಬಿಜೆಪಿ ಶಾಸಕರ ಗೋಳು ಮುಗಿಲು ಮುಟ್ಟಿದೆ. ಬಿ.ಎಸ್.ಯಡಿಯೂರಪ್ಪರನ್ನೇ ದೆಹಲಿಯಲ್ಲಿ ಭೇಟಿಯಾಗದೆ ಅವಮಾನಿಸಿ ಕಳಿಸಿದೆ ಹೈಕಮಾಂಡ್, ಮೂಲೆಗುಂಪಾದ ಯಡಿಯೂರಪ್ಪರಲ್ಲಿ ಗೋಳು ಹೇಳಿಕೊಂಡರೆ ಉಪಯೋಗವಿದೆಯೇ.. ಒಟ್ಟಿನಲ್ಲಿ ಕರ್ನಾಟಕ ಬಿಜೆಪಿ ಈಗ ಮುಳುಗಿ ತಳ ಸೇರಿದ ಹಡಗು!’ ಎಂದು ಕಾಂಗ್ರೆಸ್ ಕುಟುಕಿದೆ.

‘ನಮ್ಮ ಸರ್ಕಾರದ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಲು ಬಿಜೆಪಿಗೆ ನಾಯಕರಿಲ್ಲದೆ "ಪದಚ್ಯುತ ನಾಯಕ" ಬಿ.ಎಸ್.ಯಡಿಯೂರಪ್ಪ ಅವರನ್ನು ಕರೆಸಿ ಕೂರಿಸಿದೆ. ಇದೇ ಯಡಿಯೂರಪ್ಪನವರನ್ನು ಬಿಜೆಪಿ ಹೈಕಮಾಂಡ್ ಕೆಲವೇ ದಿನಗಳ ಹಿಂದೆ ಕರೆಸಿ ಅವಮಾನಿಸಿತ್ತು, ನಿರ್ಗಮಿತ ನಾಯಕನಿಗೆ ನಯಾಪೈಸೆ ಬೆಲೆ ಕೊಡದ ಬಿಜೆಪಿ ಈಗ ಹಳೆ ಮಾಲೀಕನ ಪಾದವೇ ಗತಿ ಎನ್ನುವಂತೆ ಯಡಿಯೂರಪ್ಪನವರ ಮೊರೆ ಹೋಗಿದೆ’ ಎಂದು ಕಾಂಗ್ರೆಸ್ ಟೀಕಿಸಿದೆ.

ಇದನ್ನೂ ಓದಿ: ರಾಜ್ಯಾದ್ಯಂತ ಬಂದ್‌ ಆಗಲಿವೆ ಪಡಿತರ ಅಂಗಡಿಗಳು..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News