/kannada/photo-gallery/shikanji-buttermilk-is-helpful-in-dissolving-stubborn-obesity-around-the-waist-249358 ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ! ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ! 249358

ನಾನೂ ಸೋಲಿಸ್ತಿನಿ, ನಮಗೂ ಸೋಲಿಸುವ ಶಕ್ತಿ ಇದೆ- ಸಿದ್ದರಾಮಯ್ಯ

     

Last Updated : Apr 5, 2018, 08:45 PM IST
ನಾನೂ ಸೋಲಿಸ್ತಿನಿ, ನಮಗೂ ಸೋಲಿಸುವ ಶಕ್ತಿ ಇದೆ- ಸಿದ್ದರಾಮಯ್ಯ  title=

ಬೆಂಗಳೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ  ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸೋಲಿಸಲು ತಯಾರಾಗಿರುವ ಜೆಡಿಎಸ್ ಮತ್ತು ಬಿಜೆಪಿಗೆ ಟಾಂಗ್ ನೀಡಿರುವ ಸಿದ್ದರಾಮಯ್ಯ ನಾನೂ ಸೋಲಿಸ್ತಿನಿ, ನಮಗೂ ಸೋಲಿಸುವ ಶಕ್ತಿ ಇದೆ ಎಂದು ಸವಾಲೆಸೆದಿದ್ದಾರೆ.

ಈ ಕುರಿತಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 2006 ರ ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಎರಡು ಒಂದಾಗಿದ್ದವು,ಆದರೂ ನಾನೇ ಗೆದ್ದಿದ್ದೆ,ಈಗಲೂ ಬೇಕಾದ್ರೆ ಒಂದಾಗಲಿ ತೊಂದರೆಯೇನಿಲ್ಲ, ಚಾಮುಂಡೇಶ್ವರಿ  ಕ್ಷೇತ್ರದಲ್ಲಿ ಸ್ಪರ್ಧಿಸಿ ಅಲ್ಲಿಂದಲೇ ಗೆಲ್ಲುತ್ತೇನೆ ಎಂದು ತೀರುಗೇಟು ನೀಡಿದ್ದಾರೆ.

ಈಗಾಗಲೇ ಹಾಸನದಲ್ಲಿ ಜೆಡಿಎಸ್  ಪ್ರಾಬಲ್ಯವನ್ನು ಸಡಿಲಗೊಳಿಸಲು ಹೆಚ್ ಡಿ ರೇವಣ್ಣನವರ ಹೊಳೆ ನರಸಿಪುರ್ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಆ ಮೂಲಕ  ಚಾಮುಂಡೇಶ್ವರಿ ಕ್ಷೇತ್ರದ ಮೇಲೆ ಹೆಚ್ಚ್ಚಿನ ಗಮನವನ್ನು ಕಡಿಮೆಗೊಳಿಸುವ ತಂತ್ರವನ್ನು ಸಿದ್ದರಾಮಯ್ಯನವರು ಹೆಣೆಯುತ್ತಿದ್ದಾರೆ ಎನ್ನಲಾಗುತ್ತಿದೆ.