ರಾಜ್ಯದಲ್ಲಿ ಮುಂದಿನ ನಾಲ್ಕು ದಿನ ಮಳೆ, ಗುಡುಗು-ಸಿಡಿಲಿನ ಅಲರ್ಟ್!

 ಹವಾಮಾನ ಕೇಂದ್ರ ಬೆಂಗಳೂರಿನ ತಜ್ಞರಾದ ಸದಾನಂದ ಅಡಿಗ ಮಾತನಾಡಿ, ಕರಾವಳಿಯ ಉಡುಪಿ ಹಾಗೂ ದ.ಕನ್ನಡ ಜಿಲ್ಲೆಗೆ ಮುಂದಿನ ಮೂರು ದಿನ ಭಾರೀ ಮಳೆಯಾಗಲಿದೆ (Heavy rain fall alert) ಎಂದು ಹೇಳಿದ್ದಾರೆ. ಎಪ್ರಿಲ್ 5 ಹಾಗೂ 6 ರಂದೂ ಕೂಡಾ ಹಲವೆಡೆ ಮಳೆ ಸಾಧ್ಯತೆ ಇದೆ, ಗುಡುಗು- ಸಿಡಿಲಿನ ಮುನ್ನೆಚ್ಚರಿಕೆ ನೀಡಲಾಗಿದೆ ಎಂದರು. 

Written by - Sowmyashree Marnad | Last Updated : Apr 2, 2022, 03:15 PM IST
  • ಏಪ್ರಿಲ್ 6 ರವರೆಗೂ ಗುಡುಗು ಸಹಿತ ಮಳೆ
  • ಉಡುಪಿ, ದ.ಕನ್ನಡ ಜಿಲ್ಲೆಯಲ್ಲಿ ಮುಂದಿನ ಮೂರು ದಿನ ಭಾರೀ ಮಳೆ
  • ಹವಾಮಾನ ಕೇಂದ್ರ ಬೆಂಗಳೂರಿನ ತಜ್ಞರಾದ ಸದಾನಂದ ಅಡಿಗ ಮಾಹಿತಿ
ರಾಜ್ಯದಲ್ಲಿ ಮುಂದಿನ ನಾಲ್ಕು ದಿನ ಮಳೆ, ಗುಡುಗು-ಸಿಡಿಲಿನ ಅಲರ್ಟ್!  title=
Rain Alert (file photo)

ಬೆಂಗಳೂರು : ಕರಾವಳಿ, ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಿಗೆ ಎಪ್ರಿಲ್ 6 ರವರೆಗೂ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ (Rain Alert). ಹವಾಮಾನ ಕೇಂದ್ರ ಬೆಂಗಳೂರಿನ ತಜ್ಞರಾದ ಸದಾನಂದ ಅಡಿಗ ಮಾತನಾಡಿ, ಕರಾವಳಿಯ ಉಡುಪಿ ಹಾಗೂ ದ.ಕನ್ನಡ ಜಿಲ್ಲೆಗೆ ಮುಂದಿನ ಮೂರು ದಿನ ಭಾರೀ ಮಳೆಯಾಗಲಿದೆ (Heavy rain fall alert). ಎಪ್ರಿಲ್ 5 ಹಾಗೂ 6 ರಂದೂ ಕೂಡಾ ಹಲವೆಡೆ ಮಳೆ ಸಾಧ್ಯತೆ ಇದೆ, ಗುಡುಗು- ಸಿಡಿಲಿನ ಮುನ್ನೆಚ್ಚರಿಕೆ ನೀಡಲಾಗಿದೆ ಎಂದರು. 

ಬೆಂಗಳೂರಲ್ಲಿ ನಿನ್ನೆ ಮಳೆಯಾಗಿದ್ದು, ಯುಗಾದಿ ದಿನವೂ ಸಂಜೆ ವೇಳೆಗೆ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ (Bengaluru rain) . ಉತ್ತರ ಒಳನಾಡಿನಲ್ಲಿ ಮುಂದಿನ ಮೂರು ದಿನ ಒಣಹವೆ ಇರಲಿದ್ದು,  ಎಪ್ರಿಲ್ 5 ಹಾಗೂ 6 ರಂದು ಬೆಳಗಾವಿ, ಧಾರವಾಡ, ಗದಗ ಹಾಗೂ ಹಾವೇರಿಯಲ್ಲಿ ಮಳೆಯಾಗಲಿದೆ. 

ಇದನ್ನೂ ಓದಿ : ‘ಕರ್ನಾಟಕ ನಮ್ಮದು, ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುವ ದ್ರೋಹಿಗಳದ್ದಲ್ಲ’

ದಕ್ಷಿಣ ಒಳನಾಡಿನ ಹಲವೆಡೆ ಮಳೆ ಸಾಧ್ಯತೆ ಇದ್ದು,  ಬೆ.ನಗರ, ಮೈಸೂರು, ಮಂಡ್ಯ, ರಾಮನಗರ, ಕೋಲಾರ, ಬೆಂ.ಗ್ರಾ, ಪಶ್ಚಿಮ ಘಟ್ಟದ ಜಿಲ್ಲೆಗಳಲ್ಲಿ ಎ.6 ರವರೆಗೂ ಗುಡುಗು ಸಹಿತ ಮಳೆಯಾಗಲಿದೆ (Karnataka rain alert)

ರಾಜ್ಯದಲ್ಲಿ ಗರಿಷ್ಟ ಉಷ್ಣಾಂಶ 41.6 ಡಿಗ್ರಿ, ಬೀದರ್ ರಾಯಚೂರಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. 

ಇದನ್ನೂ ಓದಿ : ಬೇಲೂರು ಚನ್ನಕೇಶವ ದೇಗುಲದ ಮುಂಭಾಗದಲ್ಲಿದ್ದ ಮುಸ್ಲಿಂ ವ್ಯಾಪಾರಿಗೆ ನೋಟಿಸ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News