/kannada/photo-gallery/shikanji-buttermilk-is-helpful-in-dissolving-stubborn-obesity-around-the-waist-249358 ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ! ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ! 249358

ಬಿಜೆಪಿಯವರಿಗೆ ಈ ಮೊದಲು ಸುಳ್ಳು ಹೇಳೋದು ಹವ್ಯಾಸವಾಗಿತ್ತು, ಆದರೆ ಅದು ಈಗ ಅಭ್ಯಾಸವಾಗಿಬಿಟ್ಟಿದೆ-ದಿನೇಶ್ ಗುಂಡುರಾವ್

     

Last Updated : Mar 2, 2018, 03:22 PM IST
ಬಿಜೆಪಿಯವರಿಗೆ ಈ ಮೊದಲು ಸುಳ್ಳು ಹೇಳೋದು ಹವ್ಯಾಸವಾಗಿತ್ತು, ಆದರೆ ಅದು ಈಗ ಅಭ್ಯಾಸವಾಗಿಬಿಟ್ಟಿದೆ-ದಿನೇಶ್ ಗುಂಡುರಾವ್ title=

ಬೆಂಗಳೂರು: ಬಿಜೆಪಿ ರಾಜ್ಯ ಸರ್ಕಾರದ ವೈಫಲ್ಯದ ಕುರಿತಾಗಿ ಬಿಡುಗಡೆ ಮಾಡಿರುವ ಚಾರ್ಚ್ ಶೀಟ್ ಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಯಿಸಿರುವ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ದಿನೇಶ್ ಗುಂಡುರಾವ್ " ಈ ಹಿಂದೆ ಬಿಜೆಪಿಯವರಿಗೆ ಸುಳ್ಳು ಹೇಳುವುದು ಹವ್ಯಾಸದ ರೀತಿಯಲ್ಲಿರುತ್ತಿತ್ತು, ಈಗ ಅದು ಅವರಿಗೆ ಅಭ್ಯಾಸವಾಗಿ ಬಿಟ್ಟಿದೆ" ಎಂದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.

ಬಿಜೆಪಿಯು ಇಂದು ರಾಜ್ಯ ಸರ್ಕಾರದ ವಿರುದ್ದ ಬೆಂಗಳೂರು ರಕ್ಷಿಸಿ ಎನ್ನುವ ಘೋಷಣೆ ಅಡಿಯಲ್ಲಿ ಜಾವಡೆಕರ್ ನೇತೃತ್ವದಲ್ಲಿ ಪಾದಯಾತ್ರೆಯನ್ನು ಕೈಗೊಂಡು ರಾಜ್ಯ ಸರ್ಕಾರದ ಮೇಲೆ ಭ್ರಷ್ಟಾಚಾರದ ವಿಚಾರವಾಗಿ ವಾಗ್ದಾಳಿ ನಡೆಸಿತ್ತು, ಮತ್ತು ಆ ವಿಚಾರಕ್ಕೆ ಸಂಬಂಧಿಸಿದಂತೆ ಚಾರ್ಚ್ ಸೀಟ್ ಸಹಿತ ಬಿಡುಗಡೆ ಮಾಡಿ ಪಾದಯಾತ್ರೆ ಕೈಗೊಂಡಿತ್ತು. ಈಗ ಎಲ್ಲ ಆರೋಪಗಳನ್ನು ತಳ್ಳಿಹಾಕಿದ ದಿನೇಶ್ ಗುಂಡುರಾವ್ ಬಿಜೆಪಿಯ ವಿರುದ್ದ ಕಿಡಿ ಕಾರಿದರು.