ಕಾಂಗ್ರೆಸ್ ಸರ್ಕಾರದಲ್ಲಿ ಭಿನ್ನಮತ: ಯಶಸ್ವಿ ಪ್ರದರ್ಶನ ಕಾಣುತ್ತಿರುವ ಸಿದ್ದರಾಮಯ್ಯರ ಸರ್ಕಸ್ ಎಂದ ಬಿಜೆಪಿ

Dissent in Congress government: ಮೂರು DCM ಮಾಡಿ, ನೋ ನೋ, ಆರು DCM ಮಾಡಿ’… ಇನ್ನಷ್ಟು, ಮತ್ತಷ್ಟು ಸ್ವಪಕ್ಷೀಯರ ಸೂಪರ್ ಹಿಟ್ ಡೈಲಾಗ್‌ಗಳಿಗೆ Keep Following ಸಿದ್ದರಾಮಯ್ಯರ ಸರ್ಕಸ್… ಎಂದು ಬಿಜೆಪಿ ಕುಟುಕಿದೆ.

Written by - Puttaraj K Alur | Last Updated : Oct 11, 2023, 01:03 PM IST
  • ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿನ ಭಿನ್ನಮತದ ವಿರುದ್ಧ ಬಿಜೆಪಿ ವ್ಯಂಗ್ಯ
  • ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯರ ಸರ್ಕಸ್ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ
  • ಬರ ನಿರ್ವಹಣೆ ವಿಚಾರದಲ್ಲಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ಕಾಂಗ್ರೆಸ್ ಸರ್ಕಾರದಿಂದ ಎಡವಟ್ಟು
ಕಾಂಗ್ರೆಸ್ ಸರ್ಕಾರದಲ್ಲಿ ಭಿನ್ನಮತ: ಯಶಸ್ವಿ ಪ್ರದರ್ಶನ ಕಾಣುತ್ತಿರುವ ಸಿದ್ದರಾಮಯ್ಯರ ಸರ್ಕಸ್ ಎಂದ ಬಿಜೆಪಿ title=
ಕಾಂಗ್ರೆಸ್ ಭಿನ್ನಮತದ ವಿರುದ್ಧ ಬಿಜೆಪಿ ವ್ಯಂಗ್ಯ!

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಉಂಟಾಗಿರುವ ಭಿನ್ನಮತದ ವಿರುದ್ಧ ಬಿಜೆಪಿ ವ್ಯಂಗ್ಯವಾಡಿದೆ. ಈ ಬಗ್ಗೆ ಬುಧವಾರ ಟ್ವೀಟ್ ಮಾಡಿರುವ ಬಿಜೆಪಿ, ಸಿದ್ದರಾಮಯ್ಯರ ಸರ್ಕಸ್ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ ಎಂದು ಟೀಕಿಸಿದೆ.

‘ದಿನಕ್ಕೊಬ್ಬರಿಂದ ಛೀ.. ಥೂ…, ದಿನಕ್ಕೊಬ್ಬರ ಅಸಮಾಧಾನದೊಂದಿಗೆ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಸಿದ್ದರಾಮಯ್ಯರವರ ಸರ್ಕಾರ, ಅಲ್ಲ  ಸಿಎಂ ಸಿದ್ದರಾಮಯ್ಯನವರ ಸರ್ಕಸ್…’ ಎಂದು ಬಿಜೆಪಿ ಕುಟುಕಿದೆ.

ಇದನ್ನೂ ಓದಿ: ಮಲೆ ಮಾದಪ್ಪನ ಹುಂಡಿ ಎಣಿಕೆ: ಕೇವಲ 39 ದಿನಗಳಲ್ಲಿ ₹2.28 ಕೋಟಿ ಕಾಣಿಕೆ ಸಂಗ್ರಹ

‘ನನ್ನೂ ಮಂತ್ರಿ ಮಾಡಿ’…, ‘ಲಿಂಗಾಯತ್ ವಿರೋಧಿ ಸಿಎಂ’…, ‘ಹಿಂದುಳಿದ ವರ್ಗ ತುಳಿಯುತ್ತಿರುವ ಸಿಎಂ’…, ‘ನಮ್ಮ ಸರ್ಕಾರ ಇದ್ರೂ ನಾವೇ ದುಡ್ಡು ಕೊಡಬೇಕು ಸಾರ್’ ಮತ್ತು ‘ಮೂರು DCM ಮಾಡಿ, ನೋ ನೋ, ಆರು DCM ಮಾಡಿ’… ಇನ್ನಷ್ಟು, ಮತ್ತಷ್ಟು ಸ್ವಪಕ್ಷೀಯರ ಸೂಪರ್ ಹಿಟ್ ಡೈಲಾಗ್‌ಗಳಿಗೆ Keep Following ಸಿದ್ದರಾಮಯ್ಯರ ಸರ್ಕಸ್…’ ಎಂದು ಬಿಜೆಪಿ ಕುಟುಕಿದೆ.

ಕಾಂಗ್ರೆಸ್ ಸರ್ಕಾರದ ಎಡವಟ್ಟುಗಳು!

ಬರ ನಿರ್ವಹಣೆಯ ವಿಚಾರದಲ್ಲಿ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ಕಾಂಗ್ರೆಸ್ ಸರ್ಕಾರದ ಎಡವಟ್ಟುಗಳು ಹಲವಾರು. ಮುಂಗಾರು ಕೈಕೊಟ್ಟಾಗ ಎಚ್ಚೆತ್ತುಕೊಳ್ಳದೆ ಮೈಮರೆತು ಕೂತಿದ್ದು, ಬರಗಾಲ ಘೋಷಣೆ ಮಾಡದೆ ಕಾವೇರಿ ವಿಚಾರ ಮುಂದಿಟ್ಟು ಕಾಲಹರಣ ಮಾಡಿದ್ದು, ಕಾವೇರಿ ವಿಚಾರದಲ್ಲಿ ಸ್ಟಾಲಿನ್‌ ಸರ್ಕಾರದ ವಿರುದ್ಧ ನಿಲುವಳಿ ಮಂಡಿಸದೆ ಪುಕ್ಕಲುತನ ತೋರಿದ್ದು, ಬರ ಪೀಡಿತ ಪಟ್ಟಿಯಿಂದ ಹಲವು ತಾಲೂಕುಗಳನ್ನು ಕೈ ಬಿಟ್ಟಿದ್ದು, ಕೇಂದ್ರ ತಂಡ ಪರಿಶೀಲನೆ ಮಾಡಿ ಹೋದ ಮೇಲೆ ಮತ್ತೆ 21 ತಾಲೂಕು ಸೇರಿಸಲು ಮುಂದಾಗಿದ್ದು, ಸಿದ್ದರಾಮಯ್ಯರು ಹಸಿರು ಬರವೆಂದು ಬರ ಅಧ್ಯಯನ ತಂಡದ ದಾರಿ ತಪ್ಪಿಸಿದ್ದು ಮತ್ತು ಕೇಂದ್ರದ ಬರ ಅಧ್ಯಯನ ತಂಡಕ್ಕೆ ಸರಿಯಾದ ಮಾಹಿತಿ ನೀಡದೆ ಕಳುಹಿಸಿದ್ದು’ ಎಂದು ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ: ದಸರಾ ಹಬ್ಬದ ಸಂಭ್ರಮ: ಸಿಲಿಕಾನ್ ಸಿಟಿಗೆ ಕಾಲಿಟ್ಟಿವೆ ವೆರೈಟಿ ವೆರೈಟಿ ಗೊಂಬೆಗಳು!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News