ಎತ್ತಿನ‌ಹೊಳೆ ಯೋಜನೆಗೆ ಸಹಕಾರ ನೀಡಿ: ಡಾ.ಜಿ. ಪರಮೇಶ್ವರ್

ಬಯಲುಸೀಮೆ ಪ್ರದೇಶಕ್ಕೆ ಕುಡಿಯುವ ನೀರು ಪೂರೈಸುವ ಎತ್ತಿನಹೊಳೆ ಯೋಜನೆ.

Last Updated : Sep 6, 2018, 08:27 AM IST
ಎತ್ತಿನ‌ಹೊಳೆ ಯೋಜನೆಗೆ ಸಹಕಾರ ನೀಡಿ: ಡಾ.ಜಿ. ಪರಮೇಶ್ವರ್ title=

ತುಮಕೂರು: ಬಯಲುಸೀಮೆ ಪ್ರದೇಶಕ್ಕೆ ಕುಡಿಯುವ ನೀರು ಪೂರೈಸುವ ಎತ್ತಿನಹೊಳೆ ಯೋಜನೆ ಅಡಿಯಲ್ಲಿ‌ ಮುಳುಗಡೆಯಾಗುವ ಈ ಭಾಗದ ರೈತರ ಜಾಗಕ್ಕೂ ಬೆಂಗಳೂರಿನ ಜಾಗದ ಬೆಲೆ ಕೊಡಿಸಿಕೊಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಭರವಸೆ ನೀಡಿದರು.

ಕೋಳಾಲ ಪೊಲೀಸ್ ಠಾಣೆ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಕೋಳಾಲದಲ್ಲಿ ಪೊಲೀಸ್ ಠಾಣೆ ಬೇಕೆಂದು ಇಲ್ಲಿನ ಜನ ಹಿಂದೆಯೇ ಮನವಿ ಮಾಡಿದ್ದರು. ಅಂತೆಯೇ ಕಟ್ಟಡ ನಿರ್ಮಿಸಿ ಜನರ ಸೇವೆ ಮುಕ್ತವಾಗಿದೆ ಎಂದರು. 

ಎತ್ತಿನ ಹೊಳೆ ಯೋಜನೆ ಈಗಾಗಲೇ ಪ್ರಾರಂಭವಾಗಿದ್ದು, ಕೆಲವೇ ದಿನಗಳಲ್ಲಿ ಸಕಲೇಶಪುರದಿಂದ ಅರಸೀಕೆರೆಗೆ ನೀರು ಪೂರೈಕೆಯಾಗಲಿದೆ‌ ನಂತರ ಈ ಭಾಗಕ್ಕೆ ಬರಲಿದೆ. ಆ ಸಂದರ್ಭದಲ್ಲಿ ಎರಡೂವರೆ ಸಾವಿರ ಎಕರೆ ಪ್ರದೇಶ ಮುಳುಗಡೆಯಾಗಲಿದೆ. ರೈತರ ಜಮೀನಿಗೆ ಸೂಕ್ತ ದರ ನೀಡಲಿದೆ ಎಂದರು.

Trending News