ಚಿನ್ನದ ಹುಡುಗಿ ಹಿಮಾದಾಸ್'ಗೆ 10 ಲಕ್ಷ ರೂ. ನಗದು ಬಹುಮಾನ: ಜಿ.ಪರಮೇಶ್ವರ್

ಭಾರತಕ್ಕೆ ಚಿನ್ನ ಗೆದ್ದುತಂದ ಹಿಮಾ ದಾಸ್ ಅವರಿಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು 10 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ.

Last Updated : Jul 14, 2018, 07:04 PM IST
ಚಿನ್ನದ ಹುಡುಗಿ ಹಿಮಾದಾಸ್'ಗೆ 10 ಲಕ್ಷ ರೂ. ನಗದು ಬಹುಮಾನ: ಜಿ.ಪರಮೇಶ್ವರ್ title=

ಬೆಂಗಳೂರು: ಫಿನ್‌ಲ್ಯಾಂಡ್‌ ಟ್ಯಾಂಪಿಯರ್‌'ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ನಲ್ಲಿ 20 ವರ್ಷದೊಳಗಿನ ಮಹಿಳೆಯರ ವಿಭಾಗದಲ್ಲಿ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನ ಗೆದ್ದುತಂದ ಹಿಮಾ ದಾಸ್ ಅವರಿಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು 10 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ.

ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ನಲ್ಲಿ ನೂತನ ದಾಖಲೆ ಬರೆದ ಹಿಮಾದಾಸ್

ಈ ಕುರಿತು ಟ್ವೀಟ್ ಮಾಡಿರುವ ಅವರು, ಹಿಮಾದಾಸ್ ಅವರ ಛಲ ಮತ್ತು ಪರಿಶ್ರಮ ಭಾರತದ ಎಲ್ಲಾ ಕ್ರೀಡಾಪಟುಗಳಿಗೂ ಸ್ಫೂರ್ತಿಯಾಗಿದೆ. ಹಳ್ಳಿಗಾಡಿನ ಹುಡುಗಿಯ ಸಾಧನೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಶ್ರೀ ಸಿದ್ದಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಪರವಾಗಿ 10 ಲಕ್ಷ ರೂ. ನಗದು ಬಹುಮಾನ ನೀಡುತ್ತಿರುವುದು ಸಂತಸ ತಂದಿದೆ ಎಂದಿದ್ದಾರೆ.

ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಒಂದು ಕಾಲದಲ್ಲಿ ಕ್ರೀಡಾಪಟುವೂ ಹೌದು, ಸಾಕಷ್ಟು ರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದವರು. ಪ್ರಸ್ತುತ ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಷನ್‌ ಅಧ್ಯಕ್ಷರು ಹಾಗೂ ಆಲ್‌ ಇಂಡಿಯಾ ಅಥ್ಲೆಟಿಕ್ ಫೆಡರೇಷನ್‌'ನ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

Trending News