ಒಪ್ಪಂದ ಪಾಲಿಸದ ಬಿಲ್ಡರ್ ಗೆ ಶೇ 8 ರಂತೆ ಬಡ್ಡಿ ಸಮೇತ 16,60,000/- ರೂ ಕೊಡಲು ಕೋರ್ಟ್ ಆದೇಶ

ಕಟ್ಟಡದ ಕೆಲಸ ಮುಗಿದ ಮೇಲೆ ಉಭಯೇತರರಿಗೆ ಬರಬೇಕಾದ ಭಾಗಗಳನ್ನು ಇಬ್ಬರೂ ಹಂಚಿಕೊಂಡರು. ಆದರೆ ರೂ.40 ಲಕ್ಷ ಮೇಲೆ ಶೇ8% ರಂತೆ ಬಡ್ಡಿ ಕೊಟ್ಟಿಲ್ಲ. ಹಾಗೂ ಕಟ್ಟಡದ ಕಾಮಗಾರಿ ಅಪೂರ್ಣವಾಗಿದೆ ಅಂತಾ ಹೇಳಿ ಎದುರುದಾರ/ಬಿಲ್ಡರ್ ಅಂತಹ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುದಾರ ದಿ:02/12/2021 ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.

Written by - Manjunath N | Last Updated : Aug 31, 2024, 05:55 PM IST
  • ಕಟ್ಟಡದ ಕೆಲಸ ಮುಗಿದ ಮೇಲೆ ಉಭಯೇತರರಿಗೆ ಬರಬೇಕಾದ ಭಾಗಗಳನ್ನು ಇಬ್ಬರೂ ಹಂಚಿಕೊಂಡರು.
  • ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುದಾರ ದಿ:02/12/2021 ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.
ಒಪ್ಪಂದ ಪಾಲಿಸದ ಬಿಲ್ಡರ್ ಗೆ ಶೇ 8 ರಂತೆ ಬಡ್ಡಿ ಸಮೇತ 16,60,000/- ರೂ ಕೊಡಲು ಕೋರ್ಟ್ ಆದೇಶ title=

ಧಾರವಾಡ: ಹುಬ್ಬಳ್ಳಿಯ ಬೂಸಪೇಟೆಯ ನಿವಾಸಿ ಬಸವರಾಜ ಪಟ್ಟಣಶೆಟ್ಟಿ ಅನ್ನುವವರು ಅಲ್ಲಿಯ ತಮ್ಮ 561 ಚ.ಅ. ಸ್ಥಳದಲ್ಲಿ ಕಟ್ಟಡ ನಿರ್ಮಿಸುವ ಬಗ್ಗೆ ಎದುರುದಾರ/ಬಿಲ್ಡರ್ ಯೋಗೇಶ ಹಬೀಬ್ ರವರೊಂದಿಗೆ ದಿ:27/04/2013 ರಂದು ಒಪ್ಪಂದ ಪತ್ರ ಮಾಡಿಕೊಂಡಿದ್ದರು. ಅದರಂತೆ ಬಿಲ್ಡ್‍ರವರು ಭದ್ರತಾ ಠೇವಣಿಯಾಗಿ ರೂ.50 ಲಕ್ಷ ದೂರುದಾರ/ಜಾಗೆಯ ಮಾಲೀಕನಿಗೆ ಕೊಡಲು ಒಪ್ಪಂದವಾಗಿತ್ತು.ಅದರಲ್ಲಿ ರೂ.10 ಲಕ್ಷ ಜಾಗೆಯ ಮಾಲೀಕ/ದೂರುದಾರನಿಗೆ ಅಂತಾ ಮತ್ತು ಉಳಿದ ರೂ.40 ಲಕ್ಷ ಹಣವನ್ನು ಬಿಲ್ಡಿಂಗ್ ಕಟ್ಟುವುದು ಮುಗಿದ ಮೇಲೆ ಎದುರುದಾರ/ಬಿಲ್ಡರ್‍ಗೆ ವಾಪಸ್ಸು ಕೊಡುವುದು ಅಂತಾ ಷರತ್ತು ಇತ್ತು. ಆ ಒಪ್ಪಂದದಂತೆ ಎದುರುದಾರ/ಬಿಲ್ಡರ್ ರೂ.10 ಲಕ್ಷ ದೂರುದಾರರಿಗೆ ಕೊಟ್ಟಿದ್ದರು. ಒಪ್ಪಂದದಂತೆ ಕಟ್ಟಡದ ಕೆಲಸವನ್ನು ಪೂರ್ತಿಗೊಳಿಸಿದರು.ಈ ಮಧ್ಯೆ ರೂ.40 ಲಕ್ಷ ಕೊಡುವ ಬಗ್ಗೆ ಉಭಯೇತರರ ಮಧ್ಯೆ ದಿ:18/08/2018 ರಂದು ಮತ್ತೊಂದು ಒಪ್ಪಂದವಾಯಿತು. ಅದರ ಪ್ರಕಾರ ಉಳಿದ ರೂ.40 ಲಕ್ಷ ಹಣವನ್ನು ಎದುರುದಾರ/ಬಿಲ್ಡರ್ ಕೊಡಬೇಕಾಗಿಲ್ಲ ಆದರೆ ಒಪ್ಪಂದವಾದ ದಿನಾಂಕದಿಂದ ಆ ರೂ.40 ಲಕ್ಷ ಹಣದ ಮೇಲೆ ಶೇ8% ರಂತೆ ಬಡ್ಡಿ ಕೊಡಬೇಕು ಅಂತಾ ಕರಾರು ಆಗಿತ್ತು.

ಕಟ್ಟಡದ ಕೆಲಸ ಮುಗಿದ ಮೇಲೆ ಉಭಯೇತರರಿಗೆ ಬರಬೇಕಾದ ಭಾಗಗಳನ್ನು ಇಬ್ಬರೂ ಹಂಚಿಕೊಂಡರು. ಆದರೆ ರೂ.40 ಲಕ್ಷ ಮೇಲೆ ಶೇ8% ರಂತೆ ಬಡ್ಡಿ ಕೊಟ್ಟಿಲ್ಲ. ಹಾಗೂ ಕಟ್ಟಡದ ಕಾಮಗಾರಿ ಅಪೂರ್ಣವಾಗಿದೆ ಅಂತಾ ಹೇಳಿ ಎದುರುದಾರ/ಬಿಲ್ಡರ್ ಅಂತಹ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುದಾರ ದಿ:02/12/2021 ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.

ಇದನ್ನೂ ಓದಿ: 8 ಮದುವೆ, ಸಾಲ ಕೊಡಿಸ್ತೀನಿ ಅಂತಾ 38 ಕೋಟಿ ವಂಚಿಸಿದ ನಕಲಿ JDS ಕಾರ್ಯಾಧ್ಯಕ್ಷೆ!

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಸದಸ್ಯರು, ಒಪ್ಪಂದದಂತೆ ಎದುರುದಾರ/ಬಿಲ್ಡರ್ ಕಟ್ಟಡದ ಕೆಲಸ ಪೂರ್ತಿಗೊಳಿಸಿದ್ದರೂ ಸೋಲಾರ್ ವ್ಯವಸ್ಥೆ ಮಾಡಿಲ್ಲ, ಪ್ರತಿ ಮಳಿಗೆ/ಪ್ಲ್ಯಾಟಗೆ ವಿದ್ಯುತ್ ಮೀಟರ್ ಕೂಡಿಸಿಲ್ಲ, ಒಳಚರಂಡಿ ವ್ಯವಸ್ಥೆ ಮಾಡಿಲ್ಲದಿರುವುದು ಅಪೂರ್ಣ ಕೆಲಸವಾಗುತ್ತದೆ. ಉಭಯೇತರರ ಮಧ್ಯೆ ಆಗಿರುವ ಒಪ್ಪಂದದಂತೆ ರೂ.40 ಲಕ್ಷ ಠೇವಣಿ ಹಣದ ಮೇಲೆ ಒಪ್ಪಂದದ ದಿನಾಂಕದಿಂದ ಶೇ8% ರಂತೆ ಬಡ್ಡಿ ಹಾಕಿ ಕೊಡಲು ಎದುರುದಾರ/ಬಿಲ್ಡರ್ ಒಪ್ಪಿಕೊಂಡಿದ್ದು ಅದರಂತೆ ಅವನು ನಡೆದುಕೊಂಡಿಲ್ಲ. ಅಂತಹ ಎದುರುದಾರ/ಬಿಲ್ಡರ್‍ನ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಬಾಕಿ ಉಳಿದಿರುವ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಜೊತೆಗೆ ಒಪ್ಪಂದದ ದಿನಾಂಕದಿಂದ ಶೇ8%ರಂತೆ ಬಡ್ಡಿ ಲೆಕ್ಕ ಹಾಕಿದಾಗ ರೂ.16 ಲಕ್ಷ ಆಗುತ್ತದೆ ಅದನ್ನು ದೂರುದಾರರಿಗೆ ಕೊಡಬೇಕು ಅಂತಾ ಆಯೋಗ ಎದುರುದಾರ/ಬಿಲ್ಡರ್ ಯೋಗೇಶ ಹಬೀಬ್ ರವರಿಗೆ ಆದೇಶಿಸಿದೆ.

ಇದನ್ನೂ ಓದಿ: ಮಳೆಯ ನಡುವೆ ಶ್ರೀಶಂಕರಾಚಾರ್ಯ ಬೆಟ್ಟದ ಮೆಟ್ಟಿಲು ಹತ್ತಿ ಶಿವನ ದರ್ಶನ ಪಡೆದ ಮಾಜಿ ಪ್ರಧಾನಿಗಳು

ದೂರುದಾರರಿಗೆ ಆಗಿರುವ ಅನಾನುಕೂಲ ಹಾಗೂ ತೊಂದರೆಗಾಗಿ ರೂ.50,000/- ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ ರೂ.10,000/- ನೀಡುವಂತೆ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ. ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ರೂ.16 ಲಕ್ಷ ಎದುರುದಾರ/ಬಿಲ್ಡರ್ ಕೊಡಲು ವಿಫಲರಾದಲ್ಲಿ ದೂರುದಾರ ಆ ಹಣದ ಮೇಲೆ ಶೇ8% ರಂತೆ ಬಡ್ಡಿ ಆಕರಣೆ ಮಾಡಿ ವಸೂಲಿ ಮಾಡಲು ಅರ್ಹರಿದ್ದಾರೆಂದು ತೀರ್ಪು ನೀಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

 

Trending News