ಉಗ್ರರಿಗೆ ಕರ್ನಾಟಕವನ್ನು ಸ್ವರ್ಗವನ್ನಾಗಿಸುತ್ತಿರುವ ಕಾಂಗ್ರೆಸ್: ಬಿಜೆಪಿ ಗಂಭೀರ ಆರೋಪ

BJP Slams Congress Government: ನಿಷೇಧಿತ ಉಗ್ರ ಸಂಘಟನೆಯ ಪಿಎಫ್‍ಐನ ಕಬಂಧ ಬಾಹುಗಳಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದ್ದು, ಉಗ್ರರನ್ನು ಹೆಡೆಮುರಿ ಕಟ್ಟದೆ, ಅವರಿಗೆ ಅಮಾಯಕರು, ಬ್ರದರ್ಸ್ ಎಂಬ ಪಟ್ಟ ಕಟ್ಟುತ್ತಿದೆ’ ಎಂದು ಬಿಜೆಪಿ ಕಿಡಿಕಾರಿದೆ.

Written by - Puttaraj K Alur | Last Updated : Jan 14, 2024, 12:45 PM IST
  • ಶಾಂತಿ, ನೆಮ್ಮದಿ, ಸಮೃದ್ಧಿ & ಅಭಿವೃದ್ಧಿಗೆ ಹೆಸರಾಗಿದ್ದ ಕರ್ನಾಟಕವನ್ನು ಉಗ್ರರ ಸ್ಲೀಪರ್ ಸೆಲ್ ಆಗಿ ಮಾಡುತ್ತಿದೆ
  • ನಿಷೇಧಿತ ಉಗ್ರ ಸಂಘಟನೆಯ ಪಿಎಫ್‍ಐನ ಕಬಂಧ ಬಾಹುಗಳಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ
  • ಉಗ್ರರನ್ನು ಹೆಡೆಮುರಿ ಕಟ್ಟದೆ, ಅವರಿಗೆ ಅಮಾಯಕರು, ಬ್ರದರ್ಸ್ ಎಂಬ ಪಟ್ಟ ಕಟ್ಟುತ್ತಿದೆ
ಉಗ್ರರಿಗೆ ಕರ್ನಾಟಕವನ್ನು ಸ್ವರ್ಗವನ್ನಾಗಿಸುತ್ತಿರುವ ಕಾಂಗ್ರೆಸ್: ಬಿಜೆಪಿ ಗಂಭೀರ ಆರೋಪ  title=
ಕಾಂಗ್ರೆಸ್ ವಿರುದ್ಧ ಬಿಜೆಪಿ ಗಂಭೀರ ಆರೋಪ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಉಗ್ರರಿಗೆ ಕರ್ನಾಟಕವನ್ನು ಸ್ವರ್ಗವನ್ನಾಗಿಸುತ್ತಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಈ ಬಗ್ಗೆ ಭಾನುವಾರ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

‘ಶಾಂತಿ, ನೆಮ್ಮದಿ, ಸಮೃದ್ಧಿ ಹಾಗೂ ಅಭಿವೃದ್ಧಿಗೆ ಹೆಸರಾಗಿದ್ದ ಕರ್ನಾಟಕವನ್ನು ಉಗ್ರರ ಸ್ಲೀಪರ್ ಸೆಲ್ ಆಗಿ ಮಾಡುತ್ತಿದೆ ರಾಜ್ಯದ ಕಾಂಗ್ರೆಸ್ ಸರ್ಕಾರ. ನಿಷೇಧಿತ ಉಗ್ರ ಸಂಘಟನೆಯ ಪಿಎಫ್‍ಐನ ಕಬಂಧ ಬಾಹುಗಳಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದ್ದು, ಉಗ್ರರನ್ನು ಹೆಡೆಮುರಿ ಕಟ್ಟದೆ, ಅವರಿಗೆ ಅಮಾಯಕರು, ಬ್ರದರ್ಸ್ ಎಂಬ ಪಟ್ಟ ಕಟ್ಟುತ್ತಿದೆ’ ಎಂದು ಬಿಜೆಪಿ ಕಿಡಿಕಾರಿದೆ.

ಇದನ್ನೂ ಓದಿ: ಲೋಕಸಭೆಗೆ ಮತಬೇಟೆ: ಇಂದಿನಿಂದ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಪ್ರಾರಂಭಿಸಲಿರುವ ರಾಹುಲ್ ಗಾಂಧಿ!

‘ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾವೀನ್ಯತೆಯ ಸೂಚ್ಯಂಕದಲ್ಲಿ ಕರ್ನಾಟಕ ನಂಬರ್ 1 ಸ್ಥಾನ ಗಳಿಸಿತ್ತು. ಆದರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಉಗ್ರರ ಅಡಗು ಹಾಗೂ ಚಟುವಟಿಕೆಯ ನಂಬರ್ 1 ತಾಣವಾಗಿ ಬದಲಾಗುತ್ತಿದೆ. ಇದು ಕಾಂಗ್ರೆಸ್ ಏಳು ಕೋಟಿ ಕನ್ನಡಿಗರಿಗೆ ಮಾಡುತ್ತಿರುವ ಮಹಾದ್ರೋಹ’ವೆಂದು ಬಿಜೆಪಿ ಟೀಕಿಸಿದೆ.

ಕನ್ನಡಿಗರ ಕಿವಿ ಮೇಲೆ ಗ್ಯಾರಂಟಿಯ ಹೂ!

ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ಕೊಟ್ಟಿರುವ ಗ್ಯಾರಂಟಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಕಾಂಗ್ರೆಸ್ ಸರ್ಕಾರವು ಮಹಿಳೆಯರ ಅಸುರಕ್ಷತೆಯ ಗ್ಯಾರಂಟಿ, ಮಾನಭಂಗ ಮಾಡಿದವರ ರಕ್ಷಣೆ ಗ್ಯಾರಂಟಿ, ಇಂಧನ ಇಲಾಖೆಯ ನೌಕರರ ಕಡಿತ ಗ್ಯಾರಂಟಿ, ಹಣವಿಲ್ಲದೆ ಎಮೆರ್ಜೆನ್ಸಿ ಬಜೆಟ್‌ ಗ್ಯಾರಂಟಿ ಮತ್ತು ರಾಮ ಮಂದಿರ ಬಹಿಷ್ಕಾರದ ಗ್ಯಾರಂಟಿ ನೀಡಿದೆ. ಕನ್ನಡಿಗರ ಕಿವಿ ಮೇಲೆ ಗ್ಯಾರಂಟಿಯ ಹೂವಿಟ್ಟಿರುವ "ಮಜವಾದಿ ಸರ್ಕಾರ" ಅರಾಜಕತೆಯ ಗ್ಯಾರಂಟಿ ನೀಡಿ ಸರ್ವನಾಶ ಮಾಡಲು ಹೊರಟಿದೆ!’ ಎಂದು ಬಿಜೆಪಿ ಕುಟುಕಿದೆ.

ಇದನ್ನೂ ಓದಿ: Crime News: ಪ್ರಿಯಕರನೊಂದಿಗೆ‌ ಬೆಡ್‌ ರೂಮ್‌ನಲ್ಲಿದ್ದಾಗ ಬಂದ ಪತಿಯ ಕೊಂದ ಪತ್ನಿ.. ಹೃದಯಾಘಾತ ಎಂದು ಹೈಡ್ರಾಮಾ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News