ಕೈ-ಕಮಲ ನಾಯಕರ ನಡುವೆ ರಾಮಮಂದಿರ ರಾಜಕೀಯ.. ಸಿದ್ದರಾಮಯ್ಯಗೆ ಆಹ್ವಾನ ಇಲ್ಲ ಯಾಕೆ..?

CM Siddaramaiah: ಅಯೋಧ್ಯೆ ರಾಮಮಂದಿರ ವಿಚಾರ ಬಿಜೆಪಿ - ಕಾಂಗ್ರೆಸ್ ಗೆ ರಾಜಕೀಯದ ಸರಕಾಗಿಬಿಟ್ಟಿದೆ.. ಹಾದಿ ಬೀದಿಲಿ ರಾಮನ ಹೆಸರನ್ನ ಎಳೆದು ತಂದು ಜಟಾಪಟಿಗೆ ಇಳಿದಿದ್ದಾರೆ.. ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯನವ್ರಿಗೆ ಆಹ್ವಾನ ಬಂದಿಲ್ಲ.. ಇದು ರಾಜ್ಯ ಕಾಂಗ್ರೆಸ್ ನಾಯಕರನ್ನ ಕೆರಳಿಸಿದ್ದು, ವಾಗ್ಯುದ್ಧಕ್ಕಿಳಿದಿದ್ದಾರೆ..  

Written by - Savita M B | Last Updated : Jan 2, 2024, 07:21 PM IST
  • ಜನವರಿ 22 ರಂದು ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಭರ್ಜರಿ ಸಿದ್ದತೆ ನಡೆಯುತ್ತಿದೆ.
  • ರಾಜ್ಯ ಬಿಜೆಪಿ ನಾಯಕರಂತೂ ರಾಮ ನಾಮ ಜಪ ಜೋರಾಗಿ ಮಾಡ್ತಿದ್ದಾರೆ
  • ದೇಶದ ಪ್ರಮುಖ ಗಣ್ಯರಿಗೆ ಆಹ್ವಾನ ನೀಡಲಾಗಿದ್ದು, ರಾಜ್ಯದ ಸಿಎಂಗೆ ಆಹ್ವಾನ ಬಂದಿಲ್ಲ
ಕೈ-ಕಮಲ ನಾಯಕರ ನಡುವೆ ರಾಮಮಂದಿರ ರಾಜಕೀಯ.. ಸಿದ್ದರಾಮಯ್ಯಗೆ ಆಹ್ವಾನ ಇಲ್ಲ ಯಾಕೆ..? title=

Ayodhya Ram Mandir: ಜನವರಿ 22 ರಂದು ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಭರ್ಜರಿ ಸಿದ್ದತೆ ನಡೆಯುತ್ತಿದೆ.. ರಾಜ್ಯ ಬಿಜೆಪಿ ನಾಯಕರಂತೂ ರಾಮ ನಾಮ ಜಪ ಜೋರಾಗಿ ಮಾಡ್ತಿದ್ದಾರೆ.. ದೇಶದ ಪ್ರಮುಖ ಗಣ್ಯರಿಗೆ ಆಹ್ವಾನ ನೀಡಲಾಗಿದ್ದು, ರಾಜ್ಯದ ಸಿಎಂಗೆ ಆಹ್ವಾನ ಬಂದಿಲ್ಲ.. ಇದು ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.. 

ರಾಜ್ಯದ ಸಿಎಂಗೆ ಆಹ್ವಾನ ನೀಡಿಲ್ಲ ಅಂದ್ರೆ ಅದು ದ್ವೇಷದ ರಾಜಕಾರಣ ಎಂದು ಕಾಂಗ್ರೆಸ್ ಸಚಿವರು ಹಿಗ್ಗಾಮುಗ್ಗ ವಾಗ್ದಾಳಿ ನಡೆಸ್ತಿದ್ದಾರೆ.. ರಾಮ ಯಾರೊಬ್ಬರ ಜಹಗೀರ್ ಅಲ್ಲ.. ಖಾಸಗಿ ಆಸ್ತಿನೂ ಅಲ್ಲ ಅಂತಾ ಅರಣ್ಯ ಸಚಿವ ಈಶ್ವರ್ ಖಂಡ್ರೆ ವಾಗ್ದಾಳಿ ನಡೆಸಿದ್ದಾರೆ.. ಭಾರತ್ ಮಾತಾಕಿ ಜೈ ಎಂದು ಅತ್ಯಾಚಾರ ಕೊಲೆ ಮಾಡಿದ್ರೆ, ಅದನ್ನ ಒಪ್ಪಿಕೊಳ್ಳೋದಕ್ಕೆ ಆಗುತ್ತಾ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ..

ಇದನ್ನೂ ಓದಿ-ಕಲ್ಪತರುನಾಡಿನಲ್ಲಿ ಊಸರವಳ್ಳಿ JN-1 ಕೇಕೆ.. ಜಿಲ್ಲಾ ಆರೋಗ್ಯ ಇಲಾಖೆ ಫುಲ್ ಆಕ್ಟಿವ್!

ಇನ್ನು ರಾಮ ಮಂದಿರ ನಿರ್ಮಾಣಕ್ಕೆ ಅಡ್ವಾಣಿ ಕಾರಣ.. ಅವರನ್ನೇ ಬರಬೇಡಿ ಎಂದಿದ್ದಾರೆ.. ಇನ್ನು ಸಿಎಂ ಸಿದ್ದರಾಮಯ್ಯನವ್ರಿಗೆ ಆಹ್ವಾನ ಕೊಡ್ತಾರಾ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಿಡಿ ಕಾರಿದ್ರು.. ರಾಮ ಮಂದಿರ ನಿರ್ಮಾಣಕ್ಕೆ ಹತ್ತು ಲಕ್ಷ ಕೊಟ್ಟಿದ್ದೇನೆ.. ಆಗ ಅವರಿಗೆ ಎಲ್ಲಾರು ನೆನಪು ಆದ್ರು.. ಈಗಿಲ್ಲ ಎಂದ್ರು..

ಇದನ್ನೂ ಓದಿ-ಬಡ್ಡಿ ಸಮೇತ ಠೇವಣಿ ಹಣ ಹಿಂದಿರುಗಿಸದ ಧಾರವಾಡದ ಸಹಕಾರಿ ಸಂಘಕ್ಕೆ ದಂಡ

ನಾನೇ ದೇವಸ್ಥಾನ ಕಟ್ಟಿದೆ ಅನ್ನಇರಬಾರೋ ಅಂತಾ ಆರ್ ಬಿ ತಿಮ್ಮಾಪುರ್ ಆಕ್ರೋಶ ಹೊರಹಾಕಿದ್ರೆ, ಚುನಾವಣೆ ಬಂದಾಗ ಬಿಜೆಪಿಯವರು ಧರ್ಮದ ವಿಚಾರವನ್ನ ಕೈಗೆತ್ತಿಕೊಳ್ತಾರೆ ಎಂದು ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ರು..

ಒಟ್ನಲ್ಲಿ ರಾಮರಾಜ್ಯ ಮಾಡಬೇಕಾದವ್ರು ವ್ಯಾಜ್ಯಕ್ಕಿಳಿದಿರೋದು ದುರ್ದೈವವೇ ಸರಿ.. ರಾಮನ ಹೆಸರಿನಲ್ಲಿ ನಡೆಯುತ್ತಿರೋ ಪಾಲಿಟ್ರಿಕ್ಸ್ ಸದ್ಯಕ್ಕಂತೂ ಇಲ್ಲಿಗೇ ನಿಲ್ಲೋ ಥರ ಕಾಣ್ತಿಲ್ಲ..

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News