ಬೆಳಗಾವಿಯಲ್ಲಿ ಮುಷ್ಕರ ನಿರತ ವೈದ್ಯರ ಜೊತೆ ಸಿಎಂ ಸಭೆ

ಸಚಿವ ರಮೇಶ್ ಕುಮಾರ್ ಜೊತೆಗೆ ಸಿಎಂ ಮತ್ತೊಂದು ‌ಸುತ್ತಿನ ಸಭೆ ನಡೆಸಿದ ನಂತರ ಇದೀಗ ಕೆಪಿಎಂಇ ವಿರೋಧಿಸಿ ಮುಷ್ಕರ ನಡೆಸುತ್ತಿರುವ ವೈದ್ಯರ ಜೊತೆ ಸಭೆ ನಡೆಸುತ್ತಿದ್ದಾರೆ.

Last Updated : Nov 17, 2017, 04:02 PM IST
ಬೆಳಗಾವಿಯಲ್ಲಿ ಮುಷ್ಕರ ನಿರತ ವೈದ್ಯರ ಜೊತೆ ಸಿಎಂ ಸಭೆ title=
File pic

ಬೆಳಗಾವಿ: ಕೆಪಿಎಂಇ ವಿರೋಧಿಸಿ ಮುಷ್ಕರ ನಡೆಸುತ್ತಿರುವ ವೈದ್ಯರ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿಯ ಸುವರ್ಣಸೌಧದಲ್ಲಿ ಸಭೆ ನಡಿಸುತ್ತಿದ್ದಾರೆ.

ವೈದ್ಯರ ಜೊತೆಗೆ ಮಾತುಕತೆ ‌ನಡೆಸುತ್ತಿರುವ ಸಿಎಂ ಕಾಯ್ದೆಯ ಬಗ್ಗೆ ವೈದ್ಯರಿಗೆ ಮನವರಿಕೆ ಮಾಡಲಿದ್ದಾರೆ. ಅಲ್ಲದೆ ವಿಧೇಯಕದಲ್ಲಿರುವ ಕೆಲ ಅಂಶಗಳನ್ನು ಬದಲಾಯಿಸುವ ಕುರಿತು ಸಮಾಲೋಚನೆ ನಡೆಸಲಿದ್ದಾರೆ.

ಸಭೆಯಲ್ಲಿ ಸಚಿವರಾದ ಎಂ.ಬಿ.ಪಾಟೀಲ್, ರಮೇಶ್ ಕುಮಾರ್, ಡಾ. ರವೀಂದ್ರ ಮತ್ತು ತಂಡ ಮತ್ತಿತರರು ಹಾಜರಿದ್ದಾರೆ.

ಒಂದು ಕಡೆ ವೈದ್ಯರು ತಮ್ಮ ಹಠ ಬಿಡುತ್ತಿಲ್ಲ, ಮತ್ತೊಂದೆಡೆ ಸಚಿವರು ತಮ್ಮ ಪ್ರತಿಷ್ಠೆ ಬಿಡುತ್ತಿಲ್ಲ. ಇದರಿಂದಾಗಿ ಇಂದೂ ಸಹ ರಾಜ್ಯದ ವಿವಿದೆಡೆ 15 ಮಂದಿ ಪ್ರಾಣ ಬಲಿಯಾಗಿದೆ. ಹೈಕೋರ್ಟ್ ಸಹ ಆದಷ್ಟು ಬೇಗ ಈ ಮುಷ್ಕರವನ್ನು ಕೊನೆಗೊಳಿಸಲು ಸೂಚಿಸಿದೆ. ಈ ಎಲ್ಲಾ ನಿಟ್ಟಿನಲ್ಲಿ ವೈದ್ಯರ ಜೊತೆ ಸಿಎಂ ನಡೆಸುತ್ತಿರುವ ಸಭೆ ಫಲಕಾರಿಯಾಗುವುದೇ ಎಂಬುದನ್ನು ಕಾದುನೋಡಬೇಕಿದೆ.

Trending News