/kannada/photo-gallery/money-will-rain-into-these-zodiac-sign-as-shukra-dese-232387  ಶುಕ್ರದೆಸೆಯೊಂದಿಗೆ ನನಸಾಗುವುದು ಈ ರಾಶಿಯವರ ಸ್ವಂತ ಮನೆ ಕನಸು !ಹರಿದು ಬರುವುದು ಅಷ್ಟೈಶ್ವರ್ಯ!ಪ್ರಾಪ್ತಿಯಾಗುವುದು ಜೀವನದ ಸರ್ವ ಸುಖ ಶುಕ್ರದೆಸೆಯೊಂದಿಗೆ ನನಸಾಗುವುದು ಈ ರಾಶಿಯವರ ಸ್ವಂತ ಮನೆ ಕನಸು !ಹರಿದು ಬರುವುದು ಅಷ್ಟೈಶ್ವರ್ಯ!ಪ್ರಾಪ್ತಿಯಾಗುವುದು ಜೀವನದ ಸರ್ವ ಸುಖ 232387

ಬೆಂಗಳೂರು : ಸೂಪರ್ ಮಾರುಕಟ್ಟೆಗಳಲ್ಲಿ ಮದ್ಯ ಮಾರಾಟ ಮಾಡುವ ಪ್ರಸ್ತಾವನೆಯನ್ನು ಸಿಎಂ ಸಿದ್ದರಾಮಯ್ಯ ತಿರಸ್ಕರಿಸಿದ್ದಾರೆ. 

ಗೃಹ ಕಚೇರಿ ಕೃಷ್ಣಾದಲ್ಲಿ ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಈ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಾರೆ. ಬೆಂಗಳೂರು ಮಹಾನಗರ, ಜಿಲ್ಲಾ ಕೇಂದ್ರಗಳ ಸೂಪರ್‌ ಮಾರುಕಟ್ಟೆ, ಹೈಪರ್‌ ಮಾರುಕಟ್ಟೆ ಹಾಗೂ ಮಾಲ್‌ಗಳಲ್ಲಿ ಸಿಎಲ್‌-2 (ಎ) ಎಂಬ ಹೊಸ ಸನ್ನದು ಮಂಜೂರು ಮಾಡಬೇಕು.ಕನಿಷ್ಠ 7,500 ಚದರಡಿ ವಿಸ್ತೀರ್ಣವಿರುವ ಮಾಲ್, ಸೂಪರ್‌ ಮಾರುಕಟ್ಟೆಗಳಲ್ಲಿ 400 ಚದರಡಿ ವ್ಯಾಪ್ತಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಮದ್ಯ ಮಳಿಗೆ ಮಾಡಲು ಅನುಮತಿ ನೀಡಲು ಪ್ರಸ್ತಾಪ ಇತ್ತು. 

No description available.

ಇದನ್ನೂ ಓದಿ: ದೇಶಾದ್ಯಂತ HMT ಭೂಮಿ ಒತ್ತುವರಿ ತೆರವಿಗೆ ಕ್ರಮ: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ

ಈ ಸಂಬಂಧ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟವಾಗಿ ಸೂಪರ್ ಮಾರುಕಟ್ಟೆಗಳಲ್ಲಿ ಮದ್ಯ ಮಾರಾಟ ಮಾಡಲು ಪರವಾನಿಗೆ ಕೊಡವುದು ಬೇಡ ಎಂದು ಸೂಚಿಸಿದರು. No description available.

ಪರಿಷ್ಕೃತ ಮದ್ಯ ದರ ಜಾರಿ ಸದ್ಯಕ್ಕಿಲ್ಲ:

ಮದ್ಯದ ಪರಿಷ್ಕೃತ ದರವನ್ನು ಸದ್ಯಕ್ಕೆ ಜಾರಿ ಮಾಡುವುದು ಬೇಡ ಎಂದು ಸಿಎಂ ಸಿದ್ದರಾಮಯ್ಯ ಸಭೆಯಲ್ಲಿ ಸೂಚನೆ ನೀಡಿದ್ದಾರೆ. ಜುಲೈಯಿಂದ ಪರಿಷ್ಕೃತ ಮದ್ಯದ ದರ ಜಾರಿಗೆ ಬರ ಬೇಕಾಗಿತ್ತು. ಆದರೆ ಅದನ್ನು ಸಿಎಂ ನಿರ್ದೇಶನದ ಮೇರೆಗೆ ತಡೆ ಹಿಡಿಯಲಾಗಿತ್ತು. ಶುಕ್ರವಾರ ನಡೆದ ಅಬಕಾರಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಒಂದು ತಿಂಗಳು ಪರಿಷ್ಕೃತ ದರವನ್ನು ಜಾರಿ ಮಾಡುವುದು ಬೇಡ ಎಂದು ಸಿಎಂ ಮತ್ತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆ ಮೇಲೆ ಈ ಸಂಬಂಧ ತೀರ್ಮಾನಿಸೋಣ ಎಂದು ತಿಳಿಸಿದ್ದಾರೆ.No description available.

ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ಹೊಂದಾಣಿಕೆ ರಾಜಕಾರಣ ನಡೆದಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ನಿಗದಿತ ಗುರಿಯಂತೆ ಅಬಕಾರಿ ಆದಾಯ ಸಂಗ್ರಹಿಸುವಂತೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸದ್ಯದ ಆದಾಯ ಸಂಗ್ರಹದ ಸ್ಥಿತಿಗತಿ ಅವಲೋಕಿಸಿದ ಸಿಎಂ ಅಬಕಾರಿ ಆದಾಯ ನಿಗದಿತ ಗುರಿ ಮುಟ್ಟುವಂತೆ ಸೂಚಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Section: 
English Title: 
CM breaks proposal to sell liquor in supermarkets
News Source: 
Home Title: 

ಸೂಪರ್ ಮಾರ್ಕೆಟ್‌ ಗಳಲ್ಲಿ ಮದ್ಯ ಮಾರಾಟಕ್ಕೆ ಪ್ರಸ್ತಾವನೆಗೆ ಸಿಎಂ ಬ್ರೇಕ್

ಸೂಪರ್ ಮಾರ್ಕೆಟ್‌ ಗಳಲ್ಲಿ ಮದ್ಯ ಮಾರಾಟಕ್ಕೆ ಪ್ರಸ್ತಾವನೆಗೆ ಸಿಎಂ ಬ್ರೇಕ್
Yes
Is Blog?: 
No
Tags: 
Facebook Instant Article: 
Yes
Highlights: 

ಮದ್ಯದ ಪರಿಷ್ಕೃತ ದರವನ್ನು ಸದ್ಯಕ್ಕೆ ಜಾರಿ ಮಾಡುವುದು ಬೇಡ ಎಂದು ಸಿಎಂ ಸಿದ್ದರಾಮಯ್ಯ ಸಭೆಯಲ್ಲಿ ಸೂಚನೆ ನೀಡಿದ್ದಾರೆ

ಜುಲೈಯಿಂದ ಪರಿಷ್ಕೃತ ಮದ್ಯದ ದರ ಜಾರಿಗೆ ಬರ ಬೇಕಾಗಿತ್ತು

ಆದರೆ ಅದನ್ನು ಸಿಎಂ ನಿರ್ದೇಶನದ ಮೇರೆಗೆ ತಡೆ ಹಿಡಿಯಲಾಗಿತ್ತು

Mobile Title: 
ಸೂಪರ್ ಮಾರ್ಕೆಟ್‌ ಗಳಲ್ಲಿ ಮದ್ಯ ಮಾರಾಟಕ್ಕೆ ಪ್ರಸ್ತಾವನೆಗೆ ಸಿಎಂ ಬ್ರೇಕ್
Manjunath N
RACHAPPA SUTTUR
Publish Later: 
No
Publish At: 
Friday, July 12, 2024 - 21:35
Created By: 
Manjunath Naragund
Updated By: 
Manjunath Naragund
Published By: 
Manjunath Naragund
Request Count: 
1
Is Breaking News: 
No
Word Count: 
234