ಬೆಂಗಳೂರು: ಬೆಂಗಳೂರಿನ ಆತ್ಮಾನಂದ ಕಾಲೋನಿಯ ಫ್ಲಾಟ್ನಲ್ಲಿ ಬರೊಬ್ಬರಿ 23 ಬಾಕ್ಸ್ಗಳಲ್ಲಿ 500 ರೂ. ಮುಖಬೆಲೆಯ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ. ಈ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿರುವ ಬಿಜೆಪಿ, ಸಿಎಂ ಸಿದ್ದರಾಮಯ್ಯರಿಗೆ ಕಲೆಕ್ಷನ್ ಮಾಸ್ಟರ್ ಬಿರುದು ನೀಡಿ ಟೀಕಿಸಿದೆ.
‘ರಾಜ್ಯದ ಕಾಂಗ್ರೆಸ್ ಪಕ್ಷಕ್ಕೆ ಪಂಚ ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಕೊಟ್ಟಿರುವ ಮೊದಲನೇ ಹಂತದ ₹1000 ಕೋಟಿ ಟಾರ್ಗೆಟ್ ಯಾವ ರಾಜ್ಯಕ್ಕೆ ಎಷ್ಟು? ತೆಲಂಗಾಣ ಕಾಂಗ್ರೆಸ್ಗೆ ₹300 ಕೋಟಿ, ಮಿಜೋರಾಂ ಕಾಂಗ್ರೆಸ್ಗೆ ₹100 ಕೋಟಿ, ಛತ್ತಿಸ್ಗಢ ಕಾಂಗ್ರೆಸ್ಗೆ ₹200 ಕೋಟಿ, ರಾಜಸ್ಥಾನ ಕಾಂಗ್ರೆಸ್ಗೆ ₹200 ಕೋಟಿ ಮತ್ತು ಮಧ್ಯಪ್ರದೇಶ ಕಾಂಗ್ರೆಸ್ಗೆ ₹200 ಕೋಟಿ. ಕಮಿಷನ್, ಕಲೆಕ್ಷನ್ ಮೂಲಕ ಸಾವಿರ ಕೋಟಿ ಟಾರ್ಗೆಟ್ ಮಾಡಿ ಸಂಗ್ರಹಿಸುತ್ತಿರುವ ಕಾಂಗ್ರೆಸ್ ಹಣ ಹಂಚುವ ಮುನ್ನವೇ ಸಿಕ್ಕಿ ಬಿದ್ದಿದೆ’ ಎಂದು ಬಿಜೆಪಿ ಕುಟುಕಿದೆ.
Karnataka CM - Karnataka Collection Master. pic.twitter.com/yEB5ekdtNo
— BJP Karnataka (@BJP4Karnataka) October 16, 2023
ಇದನ್ನೂ ಓದಿ: ಐಟಿ ದಾಳಿಯಲ್ಲಿ ಸಿಕ್ಕಿದ್ದು SST & YST ಟ್ಯಾಕ್ಸ್ ಹಣ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಹೆಚ್ಡಿಕೆ
‘25 ಲಕ್ಷ ರೂ. ಕೊಡ್ಲೇಬೇಕು ಅಬಕಾರಿ ನೀತಿ’, ಅಧಿಕಾರಕ್ಕೆ ಬಂದ ಒಂದೇ ವಾರದಲ್ಲಿ ಕೋಟಿ ಕೋಟಿ ರೂ.ಗೆ ಅಬಕಾರಿ ಹುದ್ದೆಗಳನ್ನು ಸೇಲ್ಗೆ ಇಟ್ಟಿದ್ದ ಲೂಟಿಕೋರ ಕಾಂಗ್ರೆಸ್ ಸರ್ಕಾರ, ಅಬಕಾರಿ ಇಲಾಖೆಯನ್ನು ಭ್ರಷ್ಟಾಚಾರದ ಹೆಬ್ಬಾಗಿಲು ಮಾಡಿಕೊಂಡಿದೆ. ಲೈಸೆನ್ಸ್ ಟ್ರಾನ್ಸ್ಫರ್, ಲೈಸೆನ್ಸ್ ಶಿಫ್ಟಿಂಗ್ಗೆ ಲಕ್ಷ ಲಕ್ಷ ಹಣಕ್ಕೆ ಅಧಿಕಾರಿಗಳು ರಾಜಾರೋಷವಾಗಿ ‘ಕೈ’ ಚಾಚುತ್ತಿರುವುದು #ATMSarkaraಕ್ಕಾಗಿಯೇ. ರಾಜ್ಯದಲ್ಲಿ ಈ ಪರಿ ಭ್ರಷ್ಟಾಚಾರವನ್ನು ನೋಡಿದರೆ, ನೀವು ತಿನ್ನಿ ನಮಗೂ ಕೊಡಿ ಎನ್ನುವ ಅನಧಿಕೃತ ಆದೇಶವನ್ನು ಖುದ್ದು ಸಿಎಂ ಸಿದ್ದರಾಮಯ್ಯನವರೇ ಹೊರಡಿಸಿದಂತಿದೆ’ ಎಂದು ಬಿಜೆಪಿ ಕುಟುಕಿದೆ.
ರಾಜ್ಯದ @INCKarnataka ಕ್ಕೆ ಪಂಚ ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಕೊಟ್ಟಿರುವ ಮೊದಲನೇ ಹಂತದ ₹1000 ಕೋಟಿ ಟಾರ್ಗೆಟ್ ಯಾವ ರಾಜ್ಯಕ್ಕೆ ಎಷ್ಟು?
✔ ತೆಲಂಗಾಣ ಕಾಂಗ್ರೆಸ್ಗೆ ₹300 ಕೋಟಿ
✔ ಮಿಜೋರಾಂ ಕಾಂಗ್ರೆಸ್ಗೆ ₹100 ಕೋಟಿ
✔ ಛತ್ತಿಸ್ಗಢ ಕಾಂಗ್ರೆಸ್ಗೆ ₹200 ಕೋಟಿ
✔ ರಾಜಸ್ಥಾನ ಕಾಂಗ್ರೆಸ್ಗೆ ₹200 ಕೋಟಿ
✔…— BJP Karnataka (@BJP4Karnataka) October 16, 2023
‘ಪಂಚ ರಾಜ್ಯಗಳ ಚುನಾವಣೆಗೆ ಫಂಡಿಂಗ್ ಮಾಡಲು, ರಾಜ್ಯದ ಇನ್ನೆಷ್ಟು ಜನರನ್ನು ಬಲಿ ಕೊಡುತ್ತಿರಾ ಕಾಂಗ್ರೆಸ್? ರಾಜ್ಯದ ರೈತರಿಗೆ ಮರಣಶಾಸನವಾಗಿದ್ದ ನಿಮ್ಮ ದುರಾಡಳಿತ, ಈಗ ಗುತ್ತಿಗೆದಾರರಿಗೆ ಸಹ ಮರಣಶಾಸನವಾಗುತ್ತಿದ್ದು ನಾಚಿಕೆಗೇಡು. ಗುತ್ತಿಗೆದಾರರು ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವಷ್ಟರ ಮಟ್ಟಿಗೆ ನಿಮ್ಮ ಕಮಿಷನ್ ದಾಹ ಮಿತಿ ಮೀರಿರುವುದು ಈ ರಾಜ್ಯದ ದುರಂತ’ವೆಂದು ಬಿಜೆಪಿ ಟೀಕಿಸಿದೆ.
ಪಂಚ ರಾಜ್ಯಗಳ ಚುನಾವಣೆಗೆ ಫಂಡಿಂಗ್ ಮಾಡಲು, ರಾಜ್ಯದ ಇನ್ನೆಷ್ಟು ಜನರನ್ನು ಬಲಿ ಕೊಡುತ್ತಿರಾ @INCKarnataka...??
ರಾಜ್ಯದ ರೈತರಿಗೆ ಮರಣಶಾಸನವಾಗಿದ್ದ ನಿಮ್ಮ ದುರಾಡಳಿತ, ಈಗ ಗುತ್ತಿಗೆದಾರರಿಗೆ ಸಹ ಮರಣಶಾಸನವಾಗುತ್ತಿದ್ದು ನಾಚಿಕೆಗೇಡು.
ಗುತ್ತಿಗೆದಾರರು ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವಷ್ಟರ ಮಟ್ಟಿಗೆ ನಿಮ್ಮ ಕಮಿಷನ್ ದಾಹ ಮಿತಿ… pic.twitter.com/yEMrdOWcDM
— BJP Karnataka (@BJP4Karnataka) October 16, 2023
ಇದನ್ನೂ ಓದಿ: OMG: ಟಿವಿ ರಿಮೋಟ್ ಗಲಾಟೆ ಸಾವಿನಲ್ಲಿ ಅಂತ್ಯ..!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಸಿಎಂ ಸಿದ್ದರಾಮಯ್ಯಗೆ ಕಲೆಕ್ಷನ್ ಮಾಸ್ಟರ್ ಬಿರುದು ನೀಡಿದ ಬಿಜೆಪಿ!
ಬೆಂಗಳೂರಿನ ಫ್ಲಾಟ್ ನಲ್ಲಿ ಕಂತೆ ಕಂತೆ ನೋಟುಗಳ ಪತ್ತೆ ಪ್ರಕರಣ
ಕಮಿಷನ್ & ಕಲೆಕ್ಷನ್ ಮೂಲಕ ಸಾವಿರ ಕೋಟಿ ಟಾರ್ಗೆಟ್ ಮಾಡಿ ಸಂಗ್ರಹಿಸುತ್ತಿದ್ದ ಕಾಂಗ್ರೆಸ್
ಪಂಚ ರಾಜ್ಯಗಳ ಚುನಾವಣೆಗೆ ಹಣ ಹಂಚುವ ಮುನ್ನವೇ ಸಿಕ್ಕಿ ಬಿದ್ದ ಕಾಂಗ್ರೆಸ್ ಎಂದು ಬಿಜೆಪಿ ಟೀಕೆ